ನೋಟು ನಿಷೇಧಕ್ಕೆ 5 ವರ್ಷ; ಮಂಗಳೂರಲ್ಲಿ ಒಂದು ಮುಕ್ಕಾಲು ಕೋಟಿ ಪತ್ತೆ
ಮಂಗಳೂರು, ನವೆಂಬರ್ 19; 500 ಮತ್ತು 1 ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು 5 ವರ್ಷ ಕಳೆದಿದೆ. ಆದರೆ ಇಷ್ಟು ವರ್ಷ ಆದರೂ ಸಹ ಇದೀಗ ಬೃಹತ್ ಮೊತ್ತದ ಅಮಾನ್ಯೀಕರಣಗೊಂಡ ನಗದು ಪತ್ತೆಯಾಗಿದೆ. ಈ ನೋಟಿನ ಕಂತೆಗಳಿಗೆ ಬ್ಯಾಂಕ್ನಲ್ಲಿ ವ್ಯಾಲ್ಯೂ ಇದೆ ಎಂದು ಹೇಳಿ ವಂಚಿಸಲು ರೆಡಿಯಾಗಿದ್ದ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ.
2016ರ ನವೆಂಬರ್ 8ರಂದು 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳನ್ನು ಭಾರತ ಸರ್ಕಾರ ಅಮಾನ್ಯೀಕರಣಗೊಳಿಸಿತು. ಬಳಿಕ ಒಂದಷ್ಟು ಸಮಯದಲ್ಲಿ ಹಳೆಯ ನೋಟು ಬದಲಾಯಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು.
ಆದರೆ ಬಳಿಕ ಈ ಹಳೆಯ 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ಘೋಷಿಸಲಾಯಿತು. ಆದರೆ ಈ ಪ್ರಕ್ರಿಯೆ ನಡೆದು 5 ವರ್ಷ ಆದರೂ ಸಹ ಕಡಲನಗರಿ ಮಂಗಳೂರಿನಲ್ಲಿ ನಿಷೇಧಗೊಂಡ 1 ಕೋಟಿ 92 ಲಕ್ಷದ 50 ಸಾವಿರ ಮೌಲ್ಯದ 500 ಹಾಗೂ 1000 ಮುಖಬೆಲೆಯ ನಗದು ಪತ್ತೆಯಾಗಿದೆ.

ಈ ನೋಟುಗಳನ್ನು ಇನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಕಣ್ಣೂರಿನ ಮೋರುಗುಡ್ಡೆ ನಿವಾಸಿ ಜುಬೈರ್ ಹಮ್ಮಬ್ಬ, ಮಂಗಳೂರಿನ ಪಡೀಲ್ನ ವೀರನಗರ ನಿವಾಸಿ ದೀಪಕ್ ಕುಮಾರ್, ಮಂಗಳೂರಿನ ಬಜ್ಪೆ ನಿವಾಸಿ ಅಬ್ದುಲ್ ನಾಸೀರ್ ಎಂದು ಗುರುತಿಸಲಾಗಿದೆ.
ಬಂಧಿತರನ್ನು ಪ್ರಾಥಮಿಕ ವಿಚಾರಣೆ ನಡೆಸಿದಾಗ ಚಿತ್ರದುರ್ಗ, ಶಿವಮೊಗ್ಗದಿಂದ ಈ ಹಣವನ್ನು ತಂದಿರುವುದಾಗಿ ಹೇಳಿದ್ದಾರೆ. ಈ ಹಣವನ್ನು ಮಂಗಳೂರು ಮೂಲದ ಕೆಲ ಮಂದಿಗೆ ನೀಡುವ ಪ್ಲ್ಯಾನ್ ಸಹ ಮಾಡಿಕೊಂಡಿದ್ದರು.
ವಿಶೇಷ ಅವಕಾಶದ ಮೂಲಕ ಬ್ಯಾನ್ ಆದ ಈ ನೋಟುಗಳನ್ನು ಬ್ಯಾಂಕ್ಗಳಿಗೆ ನೀಡಿದರೆ ಇದರ 50 ಶೇಕಡಾ ವ್ಯಾಲ್ಯೂ ಹಣ ಕೊಡ್ತಾರೆ. ನಾವು ಒಂದೇ ಸಾರಿ ಇಷ್ಟು ಹಣ ಬ್ಯಾಂಕ್ಗೆ ನೀಡಿದರೆ ಬ್ಯಾಂಕ್ ಅಧಿಕಾರಿಗಳಿಗೆ ಸಂಶಯ ಬರುತ್ತದೆ.
ಹೀಗಾಗಿ ಇದರ 20 ಶೇಕಡ ಮೌಲ್ಯದ ಹಣವನ್ನು ನಮಗೆ ಕೊಟ್ಟರೆ ಈ ನೋಟುಗಳನ್ನು ನಿಮಗೆ ನೀಡುವುದಾಗಿ ಜನರನ್ನು ವಂಚನೆ ಮಾಡುವ ಪ್ಲ್ಯಾನ್ ಅನ್ನು ಈ ತಂಡ ಮಾಡಿಕೊಂಡಿತ್ತು. ಆದರೆ ಈ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದರಿಂದ ಪೊಲೀಸರು ವಾಹನ, ನಗದು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.
ಗುರುವಾರ ರಾತ್ರಿ ಪೊಲೀಸರು ತಪಾಸಣಾ ನಿರತರಾಗಿದ್ದಾಗ ಕೆಎ 03, ಎಮ್-ಪಿ-0300 ನಂಬರ್ನ ಇನ್ನೋವಾ ಕಾರ್ ಅನ್ನು ಪರಿಶೀಲಿಸಿದಾಗ ಆರೋಪಿಗಳ ಗೊಂದಲಕ್ಕೊಳಗಾಗಿದ್ದರಿಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಕಾರಿನಲ್ಲಿ ನೋಟಿನ ಕಂತೆಗಳು ಪತ್ತೆಯಾಗಿದೆ.
ಅಮಾನ್ಯೀಕರಣಗೊಂಡ ಈ ನೋಟುಗಳನ್ನು ಪಡೆದರೆ ಅಥವಾ ವರ್ಗಾವಣೆ ಮಾಡಿದರೆ ಅಂಥವರಿಗೆ ಶಿಕ್ಷೆ ನೀಡುವುದಕ್ಕೆಂದೆ 2017ರಲ್ಲಿ ಕಾಯಿದೆಯೊಂದನ್ನು ತರಲಾಗಿದೆ. ಇದರ ಪ್ರಕಾರ ವಶಪಡಿಸಿಕೊಂಡ ಮೊತ್ತದ ಐದು ಪಟ್ಟು ಹೆಚ್ಚು ದಂಡ ವಿಧಿಸುವ ಅವಕಾಶವಿದೆ.
ಈ ಪ್ರಕರಣದಲ್ಲಿ 9 ಕೋಟಿ 60 ಲಕ್ಷ ದಂಡ ವಿಧಿಸುವ ಅವಕಾಶವು ಇದೆ. ಒಟ್ಟಿನಲ್ಲಿ ಅಮಾನ್ಯೀಕರಣಗೊಂಡ ನೋಟುಗಳಿಗೆ ಯಾವುದೇ ವ್ಯಾಲ್ಯೂ ಇಲ್ಲ ಎಂಬುದನ್ನು ಜನ ತಿಳಿದುಕೊಂಡು ಎಚ್ಚರಿಕೆಯಿಂದ ಇರಬೇಕಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications