Get Updates
Get notified of breaking news, exclusive insights, and must-see stories!

ಬಿಜೆಪಿಗೆ ಟಾರ್ಗೆಟ್ ಮಂಡ್ಯ: ಅಭಿಷೇಕ್ ಅಂಬರೀಷ್ ಮುಂಚೂಣಿಗೆ ಬರ್ತಾರಾ?

ಬೆಂಗಳೂರು, ಮೇ 7: ಮೈಸೂರು ಸೀಮೆ ಭಾಗದಲ್ಲಿ ತನ್ನ ಬಲವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿಗೆ ಪ್ರಮುಖವಾಗಿ ಅಡ್ಡವಾಗಿರುವ ಜಿಲ್ಲೆಗಳಲ್ಲಿ ಮಂಡ್ಯ ಒಂದು. ಇಲ್ಲಿ ಕೆಲವಾರು ಬಾರಿ ಬಿಜೆಪಿ ಅಲ್ಲಲ್ಲಿ ಗೆದ್ದಿದೆಯಾದರೂ ಗಟ್ಟಿ ನೆಲೆ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಒಕ್ಕಲಿಗರ ಪ್ರಾಬಲ್ಯದ ಮಂಡ್ಯದಲ್ಲಿ ಬಿಜೆಪಿ ಬಲ ಇತ್ತೀಚೆಗೆ ಹೆಚ್ಚುತ್ತಿರುವುದು ಹೌದು. ಈಗ ಮಂಡ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದೊಳಗಿರುವ ಅಸಮಾಧಾನಿತರಲ್ಲಿ ಕೆಲವರು ಬಿಜೆಪಿಗೆ ಸೇರಲು ಮುಂದಾಗಿದ್ದಾರೆ. ಲಕ್ಷ್ಮೀ ಅಶ್ವಿನ್ ಗೌಡ, ಎಸ್.ಟಿ. ಜಯರಾಂ ಮೊದಲಾದವರು ಕೇಸರಿ ಪಾಳಯಕ್ಕೆ ಬರುವ ಇರಾದೆಯಲ್ಲಿದ್ದಾರೆ. ಲಕ್ಷ್ಮೀ ಅಶ್ವಿನ್ ಗೌಡ ಮಂಡ್ಯದಲ್ಲಿ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆದರೆ, ನಿಖಿಲ್ ಕುಮಾರಸ್ವಾಮಿ ನಿಂತಿದ್ದರಿಂದ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಆ ಒಂದು ಅಸಮಾಧಾನ ಅವರಿಗಿದೆ. ಬಿಜೆಪಿ ಟಿಕೆಟ್ ಕೊಡುವುದನ್ನು ಖಚಿತಪಡಿಸಿಕೊಂಡ ಬಳಿಕ ಅವರು ಪಕ್ಷ ಸೇರುವ ಸಾಧ್ಯತೆ ಇದೆ.

Recommended Video

      ಮಂಡ್ಯ ಮೇಲೆ ಕಣ್ಣಿಟ್ಟ ಬಿಜೆಪಿ: ಸುಮಲತಾ ಮಗನಿಗೆ ಮಣೆ ಹಾಕಲು ರೆಡಿಯಾದ ಬಿಜೆಪಿ | Oneindia Kannada

      ಇಂದು ರಾಜಧಾನಿ ಬೆಂಗಳೂರಿನಲ್ಲಿ ಸಂಜೆ 'ಪಕ್ಷ ಸೇರ್ಪಡೆ' ಕಾರ್ಯಕ್ರಮವಿದ್ದು ಹಲವು ಅಚ್ಚರಿ ಹೆಸರುಗಳು ಬಿಜೆಪಿಗೆ ಬರಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ಇತರ ಕೆಲ ಸಚಿವರು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ವರ್ತೂರು ಪ್ರಕಾಶ್ ಈ ಕಾರ್ಯಕ್ರಮದ ಮೂಲಕ ಬಿಜೆಪಿ ಸೇರಲಿದ್ದಾರೆ.

      ಮಂಡ್ಯದಲ್ಲಿ ಬಿಜೆಪಿ ಸಮಾವೇಶ:
      ಬಿಜೆಪಿ ಈಗ ಮಂಡ್ಯದತ್ತ ಹೆಚ್ಚು ಗಮನ ಕೊಡುತ್ತಿರುವುದು ಇತ್ತೀಚಿನ ಬೆಳವಣಿಗೆ ಹಾಗು ನಾಯಕರ ಹೇಳಿಕೆಗಳಿಂದ ತಿಳಿದುಬರುತ್ತಿದೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಬಸವರಾಜ ಬೊಮ್ಮಾಯಿ ಮಂಡ್ಯದಲ್ಲಿ ಬಿಜೆಪಿ ಸಮಾವೇಶ ನಡೆಸುವ ಸಾಧ್ಯತೆ ಬಗ್ಗೆ ತಿಳಿಸಿದರು. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮಂಡ್ಯದಲ್ಲಿ ಬಿಜೆಪಿ ಪಕ್ಷದ ಸಮಾವೇಶ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

      Will Abhishek Ambareesh lead BJP in Mandya, here is latest updates

      ಇದರ ಜೊತೆಗೆ ಅವರು ಮಂಡ್ಯದಲ್ಲಿ ಯುವ ನಾಯಕತ್ವದ ವಿಚಾರ ಪ್ರಸ್ತಾಪಿಸಿ ಕುತೂಹಲ ಮೂಡಿಸಿದರು. "ದಕ್ಷಿಣ ಕರ್ನಾಟಕದಲ್ಲಿ, ಅದರಲ್ಲೂ ಮಂಡ್ಯದಲ್ಲಿ ಸಾರ್ವಜನಿಕರು ಮತ್ತು ಯುವಕರು ಬಿಜೆಪಿ ಸೇರಲು ಒಲವು ತೋರುತ್ತಿದ್ಧಾರೆ. ಹೀಗಾಗಿ, ಮಂಡ್ಯದಲ್ಲಿ ಹೊಸ ಯುವ ನಾಯಕತ್ವ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬಿಜೆಪಿಯ ಪರವಾಗಿ ಮಂಡ್ಯದಲ್ಲಿ ಬಹಳ ದೊಡ್ಡ ಶಕ್ತಿಯ ಅಲೆ ಕಾಣುತ್ತಿದೆ" ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.

      ಮಂಡ್ಯಕ್ಕೆ ಯುವ ನಾಯಕತ್ವ ಅಭಿಷೇಕ್ ಅವರದ್ದಾ?
      ಈಗ್ಗೆ ಕೆಲವಾರು ದಿನಗಳಿಂದ ಅಭಿಷೇಕ್ ಮತ್ತವರ ತಾಯಿ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಬಹಳ ದಟ್ಟವಾಗಿ ಕೇಳಿಬರುತ್ತಿದೆ. ಸುಮಲತಾ ಕೂಡ ಈ ಸುದ್ದಿಯನ್ನ ಅಲ್ಲಗಳೆದಿಲ್ಲ. ಮೂಲಗಳ ಪ್ರಕಾರ, ಮಂಡ್ಯದ ಮದ್ದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಅಭಿಷೇಕ್‌ಗೆ ನೀಡುವುದಾದರೆ ಬಿಜೆಪಿ ಸೇರುತ್ತೇನೆ ಎಂದು ಸುಮಲತಾ ಹೇಳಿರುವುದು ತಿಳಿದುಬಂದಿದೆ. ಆದರೆ, ಸುಮಲತಾ ಅಧಿಕೃತವಾಗಿ ನೀಡಿದ ಮಾಹಿತಿ ಪ್ರಕಾರ, ಜನರ ಬಳಿ ಅಭಿಪ್ರಾಯ ಕೇಳಿ ಬಿಜೆಪಿ ಸೇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದ್ದಾರೆ.

      Will Abhishek Ambareesh lead BJP in Mandya, here is latest updates

      ಒಂದು ವೇಳೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾದರೆ ಮಂಡ್ಯದ ಬಿಜೆಪಿ ನಾಯಕತವನ್ನು ಮಗ ಅಭಿಷೇಕ್‌ಗೆ ವಹಿಸುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಬಿಜೆಪಿಗೆ ಯುವ ನಾಯಕತ್ವ ಬರಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದು ಅಭಿಷೇಕ್‌ರನ್ನ ಮನಸ್ಸಲ್ಲಿಟ್ಟುಕೊಂಡೇ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

      (ಒನ್ಇಂಡಿಯಾ ಸುದ್ದಿ)

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+