ಮಂಡ್ಯದಲ್ಲಿ ಮಳೆಗೆ ಗೋಡೆ ಕುಸಿದು ಆರು ಮೇಕೆ ಸಾವು
ಮಂಡ್ಯ, ಅಕ್ಟೋಬರ್ 6: ಗುರುವಾರ ಸುರಿದ ಭಾರೀ ಮಳೆಯಿಂದ ಮನೆಯೊಂದರ ಗೋಡೆ ಕುಸಿದು ಆರು ಮೇಕೆಗಳು ಸಾವನ್ನಪ್ಪಿ ಹತ್ತು ಮೇಕೆಗಳು ಗಂಭೀರ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಅಪ್ಪಾಜಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಮಣ್ಣ ಅವರು ಮನೆಯಲ್ಲಿ 16 ಮೇಕೆಗಳಿದ್ದು, ಗೋಡೆ ಕುಸಿದು ಬಿದ್ದ ಪರಿಣಾಮ ಆ ಪೈಕಿ 6 ಮೇಕೆಗಳು ಮೃತಪಟ್ಟಿದ್ದು, 5 ಮೇಕೆಗಳ ಕಾಲು ಮುರಿದಿದೆ. 5 ಮೇಕೆಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ.
ಶ್ರೀರಂಗಪಟ್ಟಣ ಬಳಿ ಮೊಸಳೆ ಮರಿ ಪ್ರತ್ಯಕ್ಷ

ಇನ್ನು ಮಳೆ ಸುರಿದ ಹಿನ್ನಲೆಯಲ್ಲಿ ಕೆರೆಕಟ್ಟೆಗಳು ತುಂಬಿದ್ದು ನದಿಯಲ್ಲಿದ್ದ ಮೊಸಳೆಗಳು ಇದೀಗ ಆಹಾರ ಹುಡುಕಿಕೊಂಡು ಬಂದು ಕೆರೆ ಕಟ್ಟೆಗಳಲ್ಲಿ ಆಶ್ರಯ ಪಡೆಯ ತೊಡಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಮೀನಿನ ಹೊಂಡವೊಂದರಲ್ಲಿ ಮೊಸಳೆ ಮರಿ ಪ್ರತ್ಯಕ್ಷವಾಗಿದೆ.
ಕಾರೇಕುರ ಗ್ರಾಮದ ಬಸವನಗುಡಿಯ ಪಕ್ಕದಲ್ಲಿ ಸುರೇಶ್ ಎಂಬುವವರು ಮೀನಿನ ಹೊಂಡ ನಿರ್ಮಾಣ ಮಾಡಿ ಈ ಹೊಂಡಕ್ಕೆ ಹಳ್ಳದಿಂದ ಹರಿಯುವ ನೀರಿನ ಸಂಪರ್ಕದ ವ್ಯವಸ್ಥೆ ಮಾಡಿದ್ದರು. ಹಳ್ಳದ ಹರಿವು ನೇರವಾಗಿ ಮೀನಿನ ಹೊಂಡವನ್ನು ಸೇರುತ್ತಿತ್ತು. ಈ ಹಳ್ಳದ ನೀರಿನಲ್ಲಿ ಆಹಾರ ಹುಡುಕಿಕೊಂಡು ಬಂದ ಮೊಸಳೆ ಮರಿ ಮೀನಿನ ಹೊಂಡವನ್ನು ಸೇರಿತ್ತು.

ಇಲ್ಲಿಯೇ ಸಿಕ್ಕ ಮೀನುಗಳನ್ನು ತಿನ್ನುತ್ತಾ ನೀರಿನಲ್ಲಿ ಅಡ್ಡಾಡಿಕೊಂಡಿತ್ತು. ಸುಮಾರು 2 ಅಡಿ ಉದ್ದದ ಒಂದೂವರೆ ಕೆಜಿ ತೂಕದ ಈ ಮೊಸಳೆ ಮರಿ ಇಲ್ಲಿಯವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಗುರುವಾರ ಬೆಳಗ್ಗೆ ಮೀನಿನ ಹೊಂಡದ ಬಳಿ ತೆರಳಿದ್ದ ಸುರೇಶ್ ಹಾಗೂ ಅವರ ಬಾವಮೈದ ಮಹದೇವ ಪ್ರಸಾದ್ ಅವರಿಗೆ ನೀರಿನಲ್ಲಿ ಏನೋ ಅಡ್ಡಾಡಿದಂತೆ ಕಂಡಿದೆ. ಇಷ್ಟು ದೊಡ್ಡ ಮೀನು ಇಲ್ಲಿಗೆ ಹೇಗೆ ಬಂತು ಎಂಬ ಕುತೂಹಲದಿಂದ ನೋಡಲು ಹೋಗಿದ್ದು ಹತ್ತಿರದಿಂದ ನೋಡಿದಾಗ ಅದು ಮೊಸಳೆ ಮರಿ ಎಂಬುದು ಖಚಿತವಾಗಿತ್ತು.
ಕೂಡಲೇ ಇಬ್ಬರೂ ಸೇರಿ ಆ ಮರಿಯನ್ನು ಜಾಗ್ರತೆಯಿಂದ ಹಿಡಿದು ಹೊಂಡದಿಂದ ಹೊರಕ್ಕೆ ತೆಗೆದಿದ್ದು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್












Click it and Unblock the Notifications