ಅಮೆರಿಕ ಮಿತ್ರ ದೇಶಗಳ ನೆರವು ಕೇಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ | Donald Trump
ಅಮೆರಿಕ ಎಂಬ ದೊಡ್ಡ ದೇಶಕ್ಕೆ ಒಂದಾದ ನಂತರ ಒಂದು ದೊಡ್ಡ ಹಿನ್ನಡೆ ಎದುರಾಗುತ್ತಿದ್ದು, ಈ ಪೈಕಿ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಮಟ್ಟಿಗೆ ಸೇನಾ ಕಾರ್ಯಾಚರಣೆ ಶುರು ಮಾಡಿದ್ದ ಅಮೆರಿಕ ಈಗ ನರಳುವಂತೆ ಆಗಿದೆ. ಹೇಗಾದರೂ ಮಾಡಿ ಇರಾನ್ ಎಂಬ ದೇಶವನ್ನ ಸೋಲಿಸಿ, ಮಧ್ಯಪ್ರಾಚ್ಯ ಭಾಗದ ತಮ್ಮ ಶತ್ರುಗಳ ಹುಟ್ಟಡಗಿಸಿ ಪವರ್ ತಮ್ಮ ಕೈಗೆ ತೆಗೆದುಕೊಳ್ಳಬೇಕು ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ಲಾನ್ ಉಲ್ಟಾ ಹೊಡೆದಿದೆ. ಅಮೆರಿಕ ಹಾಗೂ ಇಸ್ರೇಲ್ ಸೇರಿಕೊಂಡು ಇರಾನ್ ಮೇಲೆ ದಾಳಿ ಮಾಡಿದರೆ ಕೆಲವೇ ದಿನಗಳಲ್ಲಿ ಇರಾನ್ ಸೋಲು ಒಪ್ಪಿಕೊಳ್ಳಬಹುದು ಎಂಬ ನಿರೀಕ್ಷೆ ಇದೀಗ ಹುಸಿಯಾಗಿದೆ. ಇಂತಹ ಸಮಯದಲ್ಲೇ ಅಮೆರಿಕ ಮಿತ್ರ ದೇಶಗಳ ನೆರವು ಕೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ ಎದುರಾಗಿದೆ.
17 ದಿನಗಳ ಹಿಂದೆ ದಿಢೀರ್ ಅಂತಾ ಇರಾನ್ ವಿರುದ್ಧ ಯುದ್ಧ ಆರಂಭ ಮಾಡಿದ್ದ ಇಸ್ರೇಲ್ ಹಾಗೂ ಅಮೆರಿಕ ಈಗಾಗಲೇ ಇರಾನ್ ದೇಶದ ದೊಡ್ಡ ದೊಡ್ಡ ನಾಯಕರ ತಲೆ ಉರುಳಿಸಿದೆ. ಅದರಲ್ಲೂ ಈ ಪೈಕಿ ಖುದ್ದಾಗಿ ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಕಥೆ ಕೂಡ ಮುಗಿದು ಹೋಗಿದೆ. ಇನ್ನೇನು ಇಡೀ ಇರಾನ್ ದೇಶ ಸೈಲೆಂಟ್ ಆಗಲಿದ್ದು, ಅಮೆರಿಕ ಕೈವಶ ಆಗಲಿದೆ ಹಾಗೂ ಇಸ್ರೇಲ್ ದೇಶವನ್ನು ಮಧ್ಯಪ್ರಾಚ್ಯ ಭಾಗದಲ್ಲಿ ಇನ್ನುಮುಂದೆ ಯಾರೂ ಎದುರು ಹಾಕಿಕೊಳ್ಳಲ್ಲ ಎಂಬ ಲೆಕ್ಕಾಚಾರ ಕೂಡ ಉಲ್ಟಾ ಹೊಡೆದಿದೆ. ಇರಾನ್ ಸೋಲಿಸಲು ಯುದ್ಧ ನೌಕೆ ಕಳುಹಿಸಲು ಟ್ರಂಪ್ ಅವರು ಮಾಡಿರುವ ಮನವಿಗೆ, ಇಲ್ಲ ಎಂಬ ಉತ್ತರ ಕೊಟ್ಟಿದ್ದಾರೆ ಮಿತ್ರ ರಾಷ್ಟ್ರಗಳ ನಾಯಕರು.

ಟ್ರಂಪ್ ಅವರ ಮಾತು ಕೇಳದ ಮಿತ್ರರು
ಅಷ್ಟಕ್ಕೂ ಇರಾನ್ ಸರ್ವಾಧಿಕಾರಿ ಖಮೇನಿ ಸಾವಿನ ನಂತರ ಇರಾನ್ ಪೂರ್ತಿ ಶರಣಾಗುವ ನಿರೀಕ್ಷೆಯಲ್ಲಿ ಅಮೆರಿಕ ಇತ್ತು. ಆದರೆ ಈವರೆಗೆ ಇರಾನ್ ಶರಣಾಗುವುದು ಬಿಡಿ, ಶಾಂತಿ ಮಾತುಕತೆ ನಡೆಸಲು ಕೂಡ ಸಿದ್ಧವಿಲ್ಲ ಎಂಬ ಸಂದೇಶ ಕಳುಹಿಸಿದೆ. ಇದೇ ಸಮಯದಲ್ಲಿ ಅಮೆರಿಕ ದೇಶದ ಮಿತ್ರ ರಾಷ್ಟ್ರಗಳು ಕೂಡ ಈಗ ದಿಢೀರ್ ಕೈಕೊಟ್ಟಿವೆ. ಅಲ್ಲದೆ ಹಾರ್ಮುಜ್ ಜಲಸಂಧಿ ರಕ್ಷಣೆಗಾಗಿ ನೀವು ನಿಮ್ಮ ನಿಮ್ಮ ಯುದ್ಧ ನೌಕೆ ಕಳುಹಿಸಿ ಎಂದು ಅಮೆರಿಕ ಮಿತ್ರ ದೇಶಗಳು ಹಾಗೂ ನ್ಯಾಟೋ ಪಡೆಗಳಿಗೆ ಟ್ರಂಪ್ ಮನವಿಯನ್ನ ಮಾಡಿಕೊಂಡಿದ್ದರು. ಯುರೋಪ್ ಒಕ್ಕೂಟ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಈ ವಿಚಾರದಲ್ಲಿ ಟ್ರಂಪ್ ಅವರು ಮನವಿ ಮಾಡಿದ್ದರು. ಆದರೆ ಅಮೆರಿಕ ಅಧ್ಯಕ್ಷರ ಮನವಿಗೆ ಈಗ ಎಲ್ಲಾ ದೇಶಗಳು ತಿರಸ್ಕಾರದ ಉತ್ತರ ನೀಡಿವೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications