ಬಸ್ ದುರಂತದಲ್ಲಿ ಮಡಿದವರ ಅಂತ್ಯ ಸಂಸ್ಕಾರ: ಮುಗಿಲು ಮುಟ್ಟಿದ ರೋದನ
ಮಂಡ್ಯ, ನವೆಂಬರ್ 25: ಮಂಡ್ಯದ ಪಾಂಡವಪುರದ ಕನಗನಮರಡಿಯಲ್ಲಿ ಶನಿವಾರ ಸಂಭವಿಸಿದ ಬಸ್ ದುರಂತದ ವೇಳೆ ಮೃತಪಟ್ಟವರಲ್ಲಿ ಎಂಟು ಮಂದಿಯನ್ನು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಶನಿವಾರ ಪಂಡವಪುರದಿಂದ ಮಂಡ್ಯಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ 12 ಅಡಿ ಆಳದ ನಾಲೆಗೆ ಉರುಳಿದ್ದು ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 30 ಮಂದಿ ಮೃತಪಟ್ಟಿದ್ದರು. ದುರಸ್ತಿಗೊಳಗಾಗಿದ್ದ ಬಸ್ ಅನ್ನೇ ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅನುಮತಿಸಿದ್ದ ಮಂಡ್ಯ ತಾಲೂಕ್ಕು ಆರ್ಟಿಓ ಅಧಿಕಾರಿಯನ್ನು ಅಮಾನತು ಗೊಳಿಸಲಾಗಿದೆ. ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ಕಾರ್ಯ ನೆರವೇರಿತು. ಈ ವೇಳೆ ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಶನಿವಾರ ನಡೆದ ದುರಂತದಲ್ಲಿ ವದೆ ಸಮುದ್ರದ ಗ್ರಾಮದ 8 ಮಂದಿ ಪ್ರಾಣಕಳೆದುಕೊಂಡಿದ್ದರು. ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.












Click it and Unblock the Notifications