ಕೊಡಗಿನಲ್ಲಿ ಕಾಫಿ ಹೂವು ಅರಳಿದೆ, ಸೆಲ್ಫಿ ತಗೊಳ್ಳೋಣ ಬನ್ನಿ
ಮಡಿಕೇರಿ, ಫೆಬ್ರವರಿ 6: ಕಣ್ಣು ಹಾಯಿಸಿದಲ್ಲೆಲ್ಲ ಹೂವರಳಿ, ಘಮ್ಮೆನ್ನುತ್ತಾ, ಜೇನಿನ ಝೇಂಕಾರದೊಂದಿಗೆ ಎಲ್ಲರನ್ನೂ ಸೆಳೆಯುತ್ತಿರುವ ಕಾಫಿ ಹೂವಿನ ಚೆಲುವನ್ನು ನೋಡಬೇಕೆಂದರೆ ಕೊಡಗಿನತ್ತ ಬರಬೇಕು.
ಹಲವು ದಶಕಗಳ ಬಳಿಕ ಇಡೀ ಜಿಲ್ಲೆಯಲ್ಲಿ ಒಮ್ಮೆಲೆ ಕಾಫಿ ಹೂ ಅರಳಿರುವುದು ಇದೇ ಮೊದಲು. ಕೆಲವು ವರ್ಷಗಳಿಂದ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಾದ್ಯಂತ ಒಮ್ಮೆಲೆ ಮಳೆ ಸುರಿದ ನಿದರ್ಶನಗಳಿಲ್ಲ. ಒಂದೊಂದು ಊರಿನಲ್ಲಿ ಒಂದೊಂದು ರೀತಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುರಿಯುತ್ತಿತ್ತು.[ಕೊಡಗಿನ ಅಂಗನವಾಡಿಗಳಿಗೆ ಹೊಸ ಮೆರಗು!]

ಹೆಚ್ಚಿನ ಜನರು ಮಳೆಯನ್ನು ಕಾಯದೆ ತಮ್ಮ ಕಾಫಿ ಹಣ್ಣಿನ ಕೊಯ್ಲು ಆಗುತ್ತಿದ್ದಂತೆಯೇ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿ ಹೂವರಳಿಸುತ್ತಿದ್ದರು. ಆದರೆ ಈ ಬಾರಿ ಜನವರಿ 27 ಮತ್ತು 28ರಂದು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದೆ. ಕೆಲವರು ಇದನ್ನು ಅಕಾಲಿಕ ಮಳೆ, ಇದರಿಂದ ಕಾಫಿಗೆ ತೊಂದರೆ ಎಂದರು.
ಆದರೆ, ಮಳೆ ಜೋರಾಗಿಯೇ ಸುರಿದಿದ್ದರಿಂದ ಕಾಫಿ ಗಿಡದಲ್ಲಿ ಮೊಗ್ಗು ಬಂದು ವಾರದಲ್ಲಿಯೇ ಹೂವರಳಿದೆ. ಹೂವು ಒಮ್ಮೆಗೆ ಅರಳಿದ್ದರಿಂದ ಜಿಲ್ಲೆಯಾದ್ಯಂತ ಇರುವ ಕಾಫಿ ತೋಟಗಳು ಸುಂದರವಾಗಿ ಕಂಗೊಳಿಸುತ್ತಿದ್ದು, ಎಲ್ಲರ ಮನ ಸೆಳೆಯುತ್ತಿದೆ. ಈ ಸುಂದರ ದೃಶ್ಯವನ್ನು ದೂರದಿಂದ ಬಂದ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಂಭ್ರಮಿಸುತ್ತಿದ್ದಾರೆ.[ಕೊಂಬೊ ಮೀಸೆರ ಬಂಬೋ ಆದ ಲೋಕೇಶ್ ಅಚ್ಚಪ್ಪ]
ಈ ಹೂಗಳು ಕೇವಲ ಕಣ್ಣಿಗೆ ಮಾತ್ರವಲ್ಲ, ಮೂಗಿಗೆ ಸುವಾಸನೆಯನ್ನೂ, ಕಿವಿಗೆ ಜೇನು ಹುಳುಗಳ ಝೇಂಕಾರವನ್ನು ನೀಡುತ್ತಿದೆ. ಬಹಳ ವರ್ಷಗಳ ನಂತರ ಕೊಡಗಿನ ಬಹುತೇಕ ಕಡೆ ಒಮ್ಮೆಲೆ ಹೂವರಳಿರುವುದು ಎಲ್ಲರಿಗೂ ಖುಷಿ ತಂದಿದೆ. ಅಷ್ಟೇ ಅಲ್ಲ. ಮಳೆ ಸುರಿಯುವ ಮೂಲಕ ಬರದ ಸಮಯದಲ್ಲಿ ಬೆಳೆಗಾರರ ಕೈ ಹಿಡಿದಿರುವುದು ಕೂಡ ಅಷ್ಟೇ ಸಂತೋಷ ತಂದಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications