ಕೊಡಗಿನಲ್ಲಿ ಉತ್ತಮ ಮುಂಗಾರು, ಜ್ಯೋತಿಷಿ ಹೇಳಿದ ಭವಿಷ್ಯ
ಮಡಿಕೇರಿ, ಮೇ 28: ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ವಾಡಿಕೆಯ ಮಳೆಯಾಗದ ಕಾರಣದಿಂದ ಕಾವೇರಿ ಕಣಿವೆಯಲ್ಲಿ ಮತ್ತು ಕಾವೇರಿ ನೀರನ್ನೇ ನಂಬಿದ ಜನ ಸಂಕಷ್ಟ ಅನುಭವಿಸಿದ್ದು ಗೊತ್ತೇ ಇದೆ. ಆದರೆ ಈ ಬಾರಿ ಹಾಗಾಗುವುದಿಲ್ಲ ಎನ್ನುತ್ತಿದ್ದಾರೆ ಜ್ಯೋತಿಷಿಯೊಬ್ಬರು.
ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದುವರೆಗೆ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ. ಅದರಲ್ಲೂ ಕೊಡಗಿನಲ್ಲಿ ಆಶಾದಾಯಕ ಮಳೆಯಾಗಿರುವುದರಿಂದ ಮುಂಗಾರಲ್ಲಿ ಮಳೆ ಸುರಿದರೆ ಕೆ.ಆರ್.ಎಸ್ ಜಲಾಶಯ ತುಂಬಿ ರೈತರ ಸಂಕಷ್ಟ ನೀಗಬಹುದು ಎಂಬ ಆಶಾಭಾವನೆ ಜನತೆಯದ್ದಾಗಿದೆ.[ಬೆಂಗಳೂರಿನಲ್ಲಿ ಶನಿವಾರ ಸಂಜೆ ಮಾಯದಂಥ ಮಳೆ]

ಇನ್ನೆರಡು ದಿನಗಳಲ್ಲಿ ನೈರುತ್ಯ ಮಳೆ ಪಶ್ಚಿಮಘಟ್ಟವನ್ನು ತಲುಪಲಿರುವುದರಿಂದ ಮಾನ್ಸೂನ್ ಜೂನ್ ಮೊದಲ ವಾರದಲ್ಲೇ ಕೊಡಗನ್ನು ಪ್ರವೇಶಿಸಲಿದೆ ಎಂದು ಜ್ಯೋತಿಷ್ಯ ತಜ್ಞೆ ಕರೋಟಿರ ಶಶಿ ಸುಬ್ರಮಣಿ ಹೇಳಿದ್ದಾರೆ. ಅವರು ಗೃಹಗತಿಗಳನ್ನು ಆಧರಿಸಿ ಇದನ್ನು ತಿಳಿಸಿದ್ದಾರೆ.
ಈ ಬಾರಿ ಆಗಸ್ಟ್ 7ರಂದು ಚಂದ್ರಗ್ರಹಣ ಸಂಭವಿಸಲಿರುವುದರಿಂದಾಗಿ ಮಳೆಯೂ ಹೆಚ್ಚಾಗಿ ಸುರಿಯಲಿದೆಯಂತೆ. ಜುಲೈ ಬಳಿಕ ಬರುವ ಪುನರ್ವಸು, ಪುಷ್ಯಾ ಮತ್ತು ಆಶ್ಲೇಷಗಳಲ್ಲಿ ಗಾಳಿ- ಮಳೆ, ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆಯಂತೆ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]
ಸಾಮಾನ್ಯವಾಗಿ ಹೆಚ್ಚು ಮಳೆ ಸುರಿದಾಗಲೆಲ್ಲ ಕೊಡಗಿನಲ್ಲಿ ಆಸ್ತಿಪಾಸ್ತಿ ಹಾನಿ, ಬೆಳೆ ಹಾನಿ, ಫಸಲು ಹಾನಿ ಇದ್ದಿದ್ದೇ. ಆದರೆ ಈ ಬಾರಿ ಮಳೆಯಿಂದ ಕೊಡಗಿನಲ್ಲಿ ಅಷ್ಟೊಂದು ಹಾನಿ ಸಂಭವಿಸಲ್ಲ ಎಂಬುದು ಅವರ ಅಭಿಪ್ರಾಯ.
ಇನ್ನು ಚಂದ್ರಗ್ರಹಣದ ಪರಿಣಾಮದಿಂದಾಗಿ ವಿಶ್ವದಾದ್ಯಂತ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications