Get Updates
Get notified of breaking news, exclusive insights, and must-see stories!

'ಅಖಿಲೇಶ್ ಮುಸ್ಲಿಂ ನಾಯಕರನ್ನು ಕಡೆಗಣಿಸುತ್ತಿದ್ದಾರೆ': ಸಿಕಂದರ್ ಅಲಿ ಆರೋಪ

ಸಹರಾನ್ಪುರ ಏಪ್ರಿಲ್ 20: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಪಕ್ಷದ ಮುಸ್ಲಿಂ ಮುಖಂಡರ ಅಸಮಾಧಾನ ಮುನ್ನೆಲೆಗೆ ಬರುತ್ತಿದೆ. ಅಖಿಲೇಶ್ ಮುಸ್ಲಿಂ ಸಮಾಜವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಸಹರಾನ್‌ಪುರದ ಹಿರಿಯ ಎಸ್‌ಪಿ ನಾಯಕ ಸಿಕಂದರ್ ಅಲಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಮುಸ್ಲಿಂ ನಾಯಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ ಅಖಿಲೇಶ್ ಯಾದವ್ ಅವರ ಮೌನ ನಮಗೆ ಉಸಿರುಗಟ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಿಕಂದರ್ ಅಲಿ ಎಸ್‌ಪಿಯ ಹಿರಿಯ ನಾಯಕ. ಎಸ್ಪಿಯ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೀಗ ಸಿಕಂದರ್ ಅವರು ಎಸ್ಪಿಯ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಅಜಂ ಖಾನ್ ಬಂಧನ ಸೇರಿದಂತೆ ಹಲವು ವಿಷಯಗಳಲ್ಲಿ ಅಖಿಲೇಶ್ ಯಾದವ್ ಮೌನ ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಲಾಯಂ ಸಿಂಗ್ ಯಾದವ್ ಕಾಲದಲ್ಲಿ ಇದ್ದ ಎಸ್ಪಿ ಇದಲ್ಲ ಎಂದು ಟೀಕಿಸಿದ್ದಾರೆ.

UP: SP leader Sikander Ali resigned from all posts

Recommended Video

      RCB ಯ ಬೌಲಿಂಗ್ ಮತ್ತು ಬ್ಯಾಟಿಂಗ್ ದಾಳಿಗೆ ಲಕ್ನೋ ಧೂಳೀಪಟ | Oneindia Kannada

      ಸಿಕಂದರ್ ಅಲಿ ಅವರು ಅಖಿಲೇಶ್ ಯಾದವ್ ಅವರ 'ನಯಾ ಹವಾ ಹೈ, ನಯಾ ಎಸ್ಪಿ ಹೈ' ಎಂಬ ಘೋಷಣೆಯನ್ನೂ ಗುರಿಯಾಗಿಸಿಕೊಂಡಿದ್ದಾರೆ. ಅಖಿಲೇಶ್ ಯಾದವ್ ಮುಸ್ಲಿಮರ ಮತ ಪಡೆದು 111 ಸ್ಥಾನಗಳನ್ನು ಗೆದ್ದಿದ್ದಾರೆ. ಆದರೆ ಆಜಂ ಖಾನ್ ಮತ್ತು ನಹಿದ್ ಹಸನ್ ವಿಷಯದಲ್ಲಿ ಅವರು ಏನನ್ನೂ ಮಾಡಿಲ್ಲ. ಆದರೂ ಅವರು ಶಾಸಕರಾಗಲು ಸಾಧ್ಯವಾಗಿದೆ. ಇದು ಸಾಮಾನ್ಯ ಶಾಸಕನ ಸ್ಥಾನ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಅಖಿಲೇಶ್ ಯಾದವ್ ಕೇವಲ ಮುಸ್ಲಿಮರನ್ನು ಮತ ಬ್ಯಾಂಕ್ ಎಂದು ಪರಿಗಣಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+