ಅಯೋಧ್ಯೆ ಸ್ಪರ್ಧೆಯಿಂದ ಅಂತರ ಕಾಯ್ದುಕೊಂಡಿದ್ದು ಏಕೆ ಯೋಗಿ ಆದಿತ್ಯನಾಥ್?
ಲಕ್ನೋ,
ಜನವರಿ
15:
ಉತ್ತರ
ಪ್ರದೇಶ
ವಿಧಾನಸಭೆ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ
ದೊಡ್ಡ
ಗೆಲುವಿನ
ನಿರೀಕ್ಷೆಯಲ್ಲಿದೆ.
ಮುಖ್ಯಮಂತ್ರಿ
ಯೋಗಿ
ಆದಿತ್ಯನಾಥ್
ಗೋರಖ್ಪುರ
ಕ್ಷೇತ್ರದಿಂದ
ವಿಧಾನಸಭೆ
ಚುನಾವಣೆಗೆ
ಸ್ಪರ್ಧಿಸುವುದು
ಪಕ್ಕಾ
ಆಗಿದೆ.
ಈ
ಮೊದಲು
ಅಯೋಧ್ಯೆಯಲ್ಲಿ
ಸ್ಪರ್ಧಿಸುವ
ಕುರಿತು
ಚರ್ಚೆ
ನಡೆದಿತ್ತು.
ಆದರೆ
ದಿಢೀರ್
ಬದಲಾವಣೆ
ಆಗುವುದರ
ಹಿಂದೆ
ಬೇರೆಯದ್ದೇ
ಕಾರಣವಿದೆ.
ಗೋರಖ್ಪುರದಿಂದಲೇ
ಯೋಗಿ
ಆದಿತ್ಯನಾಥ್
ಸ್ಪರ್ಧಿಸುವುದರ
ಬಗ್ಗೆ
ಬಿಜೆಪಿ
ಅಭ್ಯರ್ಥಿಗಳ
ಪಟ್ಟಿಯಿಂದ
ಕನ್ಫರ್ಮ್
ಆಗಿದೆ.
ಅಯೋಧ್ಯೆಯಲ್ಲಿ
ಕಣಕ್ಕೆ
ಇಳಿಯದಿರಲು
ಈ
ಮೊದಲು
ಬಿಜೆಪಿ
ಅನುಭವಿಸಿದ
ಮುಖಭಂಗವೇ
ಕಾರಣ
ಎಂದು
ಅವಲೋಕಿಸಲಾಗುತ್ತಿದೆ.
ಯುಪಿ ಮೊದಲ ಹಂತ ಚುನಾವಣೆ: ಬಿಜೆಪಿಯಿಂದ ಯಾರಿಗೆಷ್ಟು ಸ್ಥಾನ?
ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿತ್ತು. ಅಯೋಧ್ಯೆಯ 40 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ಬಿಜೆಪಿ ಕೇವಲ ಎಂಟು ಸ್ಥಾನಗಳನ್ನು ಗೆದ್ದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೆಚ್ಚು ಗಮನ ಹರಿಸಿದ ಜಿಲ್ಲೆಯ ಆಡಳಿತ ಪಕ್ಷಕ್ಕೆ ನಿರಾಶೆಯಾಗಿತ್ತು.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆ
ಕಳೆದ ತಿಂಗಳು ನಡೆದ ಪಂಚಾಯತ್ ಚುನಾವಣೆಯಲ್ಲಿ ಪ್ರತಿಪಕ್ಷ ಸಮಾಜವಾದಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಜಯಿಸಿಕೊಂಡಿತ್ತು. ಸಮಾಜವಾದಿ ಪಾರ್ಟಿ ಬೆಂಬಲಿಸಿದ ಅಭ್ಯರ್ಥಿಗಳು 22 ಅಭ್ಯರ್ಥಿಗಳು ಜಿಲ್ಲಾ ಮಟ್ಟದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅಯೋಧ್ಯೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ನಾಲ್ವರು ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರು. ಉತ್ತರ ಪ್ರದೇಶದಲ್ಲಿ ಗ್ರಾಮ ಮತ್ತು ಜಿಲ್ಲೆ ಸೇರಿದಂತೆ ನಾಲ್ಕು ಹಂತದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದು, ಇದೀಗ ತಮ್ಮ ಬೆಂಬಲದಿಂದಲೇ ಅಭ್ಯರ್ಥಿಗಳು ಗೆಲುವು ಸಾಧಿಸುವ ಬಗ್ಗೆ ಹೇಳಿಕೊಳ್ಳುತ್ತಿವೆ.
ಅಯೋಧ್ಯೆಯಲ್ಲಿ ಬಿಜೆಪಿಗೆ ತೀವ್ರ ನಿರಾಸೆ
ರಾಜ್ಯದಲ್ಲಿ
ಒಟ್ಟಾರೆ
ಫಲಿತಾಂಶವು
ಬಿಜೆಪಿ
ನಿರೀಕ್ಷೆಗೆ
ವ್ಯತಿರಿಕ್ತವಾಗಿದ್ದು,
ಅಯೋಧ್ಯೆಯಲ್ಲಿ
ಪಕ್ಷ
ನಿರೀಕ್ಷಿಸಿದಷ್ಟು
ಸ್ಥಾನಗಳನ್ನು
ಗೆಲ್ಲುವುದಕ್ಕೆ
ಸಾಧ್ಯವಾಗಲಿಲ್ಲ
ಎಂದು
ಒಪ್ಪಿಕೊಂಡಿದೆ.
ಚುನಾವಣಾ
ಫಲಿತಾಂಶಗಳು
ನಿರಾಶಾದಾಯಕವಾಗಿವೆ.
ಅಯೋಧ್ಯೆ
ಜಿಲ್ಲೆಯ
ಎಲ್ಲಾ
ಕ್ಷೇತ್ರಗಳಲ್ಲಿ
ಹಾಲಿ
ಶಾಸಕರು
ಬಿಜೆಪಿಯವರೇ
ಆಗಿದ್ದಾರೆ.
ಹಾಗಿದ್ದರೂ,
40
ಜಿಲ್ಲಾ
ಪಂಚಾಯತ್
ಸ್ಥಾನಗಳಲ್ಲಿ
ಎಂಟು
ಸ್ಥಾನಗಳನ್ನು
ಮಾತ್ರ
ಗೆದ್ದಿದ್ದೇವೆ
ಎಂದು
ಬಿಜೆಪಿಯ
ಜಿಲ್ಲಾ
ವಕ್ತಾರ
ದಿವಾಕರ್
ಸಿಂಗ್
ಬೇಸರ
ವ್ಯಕ್ತಪಡಿಸಿದ್ದಾರೆ.
ಸೊಹಾವಾಲ್
ಉಪ-ಜಿಲ್ಲೆಯಲ್ಲಿ
ಬಿಜೆಪಿ
ವ್ಯತಿರಿಕ್ತವಾದ
ಫಲಿತಾಂಶವನ್ನು
ಪಡೆದುಕೊಂಡಿದೆ.
ಕಳೆದ
2019ರಲ್ಲಿ
ರಾಮ
ಜನ್ಮಭೂಮಿ-ಬಾಬರಿ
ಮಸೀದಿ
ಭೂ
ವಿವಾದದ
ಕುರಿತಾಗಿ
ಸುಪ್ರೀಂ
ಕೋರ್ಟ್
ಆದೇಶದಂತೆ
ಆಡಳಿತವು
ಮಸೀದಿ
ನಿರ್ಮಾಣಕ್ಕಾಗಿ
ಐದು
ಎಕರೆಗಳನ್ನು
ಹಸ್ತಾಂತರಿಸಿತ್ತು.
ಸುಪ್ರೀಂ
ಕೋರ್ಟ್
ತೀರ್ಪಿನ
ನಂತರ
ಕೇಂದ್ರ
ಮತ್ತು
ಯೋಗಿ
ಆದಿತ್ಯನಾಥ್
ಸರ್ಕಾರವು
ಅಯೋಧ್ಯೆಗೆ
ಹಲವಾರು
ಅಭಿವೃದ್ಧಿ
ಯೋಜನೆಗಳನ್ನು
ಘೋಷಿಸಿತ್ತು,
ಇದು
ಒಂದು
ಕಾಲದಲ್ಲಿ
ವಿವಾದಿತ
ಸ್ಥಳದಲ್ಲಿ
ರಾಮ
ಮಂದಿರ
ನಿರ್ಮಾಣಕ್ಕೆ
ದಾರಿ
ಮಾಡಿಕೊಟ್ಟಿತ್ತು.
ಇಂಥ
ಜಿಲ್ಲೆಯಲ್ಲೇ
ಬಿಜೆಪಿಗೆ
ಹಿನ್ನಡೆಯಾಗಿದೆ.
ಸಮಾಜವಾದಿ
ಪಕ್ಷವು
ಅಲ್ಲಿನ
ನಾಲ್ಕು
ಜಿಲ್ಲಾ
ಪಂಚಾಯತ್
ಸ್ಥಾನಗಳಲ್ಲಿ
ಮೂರನ್ನು
ಗೆದ್ದಿದ್ದು,
ಒಂದು
ಕ್ಷೇತ್ರ
ಸ್ವತಂತ್ರ
ಅಭ್ಯರ್ಥಿ
ಪಾಲಾಗಿದೆ.
ಬಿಜೆಪಿ
ಸರ್ಕಾರದ
ಅಡಿಯಲ್ಲಿ
ಗ್ರಾಮೀಣ
ಪ್ರದೇಶದ
ಜನರು
ಸಾಕಷ್ಟು
ಸಮಸ್ಯೆಗಳನ್ನು
ಎದುರಿಸುತ್ತಿದ್ದಾರೆ
ಎಂದು
ಎಸ್ಪಿ
ನಾಯಕ
ಅವಧೇಶ್
ಪ್ರಸಾದ್
ಹೇಳಿದ್ದಾರೆ.
ಬಿಡಾಡಿ
ದನಗಳು
ಬೆಳೆಗಳನ್ನು
ನಾಶಪಡಿಸುವ
ವಿಷಯವಾಗಿದ್ದು,
ಇದು
ಕೆಲವು
ರೈತರ
ಆತ್ಮಹತ್ಯೆಗೂ
ಕಾರಣವಾಗಿದೆ
ಎಂದು
ಆರೋಪಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸ್ಪರ್ಧೆಗೆ ಗೋರಖ್ಪುರ ಆಯ್ಕೆ ಏಕೆ?
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಮೊದಲು ಅಯೋಧ್ಯೆ ಅಥವಾ ಮಧುರಾದಲ್ಲಿ ಯೋಗಿ ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಇತ್ತೀಚಿಗೆ ಇದೇ ಅಯೋಧ್ಯೆಯಲ್ಲಿ ಬಿಜೆಪಿ ಎದುರಿಸಿದ ವ್ಯತಿರಿಕ್ತ ಫಲಿತಾಂಶದಿಂದ ನಿರ್ಧಾರವನ್ನು ಬದಲಿಸಿಕೊಳ್ಳಲಾಗಿದೆ. ಅದರ ಬದಲಿಗೆ ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಐದು ಬಾರಿ ಲೋಕಸಭೆಗೆ ಆಯ್ಕೆಯಾದ ಗೋರಖ್ಪುರದಿಂದಲೇ ವಿಧಾನಸಭೆಗೆ ಸ್ಪರ್ಧಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಯುಪಿಯಲ್ಲಿ ಹೇಗಿದೆ ವಿಧಾನಸಭೆ ಚುನಾವಣಾ ಲೆಕ್ಕಾಚಾರ?
ಉತ್ತರ
ಪ್ರದೇಶದಲ್ಲಿ
ಫೆಬ್ರವರಿ
10,
ಫೆಬ್ರವರಿ
14,
ಫೆಬ್ರವರಿ
20,
ಫೆಬ್ರವರಿ
23,
ಫೆಬ್ರವರಿ
27,
ಮಾರ್ಚ್
3
ಮತ್ತು
ಮಾರ್ಚ್
7ರಂದು
ಒಟ್ಟು
ಏಳು
ಹಂತಗಳಲ್ಲಿ
ಮತದಾನ
ನಡೆಯಲಿದೆ.
ಅಂತಿಮವಾಗಿ
ಮಾರ್ಚ್
10ರಂದು
ಉತ್ತರ
ಪ್ರದೇಶ
ಸೇರಿದಂತೆ
ಐದು
ರಾಜ್ಯಗಳಲ್ಲಿ
ನಡೆದ
ವಿಧಾನಸಭೆ
ಚುನಾವಣೆಯ
ಫಲಿತಾಂಶ
ಪ್ರಕಟವಾಗಲಿದೆ.
ಈ
ಬಾರಿ
ವಿಧಾನಸಭೆ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ,
ಅಖಿಲೇಶ್
ಯಾದವ್
ನೇತೃತ್ವದ
ಸಮಾಜವಾದಿ
ಪಕ್ಷ,
ಕಾಂಗ್ರೆಸ್
ಮತ್ತು
ಮಾಯಾವತಿ
ನೇತೃತ್ವದ
ಬಹುಜನ
ಸಮಾಜವಾದಿ
ಪಕ್ಷದ
ನಡುವೆ
ಜಿದ್ದಾಜಿದ್ದಿನ
ಪೈಪೋಟಿ
ನಡೆಯುತ್ತಿದೆ.
ಕಳೆದ
2017ರಲ್ಲಿ
ಉತ್ತರ
ಪ್ರದೇಶದಲ್ಲಿ
403
ವಿಧಾನಸಭೆಗಳಿಗೆ
ನಡೆದ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ
ಅತಿಹೆಚ್ಚು
ಸ್ಥಾನಗಳನ್ನು
ಗೆದ್ದು
ಅಧಿಕಾರದ
ಗದ್ದುಗೆ
ಏರಿತ್ತು.
ಒಟ್ಟು
403
ಕ್ಷೇತ್ರಗಳ
ಪೈಕಿ
ಬಿಜೆಪಿ
312
ಸ್ಥಾನಗಳನ್ನು
ಗೆದ್ದಿತ್ತು.
ಸಮಾಜವಾದಿ
ಪಕ್ಷ
47
ಸ್ಥಾನಗಳಲ್ಲಿ
ಗೆಲುವು
ಸಾಧಿಸಿದ್ದರೆ,
ಬಹುಜನ
ಸಮಾಜವಾದಿ
ಪಕ್ಷವು
19
ಕ್ಷೇತ್ರಗಳಲ್ಲಿ
ಗೆಲುವಿನ
ಬಾವುಟ
ಹಾರಿಸಿತ್ತು.
ರಾಷ್ಟ್ರೀಯ
ಪಕ್ಷ
ಕಾಂಗ್ರೆಸ್
ತೀವ್ರ
ಹಿನ್ನಡೆ
ಅನುಭವಿಸಿದ್ದು,
ಕೇವಲ
ಏಳು
ಕ್ಷೇತ್ರಗಳಲ್ಲಿ
ಮಾತ್ರ
ಗೆಲುವು
ಸಾಧಿಸುವಲ್ಲಿ
ಯಶಸ್ವಿಯಾಗಿತ್ತು.