Get Updates
Get notified of breaking news, exclusive insights, and must-see stories!

ಯುಪಿ: ಐದನೇ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಸವಾಲಾದ ಆದಿವಾಸಿಗಳು

ಲಕ್ನೋ ಫೆಬ್ರವರಿ 25: ಐದನೇ ಹಂತದಲ್ಲಿ ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕೊನೆಯ ಕ್ಷಣದ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮತದಾನಕ್ಕೆ ಒಳಪಟ್ಟಿರುವ ಚಿತ್ರಕೂಟದ ಮೌ-ಮಾಣಿಕಪುರ ಬ್ಲಾಕ್‌ನಲ್ಲಿನ ಚಿತ್ರಣ ಸ್ವಲ್ಪ ವಿಭಿನ್ನವಾಗಿದೆ. ಅಪ್ನಾ ದಳದ ಅಧ್ಯಕ್ಷೆ ಅನುಪ್ರಿಯಾ ಪಟೇಲ್ ಅವರ ಈ ಕ್ಷೇತ್ರವು 40,000 ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ. ಆದರೆ ಅವರು ಇಲ್ಲಿ ನಿರಾಶ್ರಿತರಾಗುತ್ತಾರೆ ಎಂಬ ನಿರಂತರ ಭಯದಲ್ಲಿ ವಾಸಿಸುತ್ತಿದ್ದಾರೆ. ಏಕೆಂದರೆ ಅರಣ್ಯ ಇಲಾಖೆಯು 2021 ರ ಅಂತ್ಯದಿಂದ ಹೊರಹಾಕುವಿಕೆ ನೋಟಿಸ್‌ಗಳೊಂದಿಗೆ ಅವರನ್ನು ಹಿಂಡಿಹಿಪ್ಪೆಯನ್ನಾಗಿಸಿದೆ.

230 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಮಾಣಿಕ್‌ಪುರ ಮೌ ಬ್ಲಾಕ್‌ನಲ್ಲಿ ವಿಂಗಡಿಸಲಾಗಿದೆ. ಇದು ರಾಣಿಪುರ ವನ್ಯಜೀವಿ ಅಭಯಾರಣ್ಯದ ಉದ್ದಕ್ಕೂ ವಿಸ್ತರಿಸಿಕೊಂಡಿದೆ. ಇದನ್ನು 1977 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಅಭಯಾರಣ್ಯ ಉದ್ಯಾನವನವು ರಾಷ್ಟ್ರೀಯವಾಗಿ ಬದಲಾಗುವ ಸಾಧ್ಯತೆಯಿದೆ.

ಇಲ್ಲಿ ವಾಸಿಸುವ ಆದಿವಾಸಿಗಳು ಸ್ಥಳೀಯ ಆಡಳಿತದಿಂದ ಕಿರುಕುಳ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಆದಿವಾಸಿಗಳಿಗೆ ಭೂಮಿಯ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಅರಣ್ಯ ಹಕ್ಕುಗಳ ಮಾನ್ಯತೆ ಕಾಯಿದೆ 2006 ಅನ್ನು ಪರಿಚಯಿಸಲಾಯಿತು. ಹೀಗಾಗಿ ಆದಿವಾಸಿಗಳು ತಮ್ಮ ಭೂ ದಾಖಲೆಗಳನ್ನು ಮಾಡಿಕೊಳ್ಳಲು ಸ್ಥಳೀಯ ಎನ್‌ಜಿಒಗಳ ಸಹಾಯವನ್ನು ಪಡೆದರು. ಉತ್ತರ ಪ್ರದೇಶದಲ್ಲಿ ಈ ಆದಿವಾಸಿಗಳನ್ನು ಪರಿಶಿಷ್ಟ ಪಂಗಡ (ST) ಎಂದು ಗುರುತಿಸಲಾಗಿಲ್ಲ. ಜೊತೆಗೆ ಅವರಿಗೆ 2019ರ ಚುನಾವಣೆಯಿಂದ ಬಹಿಷ್ಕರಿಸುವ ಬೆದರಿಕೆಯನ್ನೂ ಹಾಕಲಾಗಿತ್ತು.

ಯುಪಿಯ 6 ನೇ ಹಂತದ ಕಣದಲ್ಲಿ 253 ಕೋಟ್ಯಧಿಪತಿಗಳು
ವಕೀಲರ ಗುಂಪುಗಳ ಸಹಾಯದಿಂದ ಬುಡಕಟ್ಟು ಜನಾಂಗದವರು ತಮ್ಮ ಭೂಮಿಯ ಮೇಲೆ ಕಾನೂನು ಹಕ್ಕುಗಳಿಲ್ಲದಿದ್ದರೆ ಅವರು ಕಿರುಕುಳವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ಉತ್ತರ ಪ್ರದೇಶದಲ್ಲಿ ಅವರು ಎಸ್‌ಟಿ ಸ್ಥಾನಮಾನಕ್ಕೆ ಬೇಡಿಕೆಯನ್ನಿಟ್ಟಿದ್ದಾರೆ.

ಬುಡಕಟ್ಟು ಜನಾಂಗದವರಿಗೆ ಎರಡು ನೋಟೀಸ್

ಬುಡಕಟ್ಟು ಜನಾಂಗದವರಿಗೆ ಎರಡು ನೋಟೀಸ್

ಮಾಣಿಕ್‌ಪುರ ವಿಧಾನಸಭಾ ಕ್ಷೇತ್ರದ 22 ಪಂಚಾಯತ್‌ಗಳಾದ್ಯಂತ ವಾಸಿಸುವ ಆದಿವಾಸಿಗಳು ನವೆಂಬರ್ 2021 ರಿಂದ ತೆರವು ನೋಟೀಸ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಅವರಿಗೆ ಎರಡು ರೀತಿಯ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಒಂದು ನೋಟಿಸ್‌ನಲ್ಲಿ ನೋಟಿಸ್ ಬಂದ ಮೂರು ದಿನಗಳೊಳಗೆ ಭೂಮಿಯನ್ನು ತೆರವು ಮಾಡಬೇಕು ಎಂದು ನಮೂದಿಸಿದ್ದರೆ, ಇನ್ನೊಂದು ಇತ್ಯರ್ಥಕ್ಕೆ ಅವಕಾಶ ನೀಡಿದೆ.

ಮಾಣಿಕ್‌ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತಿಕುರಿ, ಅಮರ್‌ಪುರ್, ಮುಸ್ಕತಾ, ರಾಣಿಪುರ ಮತ್ತು ಉಂಚ್‌ಡಿಹ್ ಗ್ರಾಮಗಳ ಬುಡಕಟ್ಟು ಜನಾಂಗದವರಿಗೆ ಈ ಸೂಚನೆಗಳನ್ನು ಕಳುಹಿಸಲಾಗಿದೆ.

ಹಕ್ಕುಗಳಿಗಾಗಿ ಹೋರಾಟ

ಹಕ್ಕುಗಳಿಗಾಗಿ ಹೋರಾಟ

ಎಬಿಎಸ್ಎಸ್ (ಅಖಿಲ ಭಾರತೀಯ ಸಮಾಜ ಸೇವಾ ಸಂಸ್ಥಾನ) ಎಂಬ ವಕೀಲರ ಗುಂಪಿನ ಪ್ರಮುಖ ಭಾಗವಾಗಿರುವ ಈ ಪ್ರದೇಶದ ನಿವಾಸಿಯಾದ ಮಾತಾದಯಾಲ್, "ನಮ್ಮ ಭೂಮಿಯನ್ನು ಬಿಟ್ಟುಕೊಡುವಂತೆ ನಮಗೆ ಕೇಳಲಾಗಿದೆ, ಅವರು ಅದನ್ನು ಬಲವಂತವಾಗಿ ಮಾಡುತ್ತಿದ್ದಾರೆ. ಈಗ ಚುನಾವಣೆ ಬಂದಿದೆ. ಮತ್ತು ಅವರು ನಮಗೆ ಹಣ ಮತ್ತು ಮದ್ಯವನ್ನು ನೀಡಿ ತಮ್ಮನ್ನು ಗೆಲ್ಲಿಸಿಕೊರ್ಲಳಲು ಪ್ರಯತ್ನಿಸುತ್ತಾರೆ. ಆದರೆ ನಾವು ಅಂತಹ ಆಮಿಷಯಗಳಿಗೆ ಬೀಳುವುದಿಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತೇವೆ.

ಕಳೆದ ಡಿಸೆಂಬರ್‌ನಲ್ಲಿ ತನಗೆ ಬಂದಿದ್ದ ಅರಣ್ಯ ಇಲಾಖೆಯ ನೋಟಿಸ್‌ ಹಿಡಿದುಕೊಂಡ 36 ವರ್ಷದ ಸುಗ್ಗನ್‌, 'ನಾವು ಈ ಭಾಗದ ಮೂಲದವರು, ನಮಗೆ ಯಾವುದೇ ಮಾರ್ಗವಿಲ್ಲ ಆದರೆ ಹೋರಾಟ ಮಾಡುತ್ತೇವೆ, ಸರ್ಕಾರ ಕೊಡುತ್ತದೆ ಇಲ್ಲವೇ ಸಾಯಿಸುತ್ತದೆ. ನಾವು ನಮ್ಮ ಭೂಮಿಯನ್ನು ಬಿಡುವುದಿಲ್ಲ.

ಧಾರ್ಮಿಕ ಲಿಪಿಗಳಲ್ಲಿ ಕೋಲ್‌ಗಳ ಇತಿಹಾಸ

ಧಾರ್ಮಿಕ ಲಿಪಿಗಳಲ್ಲಿ ಕೋಲ್‌ಗಳ ಇತಿಹಾಸ

ಈ ಬುಡಕಟ್ಟುಗಳಿಗೆ ಕಿರುಕುಳ ಇತ್ತೀಚಿನ ವಿಷಯವಲ್ಲ. ಅವರು ಬ್ರಿಟಿಷರ ಕಾಲದಿಂದಲೂ ಮತ್ತು ವಸಾಹತುಶಾಹಿ ನಂತರದ ಯುಗದಿಂದಲೂ ಸರ್ಕಾರಗಳಿಂದ ಇಂತಹ ಕಿರುಕುಳವನ್ನು ಎದುರಿಸುತ್ತಿದ್ದಾರೆ.

ಇಂಡಿಯಾ ಟುಡೆ ಟಿವಿಯೊಂದಿಗೆ ಮಾತನಾಡಿದ ರಾಮ್ ಮಿಲನ್, "ನಾವು 2013 ರಿಂದ ಕಿರುಕುಳವನ್ನು ಎದುರಿಸುತ್ತಿದ್ದೇವೆ. ಅವರು ನಮ್ಮ ಭೂಮಿಯನ್ನು ಕಸಿದುಕೊಳ್ಳಲು ಬಯಸುತ್ತಾರೆ ಮತ್ತು ನಾವು ಕಾನೂನು ಹಕ್ಕುಗಳನ್ನು ಪಡೆಯುವುದಿಲ್ಲ ಎಂದು ನಮಗೆ ಬೆದರಿಕೆ ಹಾಕುತ್ತಾರೆ. ಅವರು ನಮ್ಮನ್ನು ಬೆದರಿಸಿ ಭೂಮಿ ಪಡೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ. ನಾವು ಈ ಸ್ಥಳದ ಮೂಲ ನಿವಾಸಿಗಳಾಗಿರುವುದರಿಂದ ಈ ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದೇವೆ ಮತ್ತು ಅದನ್ನು ಕೊನೆಯವರೆಗೂ ಹೋರಾಟುತ್ತೇವೆ ಎನ್ನುತ್ತಾರೆ.

ಕೋಲ್‌ಗಳು ಮಧ್ಯಪ್ರದೇಶ, ಬಿಹಾರ, ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಕಂಡುಬರುವ ಅರಣ್ಯವಾಸಿಗಳು. ಹೆಚ್ಚಾಗಿ ಹಿಂದೂ ಧರ್ಮದ ಅನುಯಾಯಿಗಳು ಶಬರಿಯಿಂದ ತಮ್ಮ ವಂಶಾವಳಿಯನ್ನು ಹೇಳಿಕೊಳ್ಳುತ್ತಾರೆ. ಅವರು ಪುರಾಣಗಳ ಪ್ರಕಾರ, ತಮ್ಮ ವನವಾಸದ ಸಮಯದಲ್ಲಿ ಭಗವಾನ್ ರಾಮ ಮತ್ತು ಲಕ್ಷ್ಮಣರಿಗೆ ಹಣ್ಣುಗಳನ್ನು ತಿನ್ನಿಸಿದರು. ಈ ದಂತಕಥೆಯ ಪ್ರಕಾರ, ಈ ಬುಡಕಟ್ಟು ಕಾಡಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆಯಂತೆ.

ಕಟ್ಟಿಗೆ ಮಾರಿ ಜೀವನ

ಕಟ್ಟಿಗೆ ಮಾರಿ ಜೀವನ

ದೀರ್ಘಕಾಲ ಅರಣ್ಯವಾಸಿಗಳಾಗಿದ್ದರೂ ಕೋಲ್‌ಗಳು ದಾಖಲೆಯಿಲ್ಲದ ಇತಿಹಾಸವನ್ನು ಹೊಂದಿದ್ದಾರೆ. ಕಳೆದ ಶತಮಾನದಿಂದಲೂ ಈ ಆದಿವಾಸಿಗಳು ತಮ್ಮನ್ನು ಬಲಾಢ್ಯ ಜಾತಿಗಳು ಅಥವಾ ಭೂಮಾಲೀಕರು ವಿಶೇಷವಾಗಿ ಉತ್ತರ ಪ್ರದೇಶದ ದಕ್ಷಿಣ ಜಿಲ್ಲೆಗಳಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳುತ್ತಾರೆ. ಅವರು ಊಳಿಗಮಾನ್ಯ ಭೂಮಾಲೀಕರಿಂದ ಶೋಷಣೆ, ನಿರಾಕರಣೆಯನ್ನು ಅನುಭವಿಸುತ್ತಿದ್ದಾರೆ. ಆರ್ಥಿಕವಾಗಿ ಶೋಷಿಸಿ ಸಾಮಾಜಿಕವಾಗಿ ಅವರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ.

ಜಲವಿದ್ಯುತ್ ಯೋಜನೆಗಳಂತಹ ಅಭಿವೃದ್ಧಿ ಮತ್ತು ರಾಣಿಪುರ ವನ್ಯಜೀವಿ ಅಭಯಾರಣ್ಯದಂತಹ ವನ್ಯಜೀವಿ ಅಭಯಾರಣ್ಯಗಳ ಅಭಿವೃದ್ಧಿಯ ಹೆಸರಿನಲ್ಲಿ ಈ ಆದಿವಾಸಿಗಳನ್ನು ದೀರ್ಘಕಾಲದಿಂದ ತಮ್ಮ ಆವಾಸಸ್ಥಾನಗಳಿಂದ ಸ್ಥಳಾಂತರಿಸಲಾಗಿದೆ. ಇಂದಿಗೂ ಕಾಡಿನಿಂದ ಸಿಗುವ ಕಟ್ಟಿಗೆ 50 ರೂ.ಗೆ ಮಾರಬೇಕಾದ ಅನಿವಾರ್ಯತೆ ಇವರಿಗಿದೆ. ಮೂರು ದಿನಗಳ ಕಾಲ ಕಟ್ಟಿಗೆ ಸಂಗ್ರಹಿಸುವ ಮೂಲಕ ದಿನಕ್ಕೆ 160 ರೂಪಾಯಿ ಗಳಿಸುತ್ತಿದ್ದಾರೆ. ತಾವು ಬೇಸಾಯ ಮಾಡಲು ಮುಂದಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಡೆಯುತ್ತಾರೆ ಎಂಬುದು ಆದಿವಾಸಿಗಳ ಆರೋಪ.

ನೀರಜ್ ರಾವತ್, "ನಾವು ಕೃಷಿ ಮಾಡಲು ಪ್ರಯತ್ನಿಸಿದ್ದೇವೆ, ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಅದನ್ನು ತೋಡಿಯುತ್ತಾರೆ. ನಾವು ನಿರಂತರ ಭಯದಲ್ಲಿ ವಾಸಿಸುತ್ತಿದ್ದೇವೆ. ನಮ್ಮಲ್ಲಿ ಕೆಲವರು ಮರ ಕಡಿದಿದ್ದಕ್ಕೆ ಅವರ ವಿರುದ್ಧ ಅಕ್ರಮ ಪ್ರಕರಣಗಳನ್ನು ಹಾಕಿದ್ದಾರೆ. ಆದರೆ ಅವರು ನಮಗೆ ಕೃಷಿ ಮತ್ತು ಇತರ ಕೆಲಸ ಮಾಡಲು ಸಹ ಅನುಮತಿಸುವುದಿಲ್ಲ. ನಾವು ಇನ್ನೇನು ಮಾಡಬೇಕು?" ಎಂದು ಅಳಲು ತೋಡಿಕೊಂಡಿದ್ದಾರೆ.

ತೆರವು ಸೂಚನೆಗಳನ್ನು ಕಳುಹಿಸಲು ಬಳಸುವ ಲೋಪದೋಷ ಎಂದರೇನು?

ತೆರವು ಸೂಚನೆಗಳನ್ನು ಕಳುಹಿಸಲು ಬಳಸುವ ಲೋಪದೋಷ ಎಂದರೇನು?

ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯಿದೆ 2006 ಅಸ್ತಿತ್ವಕ್ಕೆ ಬಂದಿದೆ. ಅರಣ್ಯಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಈ ಜಾಗಗಳನ್ನು ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಎಂದು ಘೋಷಿಸಿದ ನಂತರ ಅವರು ವಾಸಿಸುತ್ತಿದ್ದ ಅರಣ್ಯ ಭೂಮಿಯ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ಗುರುತಿಸಲಾಗಿದೆ.

ಈ ಕಾಯಿದೆಯಲ್ಲಿ, ಮುಖ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಹಕ್ಕು ಪಡೆಯುವ ಪ್ರದೇಶದಲ್ಲಿ ಅವರನ್ನು ಪರಿಶಿಷ್ಟ ಪಂಗಡ ಎಂದು ಗುರುತಿಸಬೇಕು. ಉತ್ತರ ಪ್ರದೇಶದಲ್ಲಿ, ಕೋಲ್‌ಗಳನ್ನು ಪರಿಶಿಷ್ಟ ಜಾತಿಗಳು (ಎಸ್‌ಸಿ) ಎಂದು ಗುರುತಿಸಲಾಗಿದೆ. ಪರಿಶಿಷ್ಟ ಪಂಗಡಗಳು ಎಂ (ಎಸ್‌ಟಿ)ದಲ್ಲ. ಇದರರ್ಥ ಅವರು ಹೊರಹಾಕುವುದನ್ನು ನಿಲ್ಲಿಸಲು 75 ವರ್ಷಗಳ ನಿವಾಸವನ್ನು ಸಾಬೀತುಪಡಿಸಬೇಕು.

ಎಸ್‌ಪಿಗೆ ಮತ

ಎಸ್‌ಪಿಗೆ ಮತ

ಕಿರುಕುಳಕ್ಕೆ ಹೆದರಿ ಕೋಲ್‌ಗಳು ಉತ್ತರ ಪ್ರದೇಶದಲ್ಲಿ ಎಸ್‌ಟಿ ಸ್ಥಾನಮಾನಕ್ಕಾಗಿ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಇದೀಗ ಅವರ ಮೇಲೆ ಉಚ್ಛಾಟನೆ ನೋಟಿಸ್ ಜಾರಿಯಾಗಿದ್ದು, ಮುಂಬರುವ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಚುನಾವಣೆಯಲ್ಲಿ ನೀವು ಮತ ​​ಹಾಕುತ್ತೀರಾ ಎಂಬ ಪ್ರಶ್ನೆಗೆ ಸುಗ್ಗನ್, "ಅಭ್ಯರ್ಥಿಗಳು ಬಂದಾಗ, ನಾನು ಅವರಿಗೆ ಕಾನೂನು ತೋರಿಸುತ್ತೇನೆ, ನಂತರ ಅವರು ಮೌನವಾಗುತ್ತಾರೆ. ನಾನು ಯಾರನ್ನೂ ನಂಬುವುದಿಲ್ಲ. ನಾವು ಎಲ್ಲಾ ಸಮುದಾಯದ ನಾಯಕರಿಗೆ ಅವಕಾಶ ನೀಡಿದ್ದೇವೆ ಆದರೆ ನಮಗೆ ಯಾರೂ ಸಹಾಯ ಮಾಡಿಲ್ಲ. ನಮಗೆ ಎಸ್‌ಟಿ ಸ್ಥಾನಮಾನ ನೀಡಿದವರಿಗೆ ನಾವು ಮತ ​​ಹಾಕುತ್ತೇವೆ. ಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಮತ ಹಾಕುತ್ತೇವೆ. ಅಖಿಲೇಶ್ ಅವರು ಕೆಲವು ಕೆಲಸ ಮಾಡಿದ್ದರು" ಎಂದಿದ್ದಾರೆ.

ಈ ಹಿಂದೆ ಅವರು ಈಗಿನ ಸರ್ಕಾರಕ್ಕೆ ಮತ ಹಾಕಿದ್ದರು. ಆದರೆ ಈ ಬಾರಿ ಅವರು ಕೋಪಗೊಂಡಿದ್ದಾರೆ. ಒಂದೊಮ್ಮೆ ಮುಲಾಯಂ ಸಿಂಗ್ ಯಾದವ್ ಈ ಜನರಿಗೆ ಎಸ್‌ಟಿ ಸ್ಥಾನಮಾನ ನೀಡುವ ಕೆಲಸವನ್ನು ಪ್ರಾರಂಭಿಸಿದ್ದರಿಂದ ಎಸ್‌ಪಿ ಬದಲಾವಣೆ ತರುತ್ತದೆ ಎಂದು ಅವರಲ್ಲಿ ಕೆಲವರು ನಂಬುತ್ತಾರೆ. ಆದರೆ, ನನಗೆ ಯಾವುದೇ ರಾಜಕೀಯ ಪಕ್ಷದಲ್ಲಿ ನಂಬಿಕೆ ಇಲ್ಲ. ಅವರು ತಮ್ಮ ಲಾಭಕ್ಕಾಗಿ ಮಾತ್ರ ವಿಷಯಗಳನ್ನು ಹೇಳುತ್ತಾರೆ ಎನ್ನುತ್ತಾರೆ.

ಒಂದು ಕಾಲದಲ್ಲಿ ಡಕಾಯಿಟ್ ದಾದುವಾಗೆ ಕುಖ್ಯಾತವಾಗಿದ್ದ ಕ್ಷೇತ್ರವು ಪ್ರಸ್ತುತ ಅವರ ಪುತ್ರ ವೀರ್ ಸಿಂಗ್ ಪಟೇಲ್ ಮತ್ತು ಎಸ್ಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಅಪ್ನಾ ದಳದ ಅವಿನಾಶ್ ಚಂದ್ರ ದ್ವಿವೇದಿ ನಡುವೆ ಚುನಾವಣಾ ಹೋರಾಟವನ್ನು ನೋಡುತ್ತಿದೆ.

ಕೋಲ್ ಬುಡಕಟ್ಟು ಜನಾಂಗದವರಿಗೆ ಉಚ್ಚಾಟನೆ ಸೂಚನೆಗಳು ಮತ್ತು ಎಸ್‌ಟಿ ಸ್ಥಾನಮಾನದಂತಹ ಚುನಾವಣಾ ಸಮಸ್ಯೆಗಳಿಂದಾಗಿ ಮಾರ್ಚ್ 10 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಯಾರು ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+