ಕೋವಿಡ್ 19: ಉತ್ತರ ಪ್ರದೇಶದಲ್ಲಿ 2 ಕಪ್ಪಾ ರೂಪಾಂತರಿ ಪತ್ತೆ
ಲಕ್ನೋ, ಜುಲೈ 09: ಉತ್ತರ ಪ್ರದೇಶದಲ್ಲಿ ಎರಡು ಕಪ್ಪಾ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಲಕ್ನೋನ ಕೆಜಿಎಂಯು ಆಸ್ಪತ್ರೆಗೆ ಒಟ್ಟು 109 ಮಾದರಿಗಳನ್ನು ನೀಡಲಾಗಿತ್ತು, ಅದರಲ್ಲಿ 107 ಡೆಲ್ಟಾ ರೂಪಾಂತರಿ ಪ್ರಕರಣಗಳಾಗಿದ್ದು, ಎರಡು ಕಪ್ಪಾ ಪ್ರಕರಣಗಳಿವೆ.
ಈ ಎರಡು ರೂಪಾಂತರಿಗಳು ರಾಜ್ಯಕ್ಕೆ ಹೊಸದಾಗಿದ್ದು, ಆತಂಕ ಹೆಚ್ಚಿಸಿದ್ದು, ನಿತ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೈದ್ಯರ ಜತೆ ಸಭೆ ನಡೆಸುತ್ತಿದ್ದಾರೆ.
"ಈ ರೂಪಾಂತರಿ ಕುರಿತು ಭಯ ಪಡುವುದು ಬೇಡ ಚಿಕಿತ್ಸೆ ಲಭ್ಯವಿದೆ'' ಎಂದು ಆರೋಗ್ಯ ಹೆಚ್ಚುವರಿ ಕಾರ್ಯದರ್ಶಿ ಮೋಹನ್ ಪ್ರಸಾದ್ ತಿಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 22,676ಕ್ಕೆ ಏರಿದೆ, ಒಟ್ಟು 17,07,044 ಪ್ರಕರಣಗಳಿವೆ.

ಭಾರತದಲ್ಲಿ ಕಂಡುಬಂದ 2 ಸೋಂಕಿಗೆ ಡೆಲ್ಟಾ ಹಾಗೂ ಕಪ್ಪಾ ಎಂದು ಹೆಸರಿಡಲಾಗಿದೆ. ಇನ್ಮುಂದೆ ಭಾರತದ ಸೋಂಕು, ಬ್ರಿಟನ್ ಸೋಂಕು, ಆಫ್ರಿಕಾ ಸೋಂಕು ಎಂದು ದೇಶಗಳನ್ನು ಉಲ್ಲೇಖಿಸಿ ರೂಪಾಂತರಿ ಸೋಂಕನ್ನು ಗುರುತಿಸುವಂತಿಲ್ಲ. ವೈದ್ಯಕೀಯ ಭಾಷೆಯಲ್ಲಿ ರೂಪಾಂತರಿ ಸೋಂಕನ್ನು ಹೆಸರಿಸಬೇಕು.
ಭಾರತದಲ್ಲಿ ಮೊದಲು ಕಾಣಿಸಿಕೊಂಡ B.1.617.1 ಸೋಂಕಿಗೆ ಕಪ್ಪಾ ಎಂದು, ನಂತರ ಕಾಣಿಸಿಕೊಂಡ B1.617.2 ವೈರಸನ್ನು ಡೆಲ್ಟಾ ಎಂದು ನಾಮಕರಣ ಮಾಡಲಾಗಿದೆ. ಎರಡೂ ಮಾದರಿಯ ವೈರಸ್ 2020ರ ಅಕ್ಟೋಬರ್ನಲ್ಲಿ ಭಾರತದಲ್ಲಿ ಪತ್ತೆಯಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಟೆಕ್ನಿಕಲ್ ಮುಖ್ಯಸ್ಥರಾದ ಡಾ.ಮಾರಿಯಾ ವೆನ್ ಕೆರಕೋವ ಹೆಸರುಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ದೇಶಗಳ ಹೆಸರನ್ನು ಬಳಸದೆ ಇನ್ಮುಂದೆ ವೈದ್ಯಕೀಯ ಹೆಸರುಗಳ ಮೂಲಕವೇ ರೂಪಾಂತರಿ ವೈರಸನ್ನು ಗುರುತಿಸಲಾಗುವುದು.
ಸೋಂಕು ಪತ್ತೆ, ಚಿಕಿತ್ಸೆ, ಅಧ್ಯಯನ ಎಲ್ಲವೂ ಇನ್ಮುಂದೆ ಗ್ರೀಕ್ ಅಕ್ಷರಗಳುಳ್ಳ ಹೆಸರುಗಳ ಮೂಲಕವೇ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬೇರೆ ದೇಶಗಳಲ್ಲಿ ರೂಪಾಂತರಗೊಂಡಿರುವ ವೈರಸ್ಗೆ ಆಲ್ಫಾ, ಬೀಟಾ, ಗಮಾ ಸೇರಿದಂತೆ ಹಲವು ಗ್ರೀಕ್ ಅಕ್ಷರಗಳನ್ನು ನೀಡಲಾಗಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications