ಕಾಂಗ್ರೆಸ್ನ ಭದ್ರಕೋಟೆಯಾದ ರಾಯ್ಬರೇಲಿಯ ವಿಷಯದಲ್ಲಿ ಬಿಜೆಪಿ ಮಲತಾಯಿ ಧೋರಣೆ
ರಾಯ್ ಬರೇಲಿ ಫೆಬ್ರವರಿ 21: ಉತ್ತರ ಪ್ರದೇಶದಲ್ಲಿ ಮೂರು ಹಂತದ ಮತದಾನ ಪೂರ್ಣಗೊಂಡಿದ್ದು, ನಾಲ್ಕನೇ ಹಂತದ ಮತದಾನ ಫೆಬ್ರವರಿ 23ರಂದು ನಡೆಯಲಿದೆ. ಜೊತಗೆ ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇದೆಲ್ಲದರ ನಡುವೆ ಯುಪಿಯಲ್ಲಿ ಮೂಲೆಗುಂಪಾಗಿರುವ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ತನ್ನ ಭದ್ರಕೋಟೆಯಾದ ರಾಯ್ ಬರೇಲಿಯನ್ನು ಉಳಿಸಿಕೊಳ್ಳುವ ಚಿಂತೆಯಲ್ಲಿದೆ. ಇದುವರೆಗೆ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಪ್ರಚಾರ ಮಾಡಿ ಪ್ರತೀ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಯಬರೇಲಿಯೂ ಕಾಂಗ್ರೆಸ್ ಕೈಯಿಂದ ದೂರವಾಗಬಾರದು ಎಂದು ಹೇಳಿಕೊಂಡೇ ಪ್ರಚಾರ ನಡೆಸಿದ್ದಾರೆ. ಸೋಮವಾರ ಇಲ್ಲಿ ಮೊದಲ ಬಾರಿಗೆ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯ ಮತದಾರರಿಗೆ ವರ್ಚುವಲ್ ಸಂದೇಶವನ್ನು ನೀಡಿದ್ದಾರೆ.
ರಾಯ್ ಬರೇಲಿಯ ವಿಷಯದಲ್ಲಿ ಬಿಜೆಪಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ರಾಯ್ ಬರೇಲಿಯ ಹಲವು ಪ್ರದೇಶಗಳ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಅವರು ಹೇಳಿದರು. ಈ ಚುನಾವಣೆ ನಿಮಗೆ ಅತ್ಯಂತ ಮಹತ್ವದ್ದು ಎಂದು ಹೇಳಿದ ಅವರು ಕಳೆದ ಐದು ವರ್ಷಗಳಲ್ಲಿ ಈ ಭಾಗದ ಬಿಜೆಪಿ ಸರಕಾರ ಪ್ರತ್ಯೇಕತೆಯ ಕೆಲಸ ಮಾಡಿದೆ ಹೊರತು ಯಾವುದೇ ಬದಲಾವಣೆ ಮಾಡಿಲ್ಲ ಎಂದರು.
ಭಾರತಾಂಬೆ ನೆಲದಲ್ಲಿ ಉಪ್ಪು ತಿಂದವರು ದ್ರೋಹ ಎಸಗುವುದಿಲ್ಲ: ಮೋದಿ
'ರೈತರು ತಮ್ಮ ಧಾನ್ಯಗಳನ್ನು ಪಡೆದಿಲ್ಲ, ಸರ್ಕಾರದಿಂದ ಯಾವುದೇ ರಸಗೊಬ್ಬರ ಮತ್ತು ನೀರಾವರಿ ಸೌಲಭ್ಯವನ್ನು ಪಡೆದಿಲ್ಲ. ರೈತರ ಮೇಲೆ ಸಾಲದ ಹೊರೆ ನಿರಂತರವಾಗಿ ಹೆಚ್ಚುತ್ತಿದ್ದು, ಬಿಡಾಡಿ ದನಗಳು ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಯುವಕರ ವಿಷಯದಲ್ಲೂ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರಿದೆ' ಎಂದು ಯುವಕರ ಉದ್ಯೋಗಕ್ಕೆ ಸಂಬಂಧಿಸಿದಂತೆ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 2004 ರಿಂದ ಕಾಂಗ್ರೆಸ್ ಭದ್ರಕೋಟೆಯಿಂದ ಸಂಸದರಾಗಿರುವ ಸೋನಿಯಾ ಗಾಂಧಿ, ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರದ ಮೋದಿ ಸರ್ಕಾರ ಮತ್ತು ಯೋಗಿ ಸರ್ಕಾರ ಎರಡನ್ನೂ ಆರೋಪಿಸಿದ್ದಾರೆ.

ಲಾಕ್ಡೌನ್ ಸಮಯದಲ್ಲಿ, ನಿಮ್ಮ ವ್ಯಾಪಾರವನ್ನು ಮುಚ್ಚಲಾಯಿತು. ಈ ವೇಳೆ ನೀವು ಮೈಲಿಗಟ್ಟಲೆ ನಡೆದಾಡಿ ನೋವನ್ನು ಸಹಿಸಿಕೊಂಡಿದ್ದೀರಿ. ಆದರೆ ಮೋದಿ-ಯೋಗಿ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸಿಲ್ಲ ಮತ್ತು ನಿಮ್ಮ ನೋವನ್ನು ಲೆಕ್ಕಿಸದೆ ಬೆನ್ನು ತೋರಿಸಿದೆ ಮತ್ತು ಕಣ್ಣಿದ್ದು ಕುರುಡಾಗಿದೆ. ಸರ್ಕಾರ ನಿಮಗೆ ಯಾವುದೇ ಪರಿಹಾರ ನೀಡಿಲ್ಲ. ಪೆಟ್ರೋಲ್, ಡೀಸೆಲ್ ಮತ್ತು ಅನಿಲಗಳ ಬೆಲೆ ಏರಿಕೆ ಮತ್ತು ಹಣದುಬ್ಬರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸೋನಿಯಾ ಗಾಂಧಿ ಎರಡೂ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ಚುನಾವಣೆಗಳು ನಿಮಗೆ ಮಹತ್ವದ್ದಾಗಿವೆ. ಏಕೆಂದರೆ 5 ವರ್ಷಗಳ ಕಾಲ ನಿಮ್ಮ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿದ ಸರ್ಕಾರವನ್ನು ನೀವು ಕೆಳಗಿಳಿಸಿ. ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ ರೈತರಿಗೆ ಹಣ ಪಾವತಿಯೂ ಆಗಿಲ್ಲ, ಗೊಬ್ಬರವೂ ಸಿಕ್ಕಿಲ್ಲ, ನೀರಾವರಿ ಸೌಲಭ್ಯವೂ ಸಿಕ್ಕಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
These polls are important for you as for 5 yrs you saw a govt that did nothing except create differences among you. Farmers grow crops with a lot of hard work. You neither got paid nor received fertilisers, not even irrigation facilities: Sonia Gandhi #UttarPradeshElections2022 pic.twitter.com/3cwaMXQDwI
— ANI (@ANI) February 21, 2022
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಈಗಾಗಲೇ ಉತ್ತರ ಪ್ರದೇಶ ಚುನಾವಣೆಯ ಮೊದಲನೇ ಹಂತ ಫೆಬ್ರವರಿ 10ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು ಪೂರ್ಣಗೊಂಡಿದೆ. ನಾಲ್ಕನೇ ಹಂತ ಫೆಬ್ರವರಿ 23 ರಂದು, 5 ನೇ ಹಂತ ಫೆಬ್ರವರಿ 27 ರಂದು, ಮಾರ್ಚ್ 3 ಮತ್ತು 7 ರಂದು 6 ನೇ ಹಂತ ಮತ್ತು ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದ 403, ಪಂಜಾಬ್ನ 117, ಉತ್ತರಾಖಂಡದ 70, ಮಣಿಪುರದ 60 ಮತ್ತು ಗೋವಾದ 40 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.












Click it and Unblock the Notifications