ಯುಪಿಗಾಗಿ ಕದನ: ಅಖಿಲೇಶ್ ಯಾದವ್ ಚಿಕ್ಕಪ್ಪ ಎಸ್ಪಿ ಚಿಹ್ನೆ ಜೊತೆ ಸ್ಪರ್ಧೆ
ಲಕ್ನೋ ಜನವರಿ 17: ಸಮಾಜವಾದಿ ಪಕ್ಷಕ್ಕೆ (ಎಸ್ಪಿ) ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ (ಪಿಎಸ್ಪಿಎಲ್) ಔಪಚಾರಿಕವಾಗಿ ವಿಲೀನವಾಗದಿದ್ದರೂ, ಪಿಎಸ್ಪಿ ಚಿಹ್ನೆಯ ಮೇಲೆ ನಾನು ಮತ್ತು ತನ್ನ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ಪಿಎಸ್ಪಿಎಲ್ ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಹೇಳಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ ಔಪಚಾರಿಕವಾಗಿ ವಿಲೀನವಾಗಿಲ್ಲದಿದ್ದರೂ ನಾವು ಎಸ್ಪಿ ಚಿಹ್ನೆಯ ಜೊತೆಗೆ ಸ್ಪರ್ಧಿಸುತ್ತೇವೆ ಮತ್ತು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲದೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಂಡಿದ್ದೇನೆ ಎಂದು ಶಿವಪಾಲ್ ಸಿಂಗ್ ಪುನರುಚ್ಚರಿಸಿದ್ದಾರೆ.
ಬೇರೆ ರಾಜ್ಯಗಳಿಂದ ಕಾರ್ಯಕರ್ತರ ಆಮದು ಯಾಕೆ? ಅಖಿಲೇಶ್ ಯಾದವ್
ಶಿವಪಾಲ್ ಯಾದವ್ ಅವರು ತಮ್ಮ ಪಕ್ಷಕ್ಕೆ ಚುನಾವಣಾ ಚಿಹ್ನೆ 'ಸ್ಟೂಲ್' ಎಂದು ಗುರುತಿಸಿದ್ದಾರೆ. ಆದರೆ ಅದನ್ನು ಜನಪ್ರಿಯಗೊಳಿಸಲು ಬಹಳ ಕಡಿಮೆ ಸಮಯ ಉಳಿದಿದೆ ಎಂದು ಹೇಳಿದರು. ಈ ಹಿಂದೆ ಪಿಎಸ್ಪಿಎಲ್ಗೆ ಚುನಾವಣಾ ಚಿಹ್ನೆಯಾಗಿಕೀ'ಯನ್ನು ನೀಡಲಾಗಿತ್ತು.
ನಾನು ಅಖಿಲೇಶ್ ಅವರನ್ನು ನನ್ನ ನಾಯಕ ಎಂದು ಒಪ್ಪಿಕೊಂಡಿರುವಾಗ ಅವರ ನಾಯಕತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಗೊಂದಲ ನನಗಿಲ್ಲ ಎಂದರು. ಜೊತೆಗೆ ತಮ್ಮ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರುತ್ತಿದ್ದಾರೆ ಎಂಬ ಊಹಾಪೋಹಗಳಿಗೂ ಶಿವಪಾಲ್ ಪ್ರತಿಕ್ರಿಯಿಸಿದ್ದಾರೆ. ಅಪರ್ಣಾ ಕುಟುಂಬ ಮತ್ತು ಎಸ್ಪಿಯಲ್ಲಿ ಉಳಿದು ಜನರಿಗಾಗಿ ಕೆಲಸ ಮಾಡಬೇಕು. ಅವರಿಗೆ ಸೂಕ್ತ ಸಮಯದಲ್ಲಿ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂದು ಶಿವಪಾಲ್ ಸಿಂಗ್ ಅವರು ಹೇಳಿದರು. ಅಪರ್ಣಾ ಯಾದವ್ ಅವರು 2017ರ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಎಸ್ಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದರು. ಆದರೆ ಅವರು ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸೋತಿದ್ದರು.
ಭೀಮ್
ಆರ್ಮಿ
ಮುಖ್ಯಸ್ಥರಿಗೆ
ಅಖಿಲೇಶ್
ಯಾದವ್
ತಿರುಗೇಟು
ಸಮಾಜವಾದಿ
ಪಕ್ಷದ
ಮುಖ್ಯಸ್ಥ
ಅಖಿಲೇಶ್
ಯಾದವ್
ಪಕ್ಷವನ್ನು
ಬಲಪಡಿಸಲು
ಸಣ್ಣ
ಪಕ್ಷಗಳನ್ನು
ಪಕ್ಷಕ್ಕೆ
ಸೇರಿಸಿಕೊಳ್ಳುತ್ತಿದ್ದಾರೆ.
ಕಳೆದ
ತಿಂಗಳು
ಡಿಸೆಂಬರ್
ನಲ್ಲಿ
ಅಖಿಲೇಶ್
ಚಿಕ್ಕಪ್ಪ
ಶಿವಪಾಲ್
ಸಿಂಗ್
ಯಾದವ್
ಅವರು
ಪ್ರಗತಿಶೀಲ
ಸಮಾಜವಾದಿ
(ಲೋಹಿಯಾ)
ಪಕ್ಷದ
ಜೊತೆ
ಮೈತ್ರಿ
ಘೋಷಿಸಿದ್ದರು.
ಎಸ್ಪಿ
ಮುಖ್ಯಸ್ಥ
ಶಿವಪಾಲ್
ಅವರ
ನಿವಾಸದಲ್ಲಿ
ನಡೆದ
ಸಭೆಯ
ನಂತರ
ಈ
ಘೋಷಣೆ
ಹೊರಬಿದ್ದಿತ್ತು.
ಬಹಳ
ದಿನಗಳಿಂದೆ
ಶಿವಪಾಲ್
ಸಿಂಗ್
ಯಾದವ್
ಅವರು
ಅಖಿಲೇಶ್
ಜೊತೆಗಿನ
ಮೈತ್ರಿ
ಬಗ್ಗೆ
ಹೇಳಿಕೆ
ನೀಡಿದ್ದರು.
ಆ
ಬಳಿಕ
ಶಿವಪಾಲ್
ಸಿಂಗ್
ಯಾದವ್
ಸೊಸೆ
ಅಪರ್ಣಾ
ಯಾದವ್
ಬಿಜೆಪಿಗೆ
ಸೇರ್ಪಡೆಗೊಂಡರು.
ಇದಾದ
ಬಳಿಕ
ಯಾದವ್
ಮೈತ್ರಿ
ಬಗ್ಗೆ
ಯಾಕೋ
ಮಾತೇ
ಆಡಲಿಲ್ಲ.
2016ರಲ್ಲಿ ಅಖಿಲೇಶ್ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿವಪಾಲ್ ಅವರನ್ನು ವಜಾಗೊಳಿಸುವುದರೊಂದಿಗೆ ಚಿಕ್ಕಪ್ಪ ಮತ್ತು ಯಾದವ್ ನಡುವಿನ ಸಂಬಂಧ ಹಳಸಿತ್ತು. ಅಖಿಲೇಶ್ ಅವರು ಜನವರಿ 2017 ರಲ್ಲಿ ಎಸ್ಪಿ ಅಧ್ಯಕ್ಷರಾದರು ಮತ್ತು ಶಿವಪಾಲ್ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು. ಸದ್ಯ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
Recommended Video
ಯುಪಿಯಲ್ಲಿ
ಬಿಜೆಪಿ
ಗೆದ್ದರೆ
ಯೋಗಿಯೇ
ಪಿಎಂ
ಅಭ್ಯರ್ಥಿ;
ಏನಿದು
ಅಖಿಲೇಶ್
ಮಾತಿನ
ಮರ್ಮ?
2022ರಲ್ಲಿ
ನಡೆಯಲಿರುವ
ವಿಧಾನಸಭೆ
ಚುನಾವಣೆಯಲ್ಲಿ
ಸಮಾಜವಾದಿ
ಪಕ್ಷದ
ಅಭ್ಯರ್ಥಿಗಳು
400ಕ್ಕೂ
ಹೆಚ್ಚು
ಕ್ಷೇತ್ರಗಳಲ್ಲಿ
ಗೆಲುವು
ದಾಖಲಿಸಲಿದ್ದಾರೆ
ಎಂದು
ಅಖಿಲೇಶ್
ಯಾದವ್
ವಿಶ್ವಾಸ
ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶ
ಚುನಾವಣೆ
ಹೊಸ
ರಣತಂತ್ರ
ಒಬಿಸಿ
ಮತಗಳತ್ತ
ಅಖಿಲೇಶ್
ಚಿತ್ತವಿದ್ದು
ಸಣ್ಣ
ಪಕ್ಷಗಳೊಂದಿಗಿನ
ಮೈತ್ರಿ
ನಮ್ಮ
ಪಕ್ಷವನ್ನು
400
ಕ್ಷೇತ್ರಗಳಲ್ಲಿ
ಗೆಲ್ಲುವಂತೆ
ಮಾಡಬಹುದು
ಎನ್ನುವ
ವಿಶ್ವಾಸ
ಅಖಿಲೇಶ್
ಅವರಿಗಿದೆ.
ಹೀಗಾಗಿ
ಬಿಜೆಪಿ
ವಿರುದ್ಧ
ಈ
ಬಾರೀ
ಗೆಲ್ಲಲೇಬೇಕು
ಎನ್ನುವ
ಛಲದೊಂದಿಗೆ
ಅಖಿಲೇಶ್
ಯಾದವ್
ಕಾರ್ಯತಂತ್ರ
ರೂಪಿಸುತ್ತಿದ್ದಾರೆ.