ಲಂಡನ್: ವಿಮಾನದಿಂದ ಗಾರ್ಡನ್ ಒಳಗೆ ಬಿತ್ತು ವ್ಯಕ್ತಿಯ ದೇಹ
ಲಂಡನ್, ಜುಲೈ 2: ಹಾರುತ್ತಿದ್ದ ವಿಮಾನವೊಂದರಿಂದ ವ್ಯಕ್ತಿಯೊಬ್ಬನ ದೇಹ ಲಂಡನ್ನ ಮನೆಯೊಂದರ ಉದ್ಯಾನದಲ್ಲಿ ಬಿದ್ದ ಘಟನೆ ನಡೆದಿದೆ.
ಕೀನ್ಯಾದ ನೈರೋಬಿಯಿಂದ ಹೊರಟಿದ್ದ ಕೀನ್ಯಾ ಏರ್ವೇಸ್ ವಿಮಾನವು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲೇ ವ್ಯಕ್ತಿಯ ದೇಹ ನೆಲಕ್ಕೆ ಬಿದ್ದಿದೆ. ವಿಮಾನದ ಅಡಿಭಾಗದ ಕ್ಯಾರಿಯೇಜ್ನಲ್ಲಿ ಆತ ಅಡಗಿ ಕುಳಿತಿದ್ದ ಎಂದು ಶಂಕಿಸಲಾಗಿದೆ.
ಭಾನುವಾರ ಮಧ್ಯಾಹ್ನ 3.41ರ ಸುಮಾರಿಗೆ ದಕ್ಷಿಣ ಲಂಡನ್ನ ಕ್ಲಾಫಮ್ನಲ್ಲಿರುವ ತೋಟದಲ್ಲಿ ವ್ಯಕ್ತಿಯ ದೇಹ ಬಿದ್ದಿದೆ. ಆತ ಯಾರು? ಯಾವ ದೇಶದವನು ಎಂಬ ಮಾಹಿತಿ ಗೊತ್ತಾಗಿಲ್ಲ. ವಿಮಾನದ ಕಂಪಾರ್ಟ್ಮೆಂಟ್ ಒಂದರಲ್ಲಿ ಚೀಲ, ನೀರು ಮತ್ತು ಸ್ವಲ್ಪ ಆಹಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಹೊರಭಾಗದ ಉದ್ಯಾನದಲ್ಲಿ ಕೆಲವೇ ಮೀಟರ್ ದೂರದಲ್ಲಿ ಏನೋ ಬಿದ್ದ ಶಬ್ಧ ನೆರೆಮನೆಯವರಿಗೆ ಕೇಳಿಸಿತ್ತು. ಮನೆಯ ಕಿಟಕಿಯಿಂದ ನೋಡಿದಾಗ ಯಾರೋ ಮಲಗಿದ್ದಂತೆ ಕಾಣಿಸಿತ್ತು. ಆತನ ಉಡುಪು ನೀಟಾಗಿತ್ತು. ಹತ್ತಿರ ಹೋಗಿ ನೋಡಿದಾಗಲೇ ಉದ್ಯಾನದ ಗೋಡೆಗೆ ರಕ್ತ ಹರಡಿರುವುದು ಕಂಡಿತು. ಆತನ ತಲೆ ಬಿದ್ದಿದ್ದ ರೀತಿ ಭಯಾನಕವಾಗಿತ್ತು. ಕೂಡಲೇ ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾಗಿ ಅವರು ತಿಳಿಸಿದ್ದಾರೆ.
ವಿಮಾನದ ಅಡಿ ಭಾಗದಲ್ಲಿರುವ ಕ್ಯಾರಿಯೇಜ್ನಲ್ಲಿ ಅಡಗಿಕುಳಿತು ಪ್ರಯಾಣಿಸುವ ಘಟನೆಗಳು ಅನೇಕ ಬಾರಿ ನಡೆದಿವೆ. ವಿಮಾನವು ಇನ್ನೇನು ಇಳಿಯಲು ರನ್ ವೇ ಸಮೀಪಿಸುತ್ತಿದೆ ಎನ್ನುವ ಸಂದರ್ಭದಲ್ಲಿ ಅವರು ಕೆಳಕ್ಕೆ ಜಿಗಿಯುತ್ತಾರೆ. ಅಧಿಕಾರಿಗಳ ಕೈಗೆ ಸಿಗದೆ ಕಳ್ಳಮಾರ್ಗದಿಂದ ವಲಸೆ ಹೋಗುವ ಈ ರೀತಿಯ ಚಟುವಟಿಕೆಗಳು ಇಂದಿಗೂ ನಡೆಯುತ್ತಿವೆ.
2015ರ ಜೂನ್ನಲ್ಲಿ ಇದೇ ರೀತಿ ಮನೆಯೊಂದರ ಮಹಡಿ ಮೇಲೆ ದೇಹವೊಂದು ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಿಂದ ಬಂದ ಬ್ರಿಟಿಷ್ ಏರ್ವೇಸ್ನಿಂದ ಇಬ್ಬರು ಜಿಗಿದಿದ್ದರು. ಅವರಲ್ಲಿ ಒಬ್ಬ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ. 2012ರ ಆಗಸ್ಟ್ನಲ್ಲಿ ಕೇಪ್ಟೌನ್ನಿಂದ ಹೀಥ್ರೂಗೆ ಬಂದಿದ್ದ ವಿಮಾನದ ಅಂಡರ್ ಕ್ಯಾರಿಯೇಜ್ನಲ್ಲಿ ವ್ಯಕ್ತಿಯ ದೇಹ ಪತ್ತೆಯಾಗಿತ್ತು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications