ಜಗತ್ತಿಗೇ ಸಿಹಿಸುದ್ದಿ! ಇದೀಗ HIV ಸೋಂಕು ಮಂಗಮಾಯ ಮಾಡೋಕೂ ಸಾಧ್ಯ!
ಲಂಡನ್, ಮಾರ್ಚ್ 05: ಇಡೀ ಜಗತ್ತಿಗೂ ಶಾಪವೆನ್ನಿಸಿದ ಎಚ್ ಐವಿ ಎಂಬ ಮಾರಿಗೂ ವೈದ್ಯರು ಪರಿಣಾಮಕಾರಿ ಚಿಕಿತ್ಸೆ ಹುಡುಕಿದ್ದಾರೆ. ಇಷ್ಟು ಕಾಲ ಎಚ್ ಐವಿ ಸೋಂಕು ನಿಯಂತ್ರಣಕ್ಕೆ, ಮತ್ತು ರೋಗವನ್ನು ಹತೋಟಿಗೆ ತರುವುದಕ್ಕೆ ಚಿಕಿತ್ಸೆಗಳಿದ್ದವಾದರೂ ಎಚ್ ಐವಿ ವೈರಸ್ ಅನ್ನೇ ದೇಹದಿಂದ ಆಚೆ ಹಾಕುವಂಥ ಪರಿಣಾಮಕಾರಿ ಚಿಕಿತ್ಸೆ ಇರಲಿಲ್ಲ. ಆದರೆ ಲಂಡನ್ನಿನಲ್ಲಿ ಎಚ್ ಐವಿ ಪೀಡಿತ ವ್ಯಕ್ತಿಯೊಬ್ಬ ಚಿಕಿತ್ಸೆಯ ನಂತರ ಸೋಂಕಿನಿಂದ ಸಂಪೂರ್ಣ ಹೊರಬಂದಿದ್ದಾರೆ.
ಬೋನ್ ಮ್ಯಾರೋ(ಅಸ್ತಿಮಜ್ಜೆ) ಕಸಿ ಚಿಕಿತ್ಸೆಯ ಮೂಲಕ ರೋಗಿಯನ್ನು ಎಚ್ ಐವಿ ಮುಕ್ತಗೊಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೀಗೆ ಎಚ್ ಐವಿ ಪೀಡಿತನಾಗಿ, ನಂತರ ಅದರಿಂದ ಸಂಪೂರ್ಣ ಹೊರಬಂದ ಎರಡನೇ ವ್ಯಕ್ತಿ ಇವರಾಗಿದ್ದಾರೆ.

ಇದಕ್ಕೂ ಮುನ್ನ 2007 ರಲ್ಲಿ ಅಮೆರಿಕದ ಟೊಮೋಥಿ ಬ್ರೌನ್ ಎಂಬುವವರಿಗೂ ಇದೇ ರೀತಿ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆಯ ನಂತರ ಅವರೂ ಎಚ್ ಐವಿ ಸೋಂಕಿನಿಂದ ಮುಕ್ತಿ ಪಡೆದಿದ್ದರು. ಅವರು ಇಂದಿಗೂ ಆರೋಗ್ಯವಂತರಾಗಿಯೇ ಇದ್ದು, ಯಾವುದೇ ರೀತಿಯ ಎಚ್ ಐವಿ ಸೋಂಕೂ ಅವರಿಗಿಲ್ಲ.
ಜಗತ್ತಿನಲ್ಲಿ ಸುಮಾರು 37 ದಶಲಕ್ಷ ಜನರು ಎಚ್ ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. 1980 ರಿಂದ ಆರಂಭವಾದ ಈ ಸೋಂಕು, ಸುಮಾರು 35 ದಶಲಕ್ಷಕ್ಕೂ ಹೆಚ್ಚು ಜನರನ್ನು ಇದುವರೆಗೂ ಬಲಿ ತೆಗೆದುಕೊಂಡಿದೆ.
ಅಸುರಕ್ಷಿತ ಲೈಂಗಿಕ ಸಂಪರ್ಕ ಅಥವಾ ಎಚ್ ಐವಿ ಸೋಂಕಿತ ವ್ಯಕ್ತಿಗಳ ರಕ್ತದ ಸಂಪರ್ಕದಿಂದ ಆರಂಭವಾಗುವ ಎಚ್ ಐವಿ ಸಂಕು ಒಮ್ಮೆ ದೇಹವನ್ನು ಹೊಕ್ಕರೆ ಅದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದುವರೆಗೂ ಇರಲಿಲ್ಲ. ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣ ಕಡಿಮೆ ಮಾಡುವ ಮೂಲಕ ವ್ಯಕ್ತಿಯ ದೇಹವನ್ನು ರೋಗಗಳ ಗೂಡನ್ನಾಗಿ ಮಾಡುವ ಭಯಾನಕ ಕಾಯಿಲೆ ಇದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications