ಮದುವೆ ಮುಗಿಸಿ ಹೊರಟಿದ್ದ ದಂಪತಿಯಿಂದ 3 ಲಕ್ಷದ ಚಿನ್ನಾಭರಣ ಲೂಟಿ
ಕೋಲಾರ, ಸೆಪ್ಟೆಂಬರ್ 14: ಬೈಕ್ ಅಡ್ಡಗಟ್ಟಿ ದಂಪತಿ ಕಣ್ಣಿಗೆ ಕಾರದಪುಡಿ ಎರಚಿ ಚಿನ್ನಾಭರಣ ದೋಚಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಬಳಿ ತಡರಾತ್ರಿ ನಡೆದಿದೆ.
ಬೆಂಗಳೂರಲ್ಲಿ ಹೊಸ ಕಾರು ಮನೆಗೆ ಬಂದಿದ್ದಷ್ಟೇ, 5 ಗಂಟೆಗಳಲ್ಲಿ ಮಾಯ
ತೊರಗನದೊಡ್ಡಿ ಗ್ರಾಮದ ವೆಂಕಟೇಶಪ್ಪ ಹಾಗೂ ಲಕ್ಷ್ಮೀದೇವಮ್ಮ ದಂಪತಿ ಮದುವೆಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಅಪರಿಚಿತರು ಗಾಡಿ ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ ಕಳ್ಳತನ ಮಾಡಿದ್ದಾರೆ, ಸುಮಾರು ಮೂರು ಲಕ್ಷ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೆಳಗಾವಿ ಬೈಕ್ ಕಳ್ಳರು ಬೆಂಗಳೂರಲ್ಲಿ ಮಾಡಿದ್ದೇನು?
ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಹುಲಿಬೆಲೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ದಂಪತಿ ತಡರಾತ್ರಿ ಬೈಕ್ ನಲ್ಲಿ ಬರುವ ವೇಳೆ ಬೈಕ್ ನ್ನು ತಡೆದ ದುಷ್ಕರ್ಮಿಗಳು ಒಡವೆಯನ್ನು ನೋಡಿದ್ದಾರೆ, ತಕ್ಷಣ ಕತ್ತಿಗೆ ಕೈಹಾಕಲು ಯತ್ನಿಸಿದ್ದಾರೆ ದಂಪತಿಗಳು ಬಿಡಿಸಿಕೊಳ್ಳಲು ಯತ್ನಿಸಿದಾಗ ಕಣ್ಣಿಗೆ ಕಾರದಪುಡಿ ಎರಚಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದೂರು ದಾಖಲಾಗಿದೆ.