ಕಾರವಾರ: ದೋಣಿ ಮುಳುಗಿ 9 ಸಾವು, ಸಂಖ್ಯೆ ಹೆಚ್ಚಾಗುವ ಭೀತಿ
Recommended Video

ಇಕೋಸ್ಪೇಸ್ ಸರ್ವೀಸ್ ರಸ್ತೆಯಲ್ಲಿ ವಾಹನಕ್ಕಿಂತ ದೋಣಿಯೇ ಭೇಷ್ | Oneindia Kannada
ಕಾರವಾರ, ಜನವರಿ 21: ಕಾರವಾರ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿಯೊಂದು ಮುಳುಗಿ 9 ಮಂದಿ ಅಸುನೀಗಿದ್ದಾರೆ.
ಕಾರವಾರದಿಂದ ಆರು ಕಿ.ಮೀ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಾರ್ಗಮಧ್ಯೆ ದುರ್ಘಟನೆ ಸಂಭವಿಸಿದೆ.
ದೋಣಿಯಲ್ಲಿ ಒಟ್ಟು 22 ಜನರಿದ್ದರು. ದೋಣಿ ಮುಗುಚಿದಾಗ 12 ಜನ ದೋಣಿಯ ಅಡಿಗೆ ಸಿಲುಕಿದರು. ರಕ್ಷಣಾ ತಂಡವು ಈವರೆಗೆ 9 ಶವಗಳನ್ನು ಹೊರತೆಗೆದಿದೆ. ಹಾಗೂ ಇಬ್ಬರನ್ನು ರಕ್ಷಿಸಿದೆ. ಇನ್ನೂ ಇಬ್ಬರಿಗಾಗಿ ಹುಡುಕಲಾಗುತ್ತಿದೆ. ಅವರೂ ಸಹ ಅಸನೀಗಿರುವ ಶಂಕೆ ಇದೆ.

ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ನಕುಲ್, ಪೊಲೀಸ್ ವರಿಷ್ಠಾಧಿಕಾರಿ ನಕುಲ್, ಕರಾವಳಿ ಕಾವಲು ಪೊಲೀಸರು ಭೇಟಿ ನೀಡಿದ್ದಾರೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಭಾರಿ ಜೋರಾಗಿ ಇರುವ ಕಾರಣ ರಕ್ಷಣಾ ಕಾರ್ಯ ನಿಧಾನವಾಗಿದೆ. ದೋಣಿ ಮುಗುಚಲು ಸಹ ಜೋರಾದ ಅಲೆಗಳ ಅಬ್ಬರವೇ ಕಾರಣ ಎನ್ನಲಾಗಿದೆ.












Click it and Unblock the Notifications