ಪೊಲೀಸರು ಕಡ್ಡಾಯವಾಗಿ ಹೊಟ್ಟೆ ಕರಗಿಸುವಂತೆ ಸುತ್ತೋಲೆ !
ಬೆಂಗಳೂರು, ಫೆಬ್ರವರಿ 15: ದಿನಕ್ಕೆ ಐದು ಕಿ.ಮೀ. ಓಡಬೇಕು, ಎರಡು ಕಿ.ಮೀ. ನಡೀಬೇಕು. ಇದರ ಜತೆಗೆ ವ್ಯಾಯಾಮ ಮೂಲಕ ದೇಹ ದಂಡನೆ ಮಾಡಬೇಕು ! ಮುಂದಿನ ಎರಡು ತಿಂಗಳಲ್ಲಿ ಕಡ್ಡಾಯವಾಗಿ ಹತ್ತು ಕೆ.ಜಿ. ದೇಹ ತೂಕ ಇಳಿಸಲೇಬೇಕು !
ಕರ್ನಾಟಕ ರಾಜ್ಯ ಮೀಸಲು ಪಡೆ ಪೊಲೀಸ್ ಸಿಬ್ಬಂದಿಗೆ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಕೊಟ್ಟಿರುವ ಟಾಸ್ಕ್ ಇದು. ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ನಿಯೋಜನೆಗೊಳ್ಳುವ ಕೆಎಸ್ ಆರ್ ಪಿ ಹಾಗೂ ಐಆರ್ ಬಿ ಸಿಬ್ಬಂದಿಯ ದೇಹ ದಂಡನೆ ಮೂಲಕ"ಫಿಟ್ ಪೊಲೀಸ್" ಅಭಿಯಾನಕ್ಕೆ ಕೆಎಸ್ಆರ್ಪಿ ಎಡಿಜಿಪಿ ಚಾಲನೆ ನೀಡಿದ್ದಾರೆ.
ಪ್ರಾಯೋಗಿಕವಾಗಿ ನಡೆಸಿದ ಈ ಅಭಿಯಾನದಿಂದ ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿ ಸ್ಲಿಮ್ ಆಗಿದ್ದಾರೆ. ಪೊಲೀಸಿಂಗ್ ಮಾಡಲಿಕ್ಕೂ ಫಿಟ್ ಆಗಿದ್ದಾರೆ. ಇದು ಇಲಾಖೆಗೆ ಅನುಕೂಲವಾದರೆ, ಇನ್ನು ಎಲ್ಲರ ಆರೋಗ್ಯ ಕೂಡ ಸುಧಾರಿಸಿದೆ. ಪ್ರಾಯೋಗಿಕ ಯಶಸ್ಸು ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿಗೆ ತೂಕ ಇಳಿಸಲು ಎರಡು ತಿಂಗಳು ಗುಡುವು ನೀಡಲಾಗಿದೆ. ಈ ಕುರಿತು ಎಲ್ಲಾ ಕಮಾಂಡಂಟ್ ಗಳಿಗೆ ಸೂಚಿಸಲಾಗಿದೆ. ಇಲ್ಲಿಯ ವರೆಗೂ ಬೆಳಗಿನ ಜಾವ ನಿದ್ದೆ ಮಾಡುತ್ತಿದ್ದ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಇದೀಗ ಬೆಳಗ್ಗೆ ಎದ್ದು ದೇಹ ದಂಡನೆ ಮಾಡಿ ತೂಕ ಇಳಿಸಲು ಮುಂದಾಗಿದ್ದಾರೆ.

ತೂಕ ಎಷ್ಟು ಇಳಿಸಬೇಕು:
ವಯೋಮಿತಿ ಅನುಸಾರವಾಗಿ ತೂಕ ಇಳಿಸಲು ಸೂಚಿಸಲಾಗಿದೆ. 40 ವರ್ಷದೊಳಗಿನ ಪೊಲೀಸ್ ಸಿಬ್ಬಂದಿ 10 ಕೆ.ಜಿ. ತೂಕ ಇಳಿಸಬೇಕು. 40 ರಿಂದ 50 ವರ್ಷದೊಳಗಿನ ಪೊಲೀಸ್ ಸಿಬ್ಬಂದಿ 5 ಕೆ.ಜಿ. ತೂಕ ಇಳಿಸಬೇಕು. 50 ರಿಂದ 55 ವರ್ಷದೊಳಗಿನ ಪೊಲೀಸ್ ಸಿಬ್ಬಂದಿ 2.5 ಕೆ.ಜಿ. ತೂಕ ಇಳಿಸಲೇಬೇಕು. ಏಪ್ರಿಲ್ 30, 2021 ರೊಳಗೆ ಇದು ಅನುಷ್ಠಾನಕ್ಕೆ ಬರಬೇಕು ಎಂದು ಎಲ್ಲಾ ಕಮಾಂಡಂಟ್ ಗಳಿಗೆ ಸೂಚಿಸಲಾಗಿದೆ.

ತೂಕ ಇಳಿಸೋದು ಹೇಗೆ :
ಕೆಎಸ್ ಆರ್ ಪಿ ಸಿಬ್ಬಂದಿ ಪ್ರತಿ ದಿನ ಐದು ಕಿ.ಮೀ. ಓಡಬೇಕು. ಎರಡು ಕಿ.ಮೀ. ವಾಕಿಂಗ್, ಜತೆಗೆ ನಾನಾ ರೀತಿಯ ವ್ಯಾಯಾಮ ಮಾಡಬೇಕು. ಈ ಮೂಲಕ ಎರಡು ತಿಂಗಳಲ್ಲಿ ಸೂಚಿತ ತೂಕ ಇಳಿಸಬೇಕು. ಈ ಮೂಲಕ ಪೊಲೀಸ್ ಸಿಬ್ಬಂದಿ ಆರೋಗ್ಯವಂತರಾಗಬೇಕು. ಜತೆಗೆ ಪೊಲೀಸಿಂಗ್ ಮಾಡಲಿಕ್ಕೂ ಫಿಟ್ ಆಗಿರಬೇಕು ಎಂಬ ಉದ್ದೇಶದಿಂದ ಈ ಸತ್ತೋಲೆ ಹೊರಡಿಸಲಾಗಿದೆ.

ಪ್ರಾಯೋಗಿಕ ಯಶಸ್ಸು:
ಅಲೋಕ್ ಕುಮಾರ್ ಕೆಎಸ್ ಆರ್ಪಿ ಎಡಿಜಿಪಿಯಾಗಿ ನಿಯೋಜನೆಗೊಂಡ ಬಳಿಕ ತೂಕ ಇಳಿಸಲು ದೇಹ ದಂಡನೆ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಪೊಲೀಸ್ ಸಿಬ್ಬಂದಿಯ ಅನಾರೋಗ್ಯ, ಹೊಟ್ಟೆ ಬಿಟ್ಟುಕೊಂಡು ಓಡಲಾರದ ಸ್ಥಿತಿಯಲ್ಲಿದ್ದ ಸಿಬ್ಬಂದಿ ಹೊಟ್ಟೆ ಕರಗಿಸಲು ಪ್ರಾಯೋಗಿಕವಾಗಿ ಈ ಪ್ಲಾನ್ ರೂಪಿಸಿದ್ದರು. ಇದು ಯಶಸ್ಸು ಆದ ಬಳಿಕ ರಾಜ್ಯದ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯ ಆರೋಗ್ ಮತ್ತು ಫಿಟ್ ಪೊಲೀಸಿಂಗ್ ಭಾಗವಾಗಿ ಈ ಅಭಿಯಾನ ಮುಂದುವರೆಸಿದ್ದಾರೆ. ಅಲೋಕ್ ಅವರ ಈ ಪ್ಲಾನ್ ಗೆ ಸಂತಸ ವ್ಯಕ್ತಪಡಿಸಿರುವ ಪೊಲೀಸ್ ಸಿಬ್ಬಂದಿ ಇದೀಗ ಬೆಳಗಾದರೆ ದೇಹ ದಂಡನೆ ಕಾರ್ಯದಲ್ಲಿ ತೊಡಗಿದ್ದಾರೆ.

ಹೊಟ್ಟೆ ಇಸ್ಪೀಟು
ಪೊಲೀಸ್ ಬಂದೋ ಬಸ್ತ್, ಗಲಾಟೆಯಾದರೆ ಮೊದಲು ನಿಯೋಜನೆಗೊಳ್ಳುವುದೇ ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿ. ಆದರೆ, ಯಾವಾಗಲೂ ಗ್ರಿಲ್ ಇರುವಂತಹ ಪೊಲೀಸ್ ವಾಹನದಲ್ಲಿ ಟೈಂ ಪಾಸ್ ಗೆ ಇಸ್ಪೀಟ್ ಎಲೆ ತಿರುವು ಹಾಕಿಕೊಂಡೇ ಇರುತ್ತಿದ್ದರು. ಹೀಗೆ ಕೂತಲ್ಲಿ ಕೆಲಸ ನಿರ್ವಹಿಸಿ ಅಗತ್ಯಕ್ಕಿಂತಲೂ ಹೆಚ್ಚು ಹೊಟ್ಟೆ ಬೆಳೆಸಿಕೊಂಡಿದ್ದರು. ಗಲಾಟೆಯಾದರೆ ಓಡಲಾರದ ಪರಿಸ್ಥಿತಿ. ಮನಸು ಪೊಲೀಸಿಂಗ್ ಮಾಡಲು ಹೇಳಿದರೂ ಅದಕ್ಕೆ ದೇಹ ಸ್ಪಂದನೆ ಮಾಡಲಾರದು. ಹೀಗಾಗಿ ಕೆಎಸ್ ಆರ್ ಪಿ ಸಿಬ್ಬಂದಿ ಡುಮ್ಮಣ್ಣ ಪೊಲೀಸ್ ರಾಗಿ ಗುರುತಿಸಿಕೊಂಡಿದ್ದರು. ಇದೀಗ ತೂಕ ಇಳಿಸಿ ತೂಕ ಇಳಿಸಿ ದೇಹ ದಂಡನೆ ಮಾಡುವ ಮೂಲಕ ಎಲ್ಲರಿಗೂ ಮಾದರಿ ಫಿಟ್ ಪೊಲೀಸ್ ಆಗಿ ಕಾಣತೊಡಗಿದ್ದಾರೆ. ಇದು ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
-
Jr NTR: ನಟ ಜ್ಯೂನಿಯರ್ ಎನ್ಟಿಆರ್ ಬೆಂಗಳೂರು ಭೇಟಿ ವೇಳೆ ಅಭಿಮಾನಿಗಳ ನೂಕುನುಗ್ಗಲು; ಆಸ್ಪತ್ರೆಯ ಎಸ್ಕಲೇಟರ್ ಧ್ವಂಸ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ












Click it and Unblock the Notifications