School Holiday: ಜುಲೈ 7 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಕರ್ನಾಟಕದಲ್ಲಿ ಶಾಲೆ & ಕಾಲೇಜುಗಳು ಶುರುವಾಗಿ ಒಂದು ತಿಂಗಳು ಕಳೆಯುವ ಒಳಗಾಗಿ ಭಾರಿ ರಜೆಗಳು ಸಿಗುತ್ತಿವೆ. ಇನ್ನೂ ಶ್ರಾವಣ ಶುರುವಾಗಿ, ಹಬ್ಬಗಳು ಕೂಡ ಆರಂಭವಾಗಿಲ್ಲ. ಹೀಗಿದ್ದರೂ ಜೂನ್ ತಿಂಗಳು ಹಲವು ರಜೆಗಳನ್ನ ನೀಡಲಾಗಿತ್ತು. ಅದರಲ್ಲೂ, ಶನಿವಾರ ಮತ್ತು ಭಾನುವಾರ ಕಳೆದ ನಂತರ ಸೋಮವಾರ ಕೂಡ ಶಾಲೆ & ಕಾಲೇಜುಗಳಿಗೆ ರಜೆ ಸಿಕ್ಕರೆ ವಿದ್ಯಾರ್ಥಿಗಳಿಗೆ ಖುಷಿ ಹೇಗೆ ಇರಬೇಡ? ಹೀಗಿದ್ದಾಗಲೇ, ಜುಲೈ 7 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ರಜೆ.. ರಜೆ.. ರಜೆ... ಹೀಗೆ ಶಾಲೆ & ಕಾಲೇಜುಗಳಿಗೆ ರಜೆ ಕೊಟ್ಟರೆ ವಿದ್ಯಾರ್ಥಿಗಳು ಫುಲ್ ಖುಷಿ ಆಗ್ತಾರೆ. ಬೇಸಿಗೆ ರಜೆ ಅಂತಾ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಈಗಾಗಲೇ ಸಖತ್ ರಿಲ್ಯಾಕ್ಸ್ ಮಾಡಿ ಬಂದಿದ್ದಾರೆ. ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾನೇ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆಯನ್ನ ಘೋಷಣೆ ಮಾಡಲಾಗಿತ್ತು. ಹೀಗೆ 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಇಂತಹ ಸಮಯದಲ್ಲೇ ಮತ್ತೆ ಮತ್ತೆ ಶಾಲೆ & ಕಾಲೇಜುಗಳಿಗೆ ಪದೇ, ಪದೇ ರಜೆ ಘೋಷಣೆ ಮಾಡುವ ಪರಿಸ್ಥಿತಿ ಬರುತ್ತಿದೆ....

School Holiday May Announce In Karnataka On July 7 Of 2025 Because Of Rain

ಜುಲೈ 7 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ?

ಹೌದು, ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರೆ ವಿದ್ಯಾರ್ಥಿಗಳು ಫುಲ್ ಖುಷಿ ಆಗೋದು ಪಕ್ಕಾ. ಆದರೆ ಹಿಂಗೆ ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡುತ್ತಿದ್ದರೆ ಶಿಕ್ಷಕರು ಹಾಗೂ ಅಮ್ಮ & ಅಪ್ಪ ಸೇರಿದಂತೆ ಮಕ್ಕಳ ಪೋಷಕರಿಗೆ ಸಿಕ್ಕಾಪಟ್ಟೆ ಟೆನ್ಷನ್ ಶುರುವಾಗುತ್ತದೆ. ಒಂದು ಕಡೆ ಪಾಠಗಳು ಹಿಂದೆ ಉಳಿಯುತ್ತವೆ, ಇನ್ನೊಂದು ಕಡೆ ವಿದ್ಯಾರ್ಥಿಗಳ ಭವಿಷ್ಯದ ಚಿಂತೆ ಶುರುವಾಗುತ್ತದೆ. ಹೀಗಿದ್ದಾಗಲೇ, ಜುಲೈ 7 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಈ ಕಾರಣಕ್ಕೆ ಸೋಮವಾರ ರಜೆ ಘೋಷಣೆ?

ಬೆಂಗಳೂರು ಸೇರಿ ಕರಾವಳಿ ಪ್ರದೇಶ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿದಂತೆ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಹಲವು ಕಡೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಈಗಾಗಲೇ ಭಾರಿ ಮಳೆ ಕಾರಣಕ್ಕೆ ಕ್ರಮ ಕೂಡ ಕೈಗೊಳ್ಳಲಾಗಿದೆ. ಇಂತಹ ಸಮಯದಲ್ಲೇ ಮತ್ತೆ ಸೋಮವಾರದಿಂದ ಕೂಡ ಇನ್ನಷ್ಟು ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಜುಲೈ 7 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಮತ್ತೊಂದು ಕಡೆ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭಾರಿ ಮಳೆ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಕೂಡ ನಿರ್ಮಾಣವಾಗಿದೆ.

2025 ಆರಂಭದಲ್ಲೇ ಮಳೆ.. ಮಳೆ..

ಮಳೆ.. ಮಳೆ.. ಕಳೆದ ಬಾರಿ ಬೇಸಿಗೆ ಕಾಲ ಶುರುವಾಗಿದ್ದರೂ ಮಳೆಯ ಆರ್ಭಟಕ್ಕೆ ಮಾತ್ರ ಬ್ರೇಕ್ ಬಿದ್ದಿರಲ್ಲ. ಮಳೆ ಆರ್ಭಟಿಸುತ್ತಿದ್ದ ರೀತಿ ಕಂಡು ಕನ್ನಡ ನಾಡಿನ ಜನರೂ ಬೆಚ್ಚಿ ಬಿದ್ದಿದ್ದರು. ಜೊತೆಗೆ ಹೀಗೆಲ್ಲ ಭಾರಿ ಮಳೆ ಕಾರಣ ನೂರಾರು ರೀತಿ ಸಮಸ್ಯೆ ಎದುರಾಗಿದ್ದವು. ಇನ್ನೇನು ಬೇಸಿಗೆ ಕಾಲ ಆರಂಭ ಆಗಬೇಕು ಅನ್ನುವಾಗಲೂ ಮಳೆರಾಯ ತನ್ನ ಆರ್ಭಟ ಮುಂದುವರಿಸಿ ಹೊಸ ತಲೆನೋವು ತರಿಸಿದ್ದರು. ಹೀಗಿದ್ದಾಗ ಮಳೆಗಾಲ ಆರಂಭ ಆಗಿದ್ದು, ವರುಣನ ಆರ್ಭಟ ನೋಡಿ ಜನರು ಇನ್ನಷ್ಟು ಭಯಗೊಂಡಿದ್ದಾರೆ. ಹೌದು, ಮಳೆ ಇಲ್ಲದೆ 2023 ಪೂರ್ತಿ ಬರದ ಬೇಗೆಯಲ್ಲೇ ಜನ ಪರದಾಡಿದ್ದರು. ನಂತರ ಅದು ಯಾಕೋ ಏನೋ, 2024ರ ಆರಂಭದಲ್ಲೇ ಮಳೆ ಜೋರಾಗಿ ಅಬ್ಬರಿಸಲು ಶುರುವಾಯ್ತು. ಹೀಗೆ ಭರ್ಜರಿ ಮುಂಗಾರು ಮಳೆ ಸುರಿದ ಕಾರಣ ಜನರು ಕೂಡ ಪರದಾಡಿದ್ದರು. ನಂತರ ಹಿಂಗಾರು ಮಳೆ ಕೂಡ ಅಬ್ಬರಿಸಿತ್ತು, ಇದೇ ರೀತಿ ಈಗ 2025 ಆರಂಭದಲ್ಲೇ ಮಳೆ ತನ್ನ ಅಸಲಿ ರೂಪ ತೋರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+