ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಕುಮ, ಗಂಧ ಸಿಗುತ್ತೆ, ತೀರ್ಥ ಕೇಳಬೇಡಿ: ದೇವಸ್ಥಾನ ತೆರೆಯಲು 6 ಷರತ್ತುಗಳು

|
Google Oneindia Kannada News

ಬೆಂಗಳೂರು, ಜೂನ್ 1: ಈಗಾಗಲೇ ವರದಿಯಾಗಿರುವಂತೆ, ಜೂನ್ ಒಂದರ ಬದಲು, ಜೂನ್ ಎಂಟರಂದು, ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳ ಸಹಿತ, ಎಲ್ಲಾ ದೇವಾಲಯಗಳು ಭಕ್ತರ ದರ್ಶನಕ್ಕೆ ತೆರೆಯಲಿವೆ.

"ಈ ಮೊದಲು ಜೂನ್ 1ಕ್ಕೆ ತೆರೆಯಬೇಕೆಂದು ನಿರ್ಧರಿಸಲಾಗಿದ್ದರೂ, ಕೇಂದ್ರ ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಯ ಮೇರೆಗೆ ಜೂನ್ 8ಕ್ಕೆ ದೇವಾಲಯ ತೆರೆಯುವುದನ್ನು ಮುಂದೂಡಲಾಗಿದ್ದು, ಎಲ್ಲಾ ಭಕ್ತರು ಸಹಕರಿಸಬೇಕಾಗಿ" ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ.

ಭಕ್ತರ ಗಮನಕ್ಕೆ; ಸೋಮವಾರ ದೇವಾಲಯ ಬಾಗಿಲು ತೆರೆಯಲ್ಲಭಕ್ತರ ಗಮನಕ್ಕೆ; ಸೋಮವಾರ ದೇವಾಲಯ ಬಾಗಿಲು ತೆರೆಯಲ್ಲ

ಮಾರ್ಗಸೂಚಿಯ ಪ್ರಕಾರ, ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲು, ಈಗಿಂದಲೇ ಪೂರ್ವ ತಯಾರಿ ನಡೆಸಿಕೊಳ್ಳುವಂತೆ ಸಚಿವರು, ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬದರಿನಾಥ ದೇವಾಲಯ ತೆರೆದಾಗ ನಡೆದ ಅಪರೂಪದ ವಿಸ್ಮಯ, ದೇಶಕ್ಕೆ ಶುಭ ಸೂಚನೆಬದರಿನಾಥ ದೇವಾಲಯ ತೆರೆದಾಗ ನಡೆದ ಅಪರೂಪದ ವಿಸ್ಮಯ, ದೇಶಕ್ಕೆ ಶುಭ ಸೂಚನೆ

"ದೇವಾಲಯದಲ್ಲಿ ಕುಂಕುಮ ಗಂಧ ಸಿಗುತ್ತದೆ. ಆದರೆ ತೀರ್ಥ ಸಿಗುವುದಿಲ್ಲ"ಎಂದು ಈಗಾಗಲೇ ಸಚಿವ ಕೋಟ ಪೂಜಾರಿಯವರು ಹೇಳಿದ್ದಾರೆ. ಇಲಾಖೆಯ ಆಯುಕ್ತರ ಸುತ್ತೋಲೆಯ ಪ್ರಕಾರ, ಎಲ್ಲಾ ದೇವಾಲಯಗಳು, ಈ ಮಾರ್ಗಸೂಚಿಯನ್ನು ಪಾಲಿಸಬೇಕಿದೆ. ಆರು ಷರತ್ತುಗಳು, ಹೀಗಿವೆ:

ಮಾಸ್ಕ್ ಅಥವಾ ಮೂಗು ಮುಚ್ಚವಂತೆ ಕರವಸ್ತ್ರ

ಮಾಸ್ಕ್ ಅಥವಾ ಮೂಗು ಮುಚ್ಚವಂತೆ ಕರವಸ್ತ್ರ

1. ಎಲ್ಲಾ ದೇವಾಲಯದ ಪ್ರವೇಶ ದ್ವಾರಗಳಲ್ಲಿ ಉಷ್ಣತೆ ಪರೀಕ್ಷೆ ಕಡ್ಡಾಯ. ನಿಗದಿಗಿಂತ ಹೆಚ್ಚಿನ ಉಷ್ಟತೆ ಕಂಡು ಬಂದರೆ, ದೇವಾಲಯದೊಳಗೆ ಪ್ರವೇಶ ನೀಡಬಾರದು.

2. ಮಾಸ್ಕ್ ಅಥವಾ ಮೂಗು ಮುಚ್ಚವಂತೆ ಕರವಸ್ತ್ರಗಳನ್ನು ಧರಿಸಿದವರಿಗೆ ಮಾತ್ರ, ದೇವಾಲಯದೊಳಗೆ ಬಿಡಬೇಕು.

ಹೆಚ್ಚಿನ ಭದ್ರತಾ ಸಿಬ್ಬಂದಿ

ಹೆಚ್ಚಿನ ಭದ್ರತಾ ಸಿಬ್ಬಂದಿ

3. ಮಾರ್ಗಸೂಚಿ ಪಾಲಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿ ಬೇಕಿದ್ದಲ್ಲಿ, ಆಯಾಯ ದೇವಾಲಗಳು ಎರಡು ತಿಂಗಳ ಮಟ್ಟಿಗೆ ಇವರನ್ನು ನೇಮಿಸಿಕೊಳ್ಳಬಹುದು. ಇದಕ್ಕೆ ತಗಲುವ ಖರ್ಚನ್ನು ಆಯಾಯ ದೇವಾಲಯಗಳೇ ಭರಿಸಬೇಕು.

ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸಚಿವ ಕೋಟ ಶ್ರೀನಿವಾಸ ಪೂಜಾರಿ

4. ದೇವಾಲಯದ ಅರ್ಚಕ ವೃಂದ, ಒಳಾಂಗಣ ಸಿಬ್ಬಂದಿ ಹೊರತು ಪಡಿಸಿ, ಅಧಿಕಾರಿಗಳು/ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.

5.ದೇವಾಲಯದ ದ್ವಾರದಲ್ಲೇ ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು. ಇದಕ್ಕೂ ದೇವಾಲಯದ ನಿಧಿಯನ್ನೇ ಬಳಸಬೇಕು.

ಸ್ವಚ್ಚತೆಗೆ ಆದ್ಯತೆಯನ್ನು ನೀಡಬೇಕು

ಸ್ವಚ್ಚತೆಗೆ ಆದ್ಯತೆಯನ್ನು ನೀಡಬೇಕು

6. ದೇವಾಲಯದಲ್ಲಿ ಸ್ವಚ್ಚತೆಗೆ ಆದ್ಯತೆಯನ್ನು ನೀಡಬೇಕು. ದೇವಾಲಯದ ಹೊರ ಮತ್ತು ಒಳಾವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸುತ್ತಿರಬೇಕು. ಶೌಚಾಲಯಗಳನ್ನು ಸ್ವಚ್ಜಗೊಳಿಸುತ್ತಿರಬೇಕು.

ಈ ಎಲ್ಲಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋರಿದ್ದಾರೆ. ಜೊತೆಗೆ, ಭಕ್ತರೂ ಸಹಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

English summary
Religious Centers Opens On June 8th. Six Guidelines Temple Authorities Should Follow, Minister Kota Srinivasa Poojary Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X