ಸಿಎಂ ಕೊಠಡಿಯ ಮುಂದೆ ಕೂತ ಗೂಬೆ: ಶಕುನವೋ, ಅಪಶಕುನವೋ
ಬೆಂಗಳೂರು, ಆ 26: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮತ್ತೆ ಗೂಬೆ ಕಾಣಿಸಿಕೊಂಡಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಠಡಿಯ ಬಾಗಿಲಲ್ಲಿ ಗೂಬೆ ಕೆಲಕಾಲ ಕೂತಿದ್ದು ಸಿಬ್ಬಂದಿಗಳು ಗುಸುಗುಸು ಮಾತನಾಡುವಂತೆ ಮಾಡಿದೆ.
ಶನಿವಾರ (ಆ 26) ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಕಚೇರಿಯ ಮುಂದೆ ಗೂಬೆ ಸ್ವಲ್ಪಹೊತ್ತು ಕೂತಿತ್ತು. ಈ ವರ್ಷದ ಆದಿಯಲ್ಲಿ ಬಾಂಕ್ವೆಟ್ ಹಾಲಿನಲ್ಲಿ ಗೂಬೆ ಕಾಣಿಸಿಕೊಂಡಿತ್ತು. ಇದು ಸಿದ್ದರಾಮಯ್ಯನವರಿಗೆ ಅಪಶಕುನ ಎಂದು ಜ್ಯೋತಿಷಿಗಳು ಪುಂಖಾನುಪುಂಖವಾಗಿ ಭವಿಷ್ಯ ನುಡಿದಿದ್ದರು.

ಇದಾದ ನಂತರ, ಮುಖ್ಯಮಂತ್ರಿಗಳ ಕಾರಿನ ಮೇಲೆ ಮುದಿಕಾಗೆ ಕೂತಿತ್ತು, ಕಾಕತಾಳೀಯ ಎನ್ನುವಂತೆ ಸಿದ್ದರಾಮಯ್ಯ ಅದೇ ಸಮಯದಲ್ಲಿ ಕಾರನ್ನೇ ಬದಲಾಯಿಸಿದ್ದರು. ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿಎಂ ಧೋತಿಯ ಮೇಲೆ ಕಾಗೆ ಹಿಕ್ಕೆಹಾಕಿತ್ತು.
ಈ ಎಲ್ಲಾ ವಿಚಾರಗಳ ಮೇಲಿನ ಶುಭಶಕುನ, ಅಪಶಕುನದ ಬಗ್ಗೆ ಟಿವಿಯಲ್ಲಿ ಭಯಂಕರ ಚರ್ಚೆ ನಡೆಯುತ್ತಿದ್ದ ವೇಳೆ ನಾಡಿನ ಜ್ಯೋತಿಷಿಗಳನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದರು.
ಓಪನ್ ವೇದಿಕೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಅಲ್ಲಿ ಹಕ್ಕಿಗಳು ಹಿಕ್ಕೆಹಾಕದೇ ಇನ್ಯಾರು ಹಾಕಕಾಗಾತ್ತೆ. ಕಾರು ಬದಲಾಯಿಸಬೇಕಿತ್ತು, ಅದೇ ಸಮಯಕ್ಕೆ ಸರಿಯಾಗಿ ಕಾಗೆ ಕಾರಿನ ಮೇಲೆ ಕೂತಿತು, ಕಾಗೆ ಕೂತಿದ್ದಕ್ಕೆ ಸಿದ್ದರಾಮಯ್ಯ ಕಾರ್ ಚೇಂಚ್ ಮಾಡಿದ್ರು ಎಂದು ಜ್ಯೋತಿಷಿಗಳು ಹೇಳಿದ್ರು.
ಗೂಬೆ ಬಂತು.. ಕಾಗೆ ಬಂತು.. ಸಿದ್ದರಾಮಯ್ಯನವರ ಅಧಿಕಾರ ಹೋಗುತ್ತದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದೇ ನುಡಿದದ್ದು. ಇನ್ನೂ ಮುಖ್ಯಮಂತ್ರಿಯಾಗಿಲ್ವೇನ್ರೀ ನಾನು ಎಂದು ಸಭೆಯಲ್ಲಿ ಜ್ಯೋತಿಷಿಗಳನ್ನು ಸಿದ್ದು ಲೇವಡಿ ಮಾಡಿದ್ದರು.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications