ಎಲ್ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸ
ಬೆಂಗಳೂರು, ಅಕ್ಟೋಬರ್. 05: ವಿದ್ಯುತ್ ಅಭಾವದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಎಲ್ ಇಡಿ ಬಲ್ಬ್ ಕಡ್ಡಾಯ ಮಾಡಲು ಮುಂದಾಗಿದೆ. ಅಲ್ಲದೇ 2016ರ ಜನವರಿಯಿಂದ ಎಲ್ ಇಡಿ ಬಲ್ಬ್ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಕಟಿಸಿದ್ದಾರೆ.
ಆದರೆ ಜನರಲ್ಲಿ ಈ ಎಲ್ ಇಡಿ, ಸಿಎಫ್ ಎಲ್ ಮತ್ತು ಸಾಮಾನ್ಯ ಬಲ್ಬ್ ಗಳ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲಗಳಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಬಲ್ಬ್ ಗಳ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸದ ವಿವರಣೆಯನ್ನು ಯಾರೂ ನೀಡುತ್ತಿಲ್ಲ. ಸರ್ಕಾರ ಜಾಹೀರಾತು ಹೊರಡಿಸುತ್ತಿದೆಯೇ ವಿನಃ ಏತಕ್ಕಾಗಿ ಉಪಯೋಗ ಮಾಡಬೇಕು ಎಂಬುದನ್ನು ಪರಿಣಾಮಕಾರಿಯಾಗಿ ತಿಳಿಸಿ ಹೇಳುತ್ತಿಲ್ಲ.[ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು]

ಇನ್ನು ಮುಂದೆ ಮಾರುಕಟ್ಟೆಯಲ್ಲಿ ಕೇವಲ ಎಲ್ ಇಡಿ ಮಾತ್ರ ಸಿಗುತ್ತದೆಯೇ? ಅಥವಾ ಹಳೆಯ ಮಾದರಿ ಬಲ್ಬ್ ಗಳು ಸಿಗುತ್ತವೆಯೇ? ದರ ಏಷ್ಟು? ಎಂಬ ಅನೇಕ ಪ್ರಶ್ನೆಗಳಿವೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.[ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್ ನಲ್ಲಿ ಎಲ್ಲ ಮಾಹಿತಿ]
| ವಿವರ | ಎಲ್ ಇಡಿ | ಸಾಮಾನ್ಯ | ಸಿಎಫ್ ಎಲ್ |
| ಆಯುಷ್ಯ | 50 ಸಾವಿರ ಗಂಟೆ | 1200 ಗಂಟೆ | 8000 ಗಂಟೆ |
| ತೆಗೆದುಕೊಳ್ಳುವ ವಿದ್ಯುತ್(60 ವಾಟ್ ನ ಬಲ್ಬ್ ಅಂದುಕೊಂಡರೆ) | 6-8 ವಾಟ್ | 60 ವಾಟ್ | 13-15 ವಾಟ್ |
| ವರ್ಷಕ್ಕೆ ಎಷ್ಟು? | 329 ಕಿಲೋ ವಾಟ್ | 3285 ಕಿಲೋ ವಾಟ್ | 767 ಕಿಲೋ ವಾಟ್ |
| ಹೊರ ಹಾಕುವ ಕಾರ್ಬನ್ ಡೈ ಆಕ್ಸೈಡ್(ವರ್ಷಕ್ಕೆ) | 451 ಪೌಂಡ್ಸ್ | 4500 ಪೌಂಡ್ಸ್ | 1051 ಪೌಂಡ್ಸ್ |
| ಕಡಿಮೆ ಉಷ್ಣತೆಯಲ್ಲಿ ಕೆಲಸ ಮಾಡುತ್ತದೆಯೇ? | ಮಾಡುತ್ತದೆ. ಸಮಸ್ಯೆ ಇಲ್ಲ | ಕೆಲವೊಮ್ಮೆ ಕೈ ಕೊಡಬಹುದು | -10 ಡಿಗ್ರಿಗಿಂತ ಕಡಿಮೆ ಉಷ್ಣತೆಯಲ್ಲಿ ಕೆಲಸ ಮಾಡುವುದಿಲ್ಲ |
| ಹ್ಯುಮಿಡಿಟಿ (ತೇವಾಂಶ)ಪರಿಣಾಮ | ಇಲ್ಲ | ಕೆಲವೊಮ್ಮೆ | ಇದೆ |
| ಬಳಕೆಯಲ್ಲಿನ ವ್ಯತ್ಯಾಸ ಪರಿಣಾಮ ಬೀರುತ್ತದೆಯೇ? | ಇಲ್ಲ | ಕೆಲವೊಮ್ಮೆ | ಹೌದು, ಒಟ್ಟು ಅವಧಿ ಕಡಿಮೆ ಆಗಬಹುದು |
| ಅಪಘಾತ ಸಂಭವ | ಬಹಳ ಕಡಿಮೆ | ಬೆಂಕಿ ತಗುಲುವ ಸಾಧ್ಯತೆ ಹೆಚ್ಚು | ಅವಧಿ ಮುಗಿಯುತ್ತಿರವ ವೇಳೆ ಬೆಂಕಿ ಹೊತ್ತಿಕೊಳ್ಳಬಹುದು |
| ಬಳಕೆ | ಬಳಕೆ ಬಹಳ ಸುಲಭ | ಬಳಕೆ ಕಷ್ಟ ಸಾಧ್ಯ, ಒಡೆದು ಹೋಗುವ ಸಾಧ್ಯತೆ ಹೆಚ್ಚು | ಇದು ಸಹ ಗಾಜಿನದ್ದಾದ್ದರಿಂದ ಎಚ್ಚರಿಕೆಯಿಂದಿರಬೇಕು |
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: ನೀರಿನ ಬಿಲ್ ಮೇಲಿನ ಬಡ್ಡಿ ಶೇ.100ರಷ್ಟು ಮನ್ನಾ; ಡಿಕೆಶಿ ಮಹತ್ವದ ಘೋಷಣೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ











Click it and Unblock the Notifications