ಆನ್ಲೈನ್ ಟ್ಯಾಕ್ಸಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಮೂಗುದಾರ
ಬೆಂಗಳೂರು, ಫೆಬ್ರವರಿ, 17: ಗ್ರಾಹಕರ ಸುರಕ್ಷತೆ ಮತ್ತು ಟ್ಯಾಕ್ಸಿ ಸಂಸ್ಥೆಗಳು ವಿಧಿಸುತ್ತಿರುವ ಅಧಿಕ ದರದ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಟ್ಯಾಕ್ಸಿ ಸಂಸ್ಥೆಗಳು ಮತ್ತು ಚಾಲಕರಿಗೆ ಹೊಸ ನಿಯಮಾವಳಿಗಳನ್ನು ಜಾರಿ ಮಾಡಿದ್ದು ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದೆ.
ಆನ್ ಲೈನ್ ಮೂಲಕ ಕ್ಯಾಬ್ ಸೇವೆ ನೀಡುತ್ತಿರುವ ಕಂಪನಿ ಮತ್ತು ಚಾಲಕರಿಗೆ ರಾಜ್ಯ ಸರ್ಕಾರ ಹೊಸ ನಿಯಮಾವಳಿಗಳನ್ನು ಅನುಸರಿಸುವಂತೆ ತಿಳಿಸಿದೆ. ಅಗ್ರಿಗೇಟರ್ ಸರ್ವೀಸ್ ಲೈಸನ್ಸ್ ಇರದ ಕಂಪನಿಗಳು ಇನ್ನು ಮುಂದೆ ಸೇವೆ ನೀಡುವಂತಿಲ್ಲ.[ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?]

ಫೆಬ್ರವರಿ 9 ರಂದೇ ಆದೇಶ ಹೊರಡಿಸಲಾಗಿದ್ದು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಒಲಾ 'ನಮ್ಮ ಸಂಸ್ಥೆಯ ಎಲ್ಲ ಚಾಲಕರಿಗೆ ನಿಯಮಾವಳಿ ಬಗ್ಗೆ ತಿಳುವಳಿಕೆ ನೀಡಿದ್ದೇವೆ" ಎಂದು ತಿಳಿಸಿದೆ.
ಹೊಸ ನಿಯಮಾವಳಿಯಪ್ರಮುಖ ಅಂಶಗಳು
* ಸೇವೆ ನೀಡುವ ಕಂಪನಿ ಕನಿಷ್ಠ ನೂರು ಟ್ಯಾಕ್ಸಿಗಳನ್ನು ಹೊಂದಿರಬೇಕು. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]
* ಸೇವೆ ನೀಡುವವರು ತಮ್ಮ ಬಳಿ ಕಂಟ್ರೊಲ್ ರೂಂ ಸೌಲಭ್ಯವನ್ನು ಹೊಂದಿರಬೇಕು
* ಟ್ಯಾಕ್ಸಿ ಚಾಲಕ ಮತ್ತು ಇತರ ಮಾಹಿತಿ ಒಳಗೊಂಡ ಫಲಕ ಇರುವುದು ಕಡ್ಡಾಯ
* ಎಲೆಕ್ಟ್ರಾನಿಕ್ ಡಿಜಿಟಲ್ ಮೀಟರ್ ಮೂಲಕ ವಾಹನ ಮಾನ್ಯತೆ ಪಡೆದುಕೊಂಡಿರಬೇಕು.
* ಹಳದಿ ಬಣ್ಣದ ಬೋರ್ಡ್ ಹೊಂದಿದ್ದು ದೊಡ್ಡದಾಗಿ ಟ್ಯಾಕ್ಸಿ ಎಂದು ಬರೇದಿರಬೇಕು
* ಚಾಲಕ ಕರ್ನಾಟಕದವರೇ ಅಗಿದ್ದರೆ ಒಳಿತು ಇಲ್ಲವಾದಲ್ಲಿ ರಾಜ್ಯದಲ್ಲಿ ನೆಲೆಸಿ ಕನಿಷ್ಠ 5 ವರ್ಷ ಕಳೆದಿರಬೇಕು
* ಚಾಲಕನಿಗೆ ಕನ್ನಡ ಗೊತ್ತಿರಬೇಕು ಜತೆಗೆ ಇಂಗ್ಲಿಷ್ ನಲ್ಲಿ ವ್ಯವಹರಿಸುವಂತೆ ಇರಬೇಕು
* ರಾಜ್ಯ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಅಧಿಕ ತೆಗೆದುಕೊಳ್ಳುವಂತಿಲ್ಲ
* ಚಾಲಕರಿಗೆ ವರ್ಷದಲ್ಲಿ ಒಂದು ಸಾರಿ ಸುರಕ್ಷತಾ ಕ್ರಮ ಮತ್ತು ಮಾರ್ಗದರ್ಶಿ ಸೂತ್ರಗಳ ಬಗ್ಗೆ ತಿಳಿವಳಿಕೆ ನೀಡಬೇಕಾದ್ದು ಅಗತ್ಯ
* ಗ್ರಾಹಕರ ಮೇಲೆ ತಪ್ಪು ಕಾರಣ ನೀಡಿ ಅಧಿಕ ಹಣ ವಸೂಲಿ ಮಾಡುವಂತಿಲ್ಲ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications