ಕುಟುಂಬಕ್ಕೊಂದೇ ರಿಯಾಯ್ತಿ ದರದ ಮೈಸೂರು ಸಿಲ್ಕ್ ರೇಷ್ಮೆ ಸೀರೆ!
Recommended Video

ಬೆಂಗಳೂರು, ಆಗಸ್ಟ್ 1: ವರಮಹಾಲಕ್ಷ್ಮೀ ಹಬ್ಬ ಹತ್ತಿರ ಬಂದಿದೆ, ಈ ಹಬ್ಬಕ್ಕೆ ಮಧ್ಯಮ ವರ್ಗದ ಮಹಿಳೆಯರಿಗೆ 4500 ರೂಗೆ ಮೈಸೂರು ರೇಷ್ಮೆ ಸೀರೆ ನೀಡಲು ಸೂಕ್ತ ಮಾನದಂಡ ರಚಿಸಲಾಗುತ್ತಿದೆ. ಅದರಂತೆ ಕುಟುಂಬಕ್ಕೆ ಒಂದೇ ಸೀರೆ ನೀಡುವ ಚಿಂತನೆ ಇದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.
ಮೈಸೂರು ಸಿಲ್ಕ್ ಸೀರೆ ದುಬಾರಿ ಬೆಲೆಯದ್ದಾಗಿದೆ, ಕುಟುಂಬದಲ್ಲಿರುವ ಎಲ್ಲ ಮಹಿಳೆಯರಿಗೂ 15 ಸಾವಿರ ಬೆಲೆಯ ಸೀರೆಯನ್ನು 4500 ರೂ.ಗೆ ನೀಡಲು ಕಷ್ಟವಾಗುತ್ತದೆ ಹಾಗಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಒಂದರಂತೆ ಮೈಸೂರು ಸಿಲ್ಕ್ ಸೀರೆಯನ್ನು ನೀಡಲಾಗುತ್ತದೆ ಎಂದು ಎಂದು ಮಂಗಳವಾರ ತಿಳಿಸಿದ್ದಾರೆ.
ಸೀರೆ ದುಬಾರಿಯಾಗಿರುವ ಕಾರಣ ಮಧ್ಯಮ ವರ್ಗದವರು ಇದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬ ಆರೋಪವಿತ್ತು. ಆದ ಕಾರಣ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 15ರಿಂದ 16ಸಾವಿರ ರೂ. ಬೆಲೆ ಬಾಳುವ ರೇಷ್ಮೆ ಸೀರೆಯನ್ನು 4500 ರೂ.ಗೆ ನೀಡುವುದಾಗಿ ಭರವಸೆ ನೀಡಿದ್ದೆ ಎಂದು ಹೇಳಿದರು.
ಇದು ಸ್ವಲ್ಪ ತಡವಾಗುವುದರಿಂದ ಟೀಕೆ ಕೇಳಿಬರುತ್ತಿದ್ದು, ನಾವು ಸೀರೆ ಕೊಡಲು ಬದ್ಧರಾಗಿದ್ದೇವೆ. ಇದಕ್ಕೆ ಅಗತ್ಯ ಮಾನದಂಡ ರಚಿಸಲಾಗುತ್ತದೆ, ಒಂದು ಕುಟುಂಬಕ್ಕೆ ಒಂದೇ ಸೀರೆ ನೀಡಿರುವುದರಿಂದ ಅಸಮಧಾನಗೊಳ್ಳುತ್ತಾರೆ ಆದರೂ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದರಿಂದ 5-6ಕೋಟಿ ರೂ ನಷ್ಟವಾಗುತ್ತದೆ. ಇದನ್ನು ಎಂಎಸ್ಐಎಲ್ ಹಾಗೂ ಇಲಾಖೆ ತಲಾ ಶೇ.50ರಷ್ಟು ಭರಿಸಲಿದೆ. ಹೀಗಾಗಿ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ಸೀರೆ ನೀಡುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ವರಮಹಾಲಕ್ಷ್ಮೀ ಹಬ್ಬ ಎರಡು ದಿನ ಇರುವಾಗ ಸೀರೆ ಮಾರಾಟ
ಸರ್ಕಾರ ರಿಯಾಯಿತಿ ದರದಲ್ಲಿ ಕುಟುಂಬಕ್ಕೊಂದು ಸೀರೆ ನೀಡಲು ಚಿಂತನೆ ನಡೆಸಿದೆ. 15-16 ಸಾವಿರ ಮೌಲ್ಯದ ಸೀರೆಯನ್ನು 4500 ರೂ.ಗೆ ನೀಡಲಾಗುತ್ತಿದೆ. ಆದರೆ 5-6 ಕೋಟಿ ನಷ್ಟ ಅನುಭವಿಸಬೇಕಾಗಿರುವುದರಿಂದ ಕುಟುಂಬಕ್ಕೆ ಒಂದೇ ಸೀರೆ ನೀಡಲು ನಿರ್ಧರಿಸಲಾಗಿದೆ. ಹಬ್ಬ ಎರಡು ದಿನ ಇರುವಾಗ ಸೀರೆ ಮಾರಾಟವನ್ನು ಆರಂಭಿಸಲಾಗುತ್ತದೆ.

ಈ ರಿಯಾಯಿತಿ ಆಗಸ್ಟ್ ಎರಡನೇ ವಾರದ ಬಳಿಕ ಆರಂಭ
ಆಷಾಢ ಮಾಸದ ಸಲುವಾಗಿ ಶೇ. 25 ವರೆಗೆ ರಿಯಾಯಿತಿ ಜುಲೈ 14ರಿಂದ ಆರಂಭವಾಗುತ್ತದೆ ಎಂದು ಹೇಳಲಾಗಿತ್ತು. ಕಂತಿನ ಲೆಕ್ಕದಲ್ಲಿ ಸೀರೆ ಖರೀದಿ ಮಾಡಬಹುದು. ಅದಕ್ಕೆ ಕೆಲವು ಮುಖ್ಯ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಆಷಾಢ ಮಾಸದಿಂದಾಗಿ ಕೆಲವರು ಸೀರೆಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಹಾಗಾಗಿ ಆಗಸ್ಟ್ ಎರಡನೇ ವಾರದ ಬಳಿಕ ರಿಯಾಯಿತಿ ನೀಡಲಾಗುತ್ತದೆ.

ರಿಯಾಯ್ತಿಯಲ್ಲಿ ದೊರೆಯುತ್ತಿರುವುದು ಜರಿಯಲ್ಲ ಪ್ರಿಂಟೆಡ್ ರೇಷ್ಮೆ ಸೀರೆ
ಸರ್ಕಾರ ರಿಯಾಯ್ತಿಯಲ್ಲಿ ಕೊಡುತ್ತಿರುವುದು ಜರಿ ಸೀರೆ ಅಲ್ಲ ಬದಲಾಗಿ ಪ್ರಿಂಟೆಡ್ ರೇಷ್ಮೆ ಸೀರೆ, ಜರಿ ಇರುವುದಿಲ್ಲ ಆದರೂ ಉತ್ತಮ ಸೀರೆ, ಸದ್ಯಕ್ಕೆ ಎಲ್ಲಾ ಕಡೆಗಳಲ್ಲಿಯೂ ರಿಯಾಯ್ತಿ ದರದ ಸೀರೆ ಮಾರಾಟ ಆರಂಭವಾಗಿಲ್ಲ.

ಮೈಸೂರು ಸಿಲ್ಕ್ ಹುಟ್ಟು ಯಾವಾಗ
1942ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಇಂಗ್ಲೆಂಡಿಗೆ ಭೇಟಿ ನೀಡಿದರು, ಅಲ್ಲಿ ನೇಯ್ಗೆ ಯಂತ್ರಗಳನ್ನು ಕೊಂಡು ಅದರ ಬಗ್ಗೆ ವಿವರಗಳನ್ನು ಪಡೆದರು 1912ರಲ್ಲಿ 32 ನೇಯ್ಗೆ ಯಂತ್ರಗಳನ್ನು ಮೈಸೂರಿಗೆ ತಂದರು. ದೇಶದಲ್ಲೇ ಯಂತ್ರದ ಮೂಲಕ ನೇಯ್ಗೆಯನ್ನು ಆರಂಭಿಸಿದ ಮೊದಲ ರಾಜ್ಯ ಮೈಸೂರು ಎಂಬ ಕೀರ್ತಿ ದೊರೆಯುವಂತಾಯಿತು.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications