ಕಾಂಗ್ರೆಸ್ ಪಟ್ಟಿಯಲ್ಲಿ ಸಚಿವರು, ಶಾಸಕರ ಹೆಸರೇಕೆ?
ಬೆಂಗಳೂರು, ಮಾ.3 : ಲೋಕಸಭೆ ಚುಣಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕೆಲವು ಸಚಿವರು ಮತ್ತು ಸಚಿವ ಸ್ಥಾನಕ್ಕಾಗಿ ಒತ್ತಾಯ ಮಾಡುತ್ತಿರುವ ಶಾಸಕರನ್ನು ಪರಿಗಣಿಸಲು ಕರ್ನಾಟಕ ಕಾಂಗ್ರೆಸ್ ನಿರ್ಧರಿಸಿದೆ. ಸರಿಯಾಗಿ ಕೆಲಸ ಮಾಡದ ಸಚಿವರಿಗೆ ಕೋಕ್ ನೀಡಿ ಅವರನ್ನು ಚುನಾವಣೆ ಕಣಕ್ಕೆ ಇಳಿಸಲು ಯೋಜನೆ ರೂಪಿಸಲಾಗಿದೆ.
ಈಗಾಗಲೇ
ಮಾರ್ಚ್
10ರೊಳಗೆ
ಅಭ್ಯರ್ಥಿಗಳ
ಪಟ್ಟಿಗೆ
ಅಂತಿಮ
ರೂಪ
ನೀಡಲು
ಇಚ್ಛಿಸಿರುವ
ಕಾಂಗ್ರೆಸ್,
ಸಿದ್ದರಾಮಯ್ಯ
ಸಂಪುಟದಲ್ಲಿನ
ಕೆಲವು
ಸಚಿವರ
ಹೆಸರಗಳನ್ನು
ಪರಿಗಣಿಸಿದೆ.
ಸರಿಯಾಗಿ
ಕೆಲಸ
ಮಾಡದ
ಸಚಿವರಿಗೆ
ಕೋಕ್
ನೀಡಿ
ಸಂಪುಟಕ್ಕೆ
ಹೊಸ
ಮುಖಗಳನ್ನು
ಕರೆತರಲು
ಚಿಂತನೆ
ನಡೆಸಿದೆ.[ಕಾಂಗ್ರೆಸ್
ಟಿಕೆಟ್
ಹಂಚಿಕೆ
ಕಸರತ್ತು]
ಕಾಂಗ್ರೆಸ್ ತಯಾರಿಸಿರುವ ಪಟ್ಟಿಯ ಪ್ರಕಾರ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಮತ್ತು ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಬೀಸುತ್ತಿದ್ದು ಕ್ಷೇತ್ರದಿಂದ ಐಟಿ-ಬಿಟಿ ಸಚಿವ ಎಸ್ಆರ್ ಪಾಟೀಲ್ ಅವರನ್ನು ಕಣಕ್ಕಿಳಿಸಿ, ಪರಿಷತ್ ನಲ್ಲಿ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರಗಳು ಇವೆ.[ಕಾಂಗ್ರೆಸ್ ಸಂಭಾವ್ಯ ಪಟ್ಟಿ]
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರಾದ ಎಸ್.ಎಸ್.ಮಲ್ಲಿ ಕಾರ್ಜುನ್, ವಿನಯ್ ಕುಲಕರ್ಣಿ ಅವರನ್ನು ಚುನಾವಣೆ ನಿಲ್ಲಿಸಿ, ಚುನಾವಣೆ ಗೆಲ್ಲುವ ಮೂಲಕ ಪಕ್ಷದಲ್ಲಿನ ಅಸಮಾಧಾನವನ್ನು ಶಮನಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಇದರ ಭಾಗವಾಗಿಯೇ ಕಾಂಗ್ರೆಸ್ ಕಳಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಾಸಕರು ಮತ್ತು ಸಚಿವರ ಹೆಸರುಗಳನ್ನು ಸೇರಿಸಲಾಗಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ವರಿಷ್ಠರಿಗೆ ನೀಡಲಾಗಿದೆ.
ವಿಧಾನಸೌಧದ ಗೋಡೆ ಕೆಡವಿ ವಿವಾದ ಹುಟ್ಟು ಹಾಕಿದ್ದ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರನ್ನು ಚಿತ್ರದುರ್ಗ ಕ್ಷೇತ್ರದಿಂದ, ಸಕ್ಕರೆ ಬೆಳೆಗಾರರ ಸಮಸ್ಯೆ ನಿವಾರಣೆಗ ಮಾಡಲು ವಿಫಲವಾದ ಪ್ರಕಾಶ್ ಹುಕ್ಕೇರಿ ಅವರನ್ನು ಚಿಕ್ಕೋಡಿ ಕ್ಷೇತದಿಂದ, ಕಾಂಗ್ರೆಸ್ ಗೆಲವು ಖಚಿತ ಎಂದು ಹೇಳುತ್ತಿರುವ ಬಾಗಲಕೋಟೆಯಲ್ಲಿ ಐಟಿ-ಬಿಟಿ ಸಚಿವ ಎಸ್ಆರ್ ಪಾಟೀಲ್ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. [ಗೋಡೆ ಒಡೆಸಿ ಸಿಎಂ ಕೆಂಗಣ್ಣಿಗೆ ಗುರಿಯಾದ ಆಂಜನೇಯ]
ದಾವಣಗೆರೆ ಕ್ಷೇತ್ರದಿಂದ ಎಸ್ಎಸ್ ಮಲ್ಲಿಕಾರ್ಜುನ್ ಮತ್ತು ಧಾರವಾಡ ಕ್ಷೇತರದಿಂದ ವಿನಯ್ ಕುಲಕರ್ಣಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಸಂಭಾವ್ಯ ಪಟ್ಟಿಯಲ್ಲಿ ಇವರ ಹೆಸರುಗಳನ್ನು ಸೇರಿಸಿ ಹೈಕಮಾಂಡ್ ನಾಯಕರಿಗೆ ಕಳಿಸಲಾಗಿದ್ದು, ಮೊದಲ ಪಟ್ಟಿಯನ್ನು ಅಂತಿಮಗೊಳಿಸುವಾಗ ವರಿಷ್ಠರು ಈ ಸಚಿವರು ಮತ್ತು ಶಾಸಕರ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.