ಪ್ರೇಯಸಿಯ ಕೊಂದ ಚಿಕ್ಕಮಗಳೂರು ಪೇದೆ ಅರೆಸ್ಟ್
ಬಂಧಿತ ವ್ಯಕ್ತಿ ಚಿಕ್ಕಮಗಳೂರು ಸಬ್ ಜೈಲಿನಲ್ಲಿ ಪೇದೆಯಾಗಿದ್ದು, ಅರಸ್ಟ್ ಆಗಿದ್ದಾನೆ. ಮೃತ ಮಹಿಳೆಯನ್ನು ಭಾಗೀರಥಿ ಅಲಿಯಾಸ್ ಭಾಗ್ಯ (35) ಎಂದು ಗುರುತಿಸಲಾಗಿದೆ. ಈಕೆ ಚಿಕ್ಕಮಗಳೂರಿನವರಾಗಿದ್ದು, ವಿವಾಹವಾಗಿದ್ದರು. ಬಂಧಿತ ಯುವಕ ಬಾಲು ಎಂ ಕಳ್ಳಳ್ಳಿ (21) ಈಕೆಯ ಪತಿ ಅಲ್ಲ. ಆದರೂ ಇಬ್ಬರೂ ದಂಪತಿಯೆಂದು ಹೇಳಿಕೊಂಡು ಲಾಡ್ಜಿನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ತಿಳಿದುಬಂದಿದೆ.
ಹತ್ಯೆ ಆರೋಪಿ ಬಾಲು ಶನಿವಾರ ಮಧ್ಯಾಹ್ನ ಉಜಿರೆಯ ಲಾಡ್ಜಿನಲ್ಲಿ ರೂಂ ಪಡೆದಿದ್ದೆ. ಆ ನಂತರ ಇಬ್ಬರೂ ಲಾಡ್ಜಿನಲ್ಲಿ ಒಟ್ಟಿಗೆ ಮಲಗಿದ್ದೆವು. ಆ ಸಂದರ್ಭದಲ್ಲಿ ಭಾಗ್ಯ ಬೇರೆ ಯಾರೊಂದಿಗೋ ಮೊಬೈಲಿನಲ್ಲಿ ಮಾತನಾಡುತ್ತಿದ್ದಳು. ನನಗೆ ಅವಳ ಬಗ್ಗೆ ಆಗ ಅನುಮಾನ ಬಂದಿತು.
ಆ ಬಗ್ಗೆ ಅವಳನ್ನು ನಾನು ವಿಚಾರಿಸಿದೆ. ಆಗ ನಮ್ಮಿಬ್ಬರ ಮಧ್ಯೆ ದೊಡ್ಡ ಗಲಾಟೆಯಾಯಿತು. ಆಗ ಅವಳ ಕೈಗಳನ್ನು ಹಿಂದಕ್ಕೆ ಕಟ್ಟಿ, ಕುತ್ತಿಗೆ ಬಿಗಿ ಹಿಡಿದೆ. ಸ್ವಲ್ಪ ಹೊತ್ತಿನಲ್ಲಿ ಅವಳು ಕೆಳಗೆ ಕುಸಿದುಬಿದ್ದು, ಅಸುನೀಗಿದಳು' ಎಂದು ಬಾಲು ಪೊಲೀಸರಿಗೆ ತಿಳಿಸಿದ್ದಾನೆ.
'ಭಾಗ್ಯ ಸಾವಿಗೀಡಾಗುತ್ತಿದ್ದಂತೆ ಅವಳ ನಗ್ನ ಶವವನ್ನು ಬಾತ್ ರೂಮಿನಲ್ಲಿ ಹಾಕಿ, ಬೈಕ್ ಮೇಲೆ ನಾನು ಲಾಡ್ಜಿನಿಂದ ಹೊರಬಿದ್ದೆ. ಬೈಕಿನಲ್ಲಿ ಚಿಕ್ಕಮಗಳೂರಿಗೆ ಬರುವಾಗ ಮೊಬೈಲನ್ನು ನಿಡಗಲ್ ಬ್ರಿಡ್ಜಿನಿಂದ ಕೆಳಗೆ ಬಿಸಾಕಿದೆ' ಎಂದು ಬಾಲು ಹೇಳಿದ್ದಾನೆ.
ಅತ್ತ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆಗಿಳಿದ ಪೊಲೀಸರು ಚಿಕ್ಕಮಗಳೂರಿನ ಪೊಲೀಸರ ನೆರವನ್ನು ಪಡೆದು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾನು ಅವಿವಾಹಿತನಾಗಿದ್ದು, ದೂರ ಶಿಕ್ಷಣದ ಮೂಲಕ ಪದವಿ ವ್ಯಾಸಂಗ ಮಾಡುತ್ತಿರುವೆ. ಜತೆಗೆ ಚಿಕ್ಕಮಗಳೂರು ಜೈಲಿನಲ್ಲಿ ಸೇವೆ ಸಲ್ಲಿಸುತ್ತಿರುವೆ ಎಂದು ಬಾಲು ತಿಳಿಸಿದ್ದಾನೆ.
ಭಾಗ್ಯ ವಿವಾಹಿತಳಾಗಿದ್ದು, ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಆದರೆ ಪತಿ ಭಾಗ್ಯ ಜತೆ ವಾಸಿಸುತ್ತಿರಲಿಲ್ಲ. ಇಂತಿಪ್ಪ ಭಾಗ್ಯ ಜತೆ ಬಾಲುಗೆ ಆರು ತಿಂಗಳ ಹಿಂದೆ ಸ್ನೇಹ ಬೆಳೆದಿದೆ. ಅದು ಪ್ರೀತಿಗೆ ತಿರುಗಿ, ಇಬ್ಬರೂ ಒಟ್ಟಿಗೆ ಉಜಿರೆ ಲಾಡ್ಜಿಗೆ ಬಂದಿದ್ದರು.