'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!
'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!
ಬೆಂಗಳೂರು, ಮಾರ್ಚ್ 23: 'ಲಿಂಗಾಯತ, ವೀರಶೈವ ಎಂಬ ಪ್ರತ್ಯೇಕ ಧರ್ಮವಿಲ್ಲ, ಬಸವ ತತ್ತ್ವದ ಆಧಾರದ ಮೇಲೆ ಎಲ್ಲರನ್ನು ಲಿಂಗಾಯತ ಎಂದು ಕರೆಯಲಾಗುವುದು, ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ನೀಡಲಾಗುವುದು' ಎಂದು ಸಿದ್ದರಾಮಯ್ಯ ಸರ್ಕಾರವು ಚರ್ಚೆಯನ್ನು ಹುಟ್ಟಿ ಹಾಕಿದೆ. ಇದಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ನೀಡಲಿ, ಬಿಡಲಿ, ರಾಜ್ಯದಲ್ಲಂತೂ ಅಲ್ಪಸಂಖ್ಯಾತರು ಎಂಬ ಟ್ಯಾಗ್ ಬೀಳಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಆದರೆ, ಲಿಂಗಾಯತ ಸಮುದಾಯದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರುವ ಜನಾಂಗದವರು ಸರ್ಕಾರದ ಅಲ್ಪಸಂಖ್ಯಾತ ಮಾನ್ಯತೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ತಿಳಿದು ಬಂದಿದೆ.

ಲಿಂಗಾಯತ ಸಮುದಾಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರು ಸೇರಿದಂತೆ ಸರಿ ಸುಮಾರು 99ಕ್ಕೂ ಅಧಿಕ ಜಾತಿ, ಉಪ ಜಾತಿಗಳಿವೆ. ಈ ಪೈಕಿ ಅನೇಕರಿಗೆ ಎಸ್ ಸಿ ಹಾಗೂ ಒಬಿಸಿ ಕೋಟಾದಡಿಯಲ್ಲಿ ಸೌಲಭ್ಯಗಳು ಸಿಗುತ್ತಿವೆ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಇದೆ. ಆದರೆ, ಹೊಸ ಧರ್ಮ ಲಿಂಗಾಯತ ಎಂದು ಗುರುತಿಸಿಕೊಂಡರೆ ಅಲ್ಪಸಂಖ್ಯಾತ ಎಂಬ ಹೊಸ ಟ್ಯಾಗ ಸಿಗುವುದೇ ಹೊರತೂ ಮೀಸಲಾತಿ ಬಗ್ಗೆ ಯಾವುದೇ ಭರವಸೆ ಇಲ್ಲ.
ಹೀಗಾಗಿ, 20ಕ್ಕೂ ಅಧಿಕ ಎಸ್ ಸಿ ಹಾಗೂ 15ಕ್ಕೂ ಅಧಿಕ ಒಬಿಸಿ ಕೆಟಗರಿಯ ಲಿಂಗಾಯತರು ಈಗ ಸಿಗುವ ಸೌಲಭ್ಯವನ್ನು ಬಿಟ್ಟು, ಅಲ್ಪಸಂಖ್ಯಾತರು ಎಂದು ಮಾತ್ರ ಕರೆಸಿಕೊಳ್ಳಲು ತಯಾರಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಗುರುರಾಜ್ ಹುಣಸಿನಮರದ್ ಹೇಳಿದ್ದಾರೆ.
ಸರ್ಕಾರದ ಕ್ರಮದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಪ್ರಭಾವಿಗಳಿಗೆ ಮಾತ್ರ ಲಾಭವಾಗಲಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸ್ವಲ್ಪ ಮಾನ್ಯತೆ ಹೆಚ್ಚಾಗಲಿದೆ ಎಂದಿದ್ದಾರೆ.
ಎಸ್ ಸಿ / ಎಸ್ಟಿ ಕೆಟಗರಿಗೆ ಬರುವ ಶೇ 7ರಷ್ಟು ಲಿಂಗಾಯತರು ಈಗ ಧರ್ಮಸಂಕಟದಲ್ಲಿದ್ದು, ಹಿಂದೂವಾಗಿ ಮುಂದುವರೆಯಬೇಕೇ ಅಥವಾ ಹೊಸ ಧರ್ಮವನ್ನು ತಮ್ಮದಾಗಿಸಿಕೊಳ್ಳಬೇಕೆ ಎಂಬ ಜಿಜ್ಞಾಸೆಗೆ ಒಳಗಾಗಿದ್ದಾರೆ. ಕಮ್ಮಾರ, ಚಮ್ಮಾರ, ಪಟಗಾರ, ಮಡಿವಾಳ ಹೀಗೆ ವೃತ್ತಿ ಆಧಾರಿತವಾಗಿ ಲಿಂಗಾಯತರು ವಿವಿಧ ಪಂಥಕ್ಕೆ ಸೇರಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications