Lakkundi: ಲಕ್ಕುಂಡಿ ಉತ್ಖನನ ಕಾರ್ಮಿಕರ ಕೂಲಿ ₹600 ಹೆಚ್ಚಿಸಲು ಬೇಡಿಕೆ, ಶಿಲಾಯುಗದ ಕಲ್ಲು ಪತ್ತೆ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆಯ ಪಾಯ ತೆಗೆಯುವಾಗ ನಿಧಿ ಪತ್ತೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಆ ಮನೆ ಹಾಗೂ ವೀರಭದ್ರೇಶ್ವರ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ಖನನ ಕಾರ್ಯ ಆರಂಭಿಸಲಾಗಿದೆ. ಇದೀಗ ಭೂಮಿ ಅಗೆಯುವ ನಾಲ್ಕನೇ ದಿನದ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಒಟ್ಟು ಎರಡು ತಿಂಗಳು ಉತ್ಖನನ ಕಾರ್ಯ ನಡೆಸಲು ಸರ್ಕಾರ ತೀರ್ಮಾನಿಸಿದೆ. ನೆನ್ನೆ ಭಾನುವಾರ ಹೊಸ ಶಿಲಾಯುಗದಲ್ಲಿ ಬಳಕೆ ಆಗಿದ್ದ ಕಲ್ಲೊಂದು ದೊರೆತಿದೆ.
ಗಂಗವ್ವ ರಿತ್ತಿ ಎಂಬುವವರ ಮನೆ ಅಗೆಯುವ ವೇಳೆ ನಿಧಿ ಸಿಕ್ಕಿತ್ತು. ಅದನ್ನು ಸರ್ಕಾರಕ್ಕೆ ಒಪ್ಪಿಸುತ್ತಿದ್ದಂತೆ ಮತ್ತೊಂದು ಸ್ಥಳದಲ್ಲಿ ಮುತ್ತು, ಹವಳ ಸಿಕ್ಕಿದ್ದವು. ಈ ಕಾರಣಕ್ಕೆ ಪುರಾತತ್ವ ಇಲಾಖೆ, ಸಂಬಂಧಿಸಿದ ಅಧಿಕಾರಿಗಳು ಉತ್ಖನನ ಆರಂಭಿಸಿದ್ದಾರೆ. ಈ ವೇಳೆ ಗ್ರಾಮದ ಕಾರ್ಮಿಕರನ್ನೇ ಬಳಸಿ ಉತ್ಖನನ ನಡೆಸಲಾಗುತ್ತಿದೆ. ಆದರೆ ಕಾರ್ಮಿಕರು ಈಗ ನೀಡುತ್ತಿರುವ ಕೂಲಿಯನ್ನು ಹೆಚ್ಚಿಸುವಂತೆ ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಕೆಲಸ ಕಾರ್ಯಗಳು ತಡವಾಗಿ ಅರಂಭವಾದವು.

ಸದ್ಯ ಉತ್ಖನನ ಕಾರ್ಯದಲ್ಲಿ ತೊಡಗಿರುವ ಒಬ್ಬ ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ದಿನಕ್ಕೆ ತಲಾ 374 ರೂಪಾಯಿ ಕೂಲಿ ನೀಡಲಾಗುತ್ತದೆ. ಈ ಮೊತ್ತವನ್ನು 600 ರೂಪಾಯಿ ಏರಿಕೆ ಮಾಡುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮೇಲ್ವಿಚಾರಕರ ಬಳಿ ಹಣ ಹೆಚ್ಚಳ ಬಗ್ಗೆ ಬೇಡಿಕೆ ಸಲ್ಲಿಸಿದ್ದಾರೆ. ನಿತ್ಯ ಎಂಟು ಗಂಟೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಕೂಲಿ ಕಡಿಮೆ ನೀಡುತ್ತಾರೆ, ಇದು ಸಾಕಾಗಲ್ಲ ಎಂದು ಬೆಳಗ್ಗೆ ಕೆಲಸ ಆರಂಭ ಮುನ್ನವೇ ಕಾರ್ಮಿಕರು ಡಿಮ್ಯಾಂಡ್ ಮಾಡಿದರು. ಕೆಲಸ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಲಾಯುಗದಲ್ಲಿ ಬಳಕೆ ಆಗಿದ್ದ ಕಲ್ಲು ಪತ್ತೆ
ನಿಧಿ, ಪ್ರಾಚೀನ ಅಮೂಲ್ಯ ವಸ್ತುಗಳಿಗಾಗಿ ಸರ್ಕಾರ ಲಕ್ಕುಂಡಿಯಲ್ಲಿ ಉತ್ಖನನ ನಡೆಸಿದೆ. ನಾಲ್ಕನೇ ದಿನದ ಉತ್ಖನನ ವೇಳೆ ಶಿಲಾಯುಗದಲ್ಲಿ ಬಳಕೆ ಆಗಿದ್ದ ಆಯುಧ ಮಾದರಿಯಲ್ಲಿರುವ ಕಲ್ಲು ಪತ್ತೆ ಆಗಿದೆ. ಕಾರ್ಮಿಕರು ಅಗೆಯುವಾಗ ಅದು ಪತ್ತೆ ಆಗಿದೆ. ಕಾಣುತ್ತಿದ್ದಂತೆ ಅಧಿಕಾರಿಗಳಿಗೆ ತೋರಿಸಿದ್ದಾರೆ. ಆ ಕಲ್ಲು ಹಾಳಾಗದಂತೆ ನಿಧಾನವಾಗಿ ಭೂಮಿಯಿಂದ ತೆಗೆದು ಪರಿಶೀಲಿಸಲಾಗಿದೆ. ವಶಕ್ಕೆ ಪಡೆದು ಅದಕ್ಕೊಂದು ಟ್ಯಾಗ್ ಹಾಕಿದ್ದಾರೆ. ಆ ಕಲ್ಲು ಬಳಕೆ, ಎಷ್ಟು ವರ್ಷ ಹಳೆಯದು ಇಲ್ಲಿಗೆ ಹೇಗೆ ಬಂತು? ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.
ನಿತ್ಯ ಒಟ್ಟು 35-40 ಕಾರ್ಮಿಕರು ನಿತ್ಯ ಇಲ್ಲಿ ಉತ್ಖನನ ಕೆಲಸ ಆರಂಭಿಸಿದ್ದಾರೆ. ಈಗಷ್ಟೇ ಆರಂಭವಾಗಿರುವ ಭೂಮಿ ಅಗೆಯುವ ಕಾರ್ಯ ಮುಂದಿನ ಎರಡು ತಿಂಗಳ ಕಾಲ ನಡೆಯಲಿದೆ. ನಿಯಮಗಳಂತೆ ನಿತ್ಯ ಒಬ್ಬ ಕೂಲಿಗೆ 374 ರೂಪಾಯಿ ನೀಡಲಾಗುತ್ತಿದೆ. ಲಕ್ಕುಂಡಿಯಲ್ಲಿ ಇನ್ನಷ್ಟು ಪ್ರಾಚೀನ ಅವಶೇಷಗಳು, ನಿಧಿ ಸಿಗುವ ವಿಶ್ವಾಸದಲ್ಲಿ ಪುರಾತತ್ವ ಇಲಾಖೆ, ಸರ್ಕಾರ ಇದೆ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications