ಕರ್ನಾಟಕದಲ್ಲಿದ್ದಾರೆ 72 ಮಂದಿ ಸಹಸ್ರ ಕೋಟ್ಯಾಧೀಶರು
ಬೆಂಗಳೂರು, ಅಕ್ಟೋಬರ್ 27: ಕರ್ನಾಟಕದಲ್ಲಿ ಒಟ್ಟು 72 ಮಂದಿ ಬಳಿ ಒಂದು ಸಾವಿರ ಕೋಟಿ ರೂಗೂ ಮೇಲ್ಪಟ್ಟ ಆಸ್ತಿ ಇದೆ. ಇವರ ಒಟ್ಟು ಸಂಪತ್ತಿನ ಮೌಲ್ಯ 3.49 ಲಕ್ಷ ಕೋಟಿ ರೂಪಾಯಿಗಳಾಗಿವೆ.
ದೇಸದಲ್ಲಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹೊಂದಿರುವ 831 ಕುಬೇರರಿದ್ದಾರೆ ಎಂದು ಬ್ಲಾಕ್ಲೇರ್ಸ್ ಹ್ಯೂರನ್ ಇಂಡಿಯಾ ರಿಚ್ 2018 ವರದಿ ಹೇಳಿದೆ. ಇವರ ಪೈಕಿ 272 ಮಂದಿ ಮಹಾರಾಷ್ಟ್ರದಲ್ಲೇ ಇದ್ದು, ರಾಜಧಾನಿ ದೆಹಲಿಯಲ್ಲಿ 163 ಮಂದಿ ಇದ್ದಾರೆ. ಹಾಗೆಯೇ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು 72 ಮಂದಿ ಕುಬೇರರಿದ್ದಾರೆ. ಮುಖೇಶ್ ಅಂಬಾನಿ ಭಾರತದ ಸಿರಿವಂತ ಎಂಬ ಪಟ್ಟವನ್ನು ಉಳಿಸಿಕೊಂಡಿದ್ದಾರೆ.
ಈ ಸಾಲಿನಲ್ಲಿ ಗುಜರಾತ್ನ 22 ಜನರು ಬೃಹತ್ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, ಕಳೆದ ವರ್ಷ 36 ಆಗರ್ಭ ಶ್ರೀಮಂತರು ಒಟ್ಟು 2.40 ಲಕ್ಷ ಕೋಟಿ ರೂಪಾಯಿ ಸಂಪತ್ತು ಹೊಂದಿದ್ದರು.

ಗುಜರಾತ್ನ ಅದಾನಿ ಗ್ರೂಪ್ ಮಾಲೀಕ ಗೌತಮ ಅದಾನಿ ಅವರು ಒಟ್ಟು 71,200 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದರೆ, ಜೈಡಸ್ ಸಮೂಹದ ಪಂಕಜ್ ಪಟೇಲ್ 32,100ಕೋಟಿ, ಎಐಎ ಎಂಜಿನಿಯರಿಂಗ್ ನ ಭದ್ರೇಶ್ ಶಾ 9700 ಕೋಟಿ, ಕರ್ಶಾನ್ ಭಾಯ್ ಪಟೇಲ್ 9600 ಕೋಟಿ, ಟೊರೆಂಟ್ ಗ್ರೂಪ್ನ ಪ್ರವರ್ತಕ ಸಮೀರ್ ಮತ್ತು ಸುಧೀರ್ ಮೆಹ್ತಾ ತಲಾ 8300 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ.












Click it and Unblock the Notifications