ಕರ್ನಾಟಕ ವಿಧಾನಸಭೆ ಅಧಿವೇಶನ: HD ವಿಡಿಯೋ ಬಂದಿದೆ ನೋಡಿದ್ರಾ ? ವೈರಲ್ ಪೋಸ್ಟ್
ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಈ ಬಾರಿ ಚರ್ಚೆಗಿಂತಲೂ ಆರ್ಭಟದ್ದೇ ಹೆಚ್ಚು ಸುದ್ದಿಯಾಗಿದೆ. ಕರ್ನಾಟಕ ವಿಧಾನಸಭೆ ಅಧಿವೇಶನ ಹಾಗೂ ರಾಜಕಾರಣಿಗಳ ವರ್ತನೆಯ ಬಗ್ಗೆ ಹವ್ಯಾಸಿ ಬರಹಗಾರ ಬೆಳಗಾವಿ ಪ್ರಕಾಶ್ ಅವರ ಬರಹ ಇಲ್ಲಿದೆ.
ಹೌದು ನಿನ್ನೆಯಿಂದ ಒಂದು ಸಖತ್ ಆಗಿರುವ HD ವಿಡಿಯೋ ಬಂದಿದೆ. ತುಂಬಾ ಜನ ನೋಡಿರ್ತೀರ ಕೂಡ. ಅದೇ ಅದೇ ಯಾವ್ದು HD ವಿಡಿಯೋ ಅಂದ್ರೆ ನಮ್ಮ ರಾಜ್ಯದ ಮಾನ ಮರ್ಯಾದೆ ಕಳೆಯುವಂತೆ ಮಾಡುತ್ತಿರುವ ನಮ್ಮ ಕೆಲವು ಶಾಸಕರುಗಳ ಸದನದಲ್ಲಿನ ವಿಡಿಯೋ. ಕಾಂಗ್ರೆಸ್ ಶಾಸಕ ಶಿವಲಿಂಗೆಗೌಡ ಅವರ ಆರ್ಭಟ ಏನು, ಇನ್ನು ಅವರಿಗೆ ಉತ್ತರವಾಗಿ ಬಿಜೆಪಿ / ಜೆಡಿಎಸ್ ಶಾಸಕರ ಆರ್ಭಟ ಏನು. ಅಭಿವೃದ್ಧಿ ಮಾಡುವ ವಿಚಾರವಾಗಿ ನಮ್ಮ ಜನಪ್ರತಿನಿಧಿಗಳದ್ದು ಅದೇನು ಚರ್ಚೆ ಅದೇನು ಆಕ್ರೋಶ ಅಬ್ಬಬ್ಬಾ ನಾವೇ ವೋಟ್ ಹಾಕಿದವರು ಧನ್ಯ ಬಿಡಿ.

ಸದನದಲ್ಲಿ ಯಾವೊಬ್ಬ ಶಾಸಕ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಸರಿಯಾಗಿ ಚರ್ಚೆ ಮಾಡ್ತಿದಾರೆ ಹೇಳಿ ?. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅದೇ ರಾಗ ಅದೇ ಹಾಡು ಆಡ್ತೀವಿ. ಸದನದಲ್ಲಿ ರಾಜ್ಯದ ಮಾನ ಮರ್ಯಾದೆ ಹಾಳು ಮಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷದ ಶಾಸಕರು ಆಮೇಲೆ ಹೊರಗಡೆ ಏನು ಮಾಡಿರ್ತಾರೆ ಹೇಳಿ ? ನಗು ನಗುತ್ತಾ ಮಾತಾಡುತ್ತ ಒಟ್ಟಿಗೆ ಸೇರಿ ಊಟ ಮಾಡ್ಕೊಂಡು ತಮ್ಮ ಮನೆಗೆ ಹಾಯಾಗಿ ಹೋಗಿರ್ತಾರೆ.. ಆದರೆ ಆಯಾ ಪಕ್ಷದ ಬೆಂಬಲಿಗ ಸಾಮಾನ್ಯ ಜನರು ಮಾತ್ರ ಇಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜಗಳ ಮಾಡೋದು, ವಾದ ವಿವಾದ ಮಾಡೋದು ಶತ್ರುಗಳ ಹಾಗೇ ನಡೆದುಕೊಳ್ಳೋದು ಮಾಡ್ತಾರೆ..
ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರಿಗೆ ಗೊತ್ತಿಲ್ಲ ಇದೇ ಕಾಂಗ್ರೆಸ್, ಬಿಜೆಪಿಯ ಎಷ್ಟೋ ಜನ ಶಾಸಕರು ಬೀಗತನ ಕೂಡ ಮಾಡಿಕೊಂಡಿದ್ದಾರೆ. ಆದರೆ ಸಾಮಾನ್ಯ ಜನರು ಮಾತ್ರ ಏಳೇಳು ಜನ್ಮದ ಶತ್ರುತ್ವ ಎನ್ನುವ ರೀತಿ ಜಗಳ ಮಾಡಿಕೊಂಡು, ತಮ್ಮ ಪಕ್ಷ ಅನ್ಕೊಂಡು ಜಗಳದಲ್ಲೇ ಮುಳುಗಿದ್ದಾರೆ. (ಹಿಂದೆ ನಾನು ಸಾಕಷ್ಟು ಜನರ ಜೊತೆಗೆ ರಾಜಕಾರಣಿಗಳ ಪರವಾಗಿ ವಾದ ವಿವಾದ ಮಾಡುತ್ತಿದ್ದೆ. ಆದರೆ ಈ ಜೆಸಿಬಿ ಪಕ್ಷಗಳು ಅಭಿವೃದ್ಧಿ ಮಾಡೋದು 25%, ಇನ್ನುಳಿದ 75% ಒಣ ರಾಜಕೀಯ ಮಾಡುತ್ತವೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಅಲ್ಲ ಕೆಲವು ರಾಜಕೀಯ ಪುಡಾರಿಗಳ ಸಲುವಾಗಿ ಕಚ್ಚಾಡೋದು ಬಿಟ್ಟು ಆರಾಮಾಗಿ ಕಣ್ಮುಚ್ಚಿಕೊಂಡು ಅರ್ಧಗಂಟೆ ಧ್ಯಾನ ಮಾಡೋದು ಒಳ್ಳೆಯದು. ಮನಸ್ಸಿಗೆ ನೆಮ್ಮದಿ ಆದರೂ ಸಿಗುತ್ತೆ. ಈ ಕೆಲವು ರಾಜಕಾರಣಿಗಳ ಒಣ ರಾಜಕೀಯ ಗೊತ್ತಾಗಬೇಕಿತ್ತು ಅಂದ್ರೆ ಸದನದಲ್ಲಿನ ನಿನ್ನೆಯ HD ವಿಡಿಯೋ ನೋಡ್ಕೊಂಡ ಬನ್ನಿ ಅಷ್ಟೇ.
-
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ: ರಾಜಕೀಯದಲ್ಲಿ ಹೊಸ ವಿವಾದ -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ











Click it and Unblock the Notifications