Live : Karnataka Assembly Session 2019 | Karnataka Floor Test
ಬೆಂಗಳೂರು, ಜುಲೈ 22: ಕಳೆದೆರೆಡು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಇಂದಾದರೂ ತೆರೆ ಬೀಳಲಿದೆಯೇ ಎನ್ನುವ ಕುತೂಹಲ ಆರಂಭವಾಗಿದೆ.
ಒಂದು ಗಂಟೆ ತಡವಾಗಿ ಆರಂಭವಾದ ಸದನದಲ್ಲಿ ಮೊದಲು ಸ್ಪೀಕರ್ ರಮೇಶ್ ಕುಮಾರ್ ಅವರು ಕ್ರಿಯಾ ಲೋಪದ ಕುರಿತಾದ ರೂಲಿಂಗ್ ಪ್ರಕಟಿಸಿದರು. ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡುವುದು ಶಾಸಕಾಂಗ ಪಕ್ಷದ ನಾಯಕರ ಹಕ್ಕು ಎಂದು ಹೇಳಿದರು.
ಬಳಿಕ ಸಚಿವ ಕೃಷ್ಣ ಬೈರೇಗೌಡ ಅವರು ಅತೃಪ್ತ ಶಾಸಕರಿಗೂ ಬಿಜೆಪಿಗೂ ಸಂಬಂಧವಿದೆ ಎಂದು ಆರೋಪಿಸಿದರು. ಅದಕ್ಕೆ ಸಂಬಂಧಿಸಿದಂತೆ ಅವರು ವಿವಿಧ ವರದಿಗಳನ್ನು, ಆಡಿಯೋ ಸಂಭಾಷಣೆಗಳ ವಿವರಗಳನ್ನು ಪ್ರಸ್ತಾಪಿಸಿದರು.
ಕೃಷ್ಣ ಬೈರೇಗೌಡರ ಭಾಷಣದ ವೇಳೆ ಅನೇಕ ಬಾರಿ ಗದ್ದಲಗಳು ಉಂಟಾದವು. ಈ ಸಂದರ್ಭದಲ್ಲಿ ಆಪರೇಷನ್ ಕಮಲದ ಕುರಿತು ಸಹ ಚರ್ಚೆ ನಡೆಯಿತು.
ಇಂದು ವಿಶ್ವಾಸಮತ ಯಾಚನೆ ನಡೆಸುವುದು ಬೇಡ. ಎರಡು ದಿನ ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರಿಂದ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಗೊಂದಲ ಬಗೆಹರಿಸಲು ಸ್ಪೀಕರ್ ಮುಂದಾಗಬೇಕು. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಅಥವಾ ಅವರನ್ನು ಅನರ್ಹಗೊಳಿಸುವುದೇ ಎಂದು ನಿರ್ಧರಿಸಬೇಕು ಎಂದು ಕಾಂಗ್ರೆಸ್ ಕೋರಿದೆ.
ಇಂದು ಕೂಡ ಸದನದಲ್ಲಿ ಚರ್ಚೆ ನಡೆಸಿ ವಿಶ್ವಾಸಮತ ಯಾಚನೆಯನ್ನು ಮುಂದೂಡಲು ಮೈತ್ರಿ ನಾಯಕರು ಪ್ರಯತ್ನಿಸುತ್ತಿದ್ದಾರೆ.
ವಿಶ್ವಾಸಮತಕ್ಕೂ ಮುನ್ನ ಬಿಎಸ್ಪಿ ನಾಯಕಿ ಮಾಯಾವತಿ, ಕುಮಾರಸ್ವಾಮಿ ಸರ್ಕಾರದ ಪರ ನಿಲ್ಲಲು ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ ಕರ್ನಾಟಕದಲ್ಲಿರುವ ಬಿಎಸ್ಪಿ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತದಾನ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
Jul 22, 2019, 11:51 pm IST
ಬಿಜೆಪಿಯ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಸಹ ಕಲಾಪವನ್ನು ಮುಂದೂಡಿ ಎದ್ದು ಹೊರಗೆ ನಡೆದರು.
Jul 22, 2019, 11:48 pm IST
ಸಿದ್ದರಾಮಯ್ಯ ಅವರು ನೀಡಿದ ಸಲಹೆಯಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಸಂಜೆ ಆರು ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಬೇಕು ಎಂದು ಹೇಳಿ, ಕಲಾಪವನ್ನು ನಾಳೆ 10 ಕ್ಕೆ ಪ್ರಾರಂಭ ಮಾಡಲಾಗುವುದು ಎಂದು ಹೇಳಿ ಹೊರಟರು.
Jul 22, 2019, 11:45 pm IST
ನಾಳೆ ಐದು ಗಂಟೆಗೆ ಸಿಎಂ ಕುಮಾರಸ್ವಾಮಿ ಚರ್ಚೆಯ ಮೇಲೆ ಉತ್ತರ ಹೇಳುತ್ತಾರೆ. ಅಂತಿಮವಾಗಿ ಆರು ಗಂಟೆಗೆ ಮತಕ್ಕೆ ಹಾಕಲಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಸ್ಪಷ್ಟವಾಗಿ ಹೇಳಿ, ನಾಳೆ ಹತ್ತು ಗಂಟೆಗೆ ಕಲಾಪವನ್ನು ಮುಂದಕ್ಕೆ ಹಾಕಿದರು.
Jul 22, 2019, 11:43 pm IST
ಆರು ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಯುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
Jul 22, 2019, 11:42 pm IST
ನಾಳೆ ಸಂಜೆ 8 ಗಂಟೆಗೆ ವಿಶ್ವಾಸಮತ ಅಂಗೀಕಾರ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
Jul 22, 2019, 11:30 pm IST
ಅಪ್ಪನಿಗೆ ಹುಟ್ಟಿದ್ದೀನಿ, ಅಪ್ಪನಿಗೆ ಹುಟ್ಟಿದ ರಾಜಕೀಯ ಮಾಡುತ್ತೀನಿ ಎಂದು ತೀವ್ರ ಸಿಟ್ಟಿನಿಂದ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಾಂವಿಧಾನಿಕ ಪದವನ್ನು ಬಳಸಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿಯ ಬೊಮ್ಮಾಯಿ ಅವರು ಸಹ ಕೆಟ್ಟದಾಗಿ ಮಾತನಾಡಿದರು. ಸದನದಲ್ಲಿ ಗದ್ದಲ ಪ್ರಾರಂಭವಾಯಿತು.
Jul 22, 2019, 11:24 pm IST
ಸ್ಪೀಕರ್ ಅವರು ಅತೃಪ್ತ ಶಾಸಕರ ಕುರಿತು ಇಂದು ರೂಲಿಂಗ್ ನೀಡಿದ್ದಾರೆ. ನಾಳೆ ಅವರಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಹಾಗಿದ್ದಾಗ ಅತೃಪ್ತ ಶಾಸಕರಿಗೆ ವಾಪಸ್ ಬರಲು ಸಹ ಅವಕಾಶ ನೀಡದೇ ವಿಶ್ವಾಸಮತ ಅಂಗೀಕಾರ ಮಾಡಿದರೆ ಅದು ನ್ಯಾಯವಲ್ಲ ಎಂದು ಜೆಡಿಎಸ್ ಶಾಸಕ ಶೀವಲಿಂಗೇ ಗೌಡ ಹೇಳಿದರು.
Jul 22, 2019, 11:00 pm IST
ಗದ್ದಲ ಹೆಚ್ಚಾಗಿದ್ದು, ಆಡಳಿತ ಪಕ್ಷದ ಸದಸ್ಯರು ನಾಳೆಗೆ ಸದನ ಮುಂದೂಡುವಂತೆ ಒತ್ತಾಯ ಮಾಡುತ್ತಿದ್ದಾರೆ. ದೇಶಪಾಂಡೆ ಅವರು ಮಾತನಾಡುತ್ತಿದ್ದು, ಅವರೂ ಸಹ ನಾಳೆಗೆ ಸದನ ಮುಂದೂಡುವಂತೆ ಒತ್ತಾಯ ಮಾಡುತ್ತಿದ್ದಾರೆ.
Jul 22, 2019, 10:33 pm IST
ಊಟದ ವಿರಾಮವನ್ನೂ ತೆಗೆದುಕೊಳ್ಳದೆ ಕಲಾಪ ಜಾರಿಯಲ್ಲಿದೆ. ಕೆಲವು ಆಡಳಿತ ಪಕ್ಷದ ಸದಸ್ಯರು ಕಲಾಪವನ್ನು ಮುಂದೂಡುವಂತೆ ಒತ್ತಾಯ ಮಾಡುತ್ತಿದ್ದಾರೆ.
Jul 22, 2019, 10:18 pm IST
ಹಲವು ಶಾಸಕರು ಸಕ್ಕರೆ ಖಾಯಿಲೆ ರೋಗಿಗಳಿದ್ದಾರೆ, ಅವರಿಗೆ ಊಟಕ್ಕೆ ತಡವಾಗುತ್ತಿದೆ. ನಾಳೆಗೆ ವಿಶ್ವಾಸಮತ ಯಾಚನೆ ಮುಂದೂಡಿ ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯ ಹೇರಿದರು. ಆದರೆ ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
Jul 22, 2019, 10:13 pm IST
ಊಟದ ವ್ಯವಸ್ಥೆ ಮಾಡಿಕೊಡಿ, ನಾವೆಲ್ಲ ಊಟ ಮಾಡುತ್ತೇವೆ ರಾತ್ರಿ ಒಂದು ಗಂಟೆ ಆದರೂ ಸಹ ಇಲ್ಲೇ ಇರುತ್ತೇವೆ, ಆಡಳಿತ ಪಕ್ಷದವರ ಮಾತು ಕೇಳುತ್ತೇವೆ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಕೇಳಿದರು. ಆದರೆ ಆಡಳಿತ ಪಕ್ಷದ ಕೆಲವು ಸದಸ್ಯರು ಸದನವನ್ನು ಮುಂದೂಡಲು ಕೇಳಿದರು.
Jul 22, 2019, 9:35 pm IST
ನಾನು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಧ್ಯಮಗಳಿಗೆ ಪತ್ರವೊಂದು ಹರಿದಾಡುತ್ತಿದೆ. ಆ ಪತ್ರದಲ್ಲಿ ನನ್ನ ಸಹಿಯನ್ನು ನಕಲು ಮಾಡಲಾಗುತ್ತಿದೆ ನನ್ನ ರಾಜೀನಾಮೆಗೆ ಕೊಡಿಸಿ ಯಾರ್ಯಾರು ಸಿಎಂ ಆಗಲು ಆತುರದಿಂದಾದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
Jul 22, 2019, 9:32 pm IST
ಸಿಎಂ ಕುಮಾರಸ್ವಾಮಿ ಅವರು ಮಾತನಾಡಿ, ಎಚ್.ಕೆ.ಪಾಟೀಲ್ ಅವರು ಹೇಳಿದ ಮಾತುಗಳಿಗೆ ಬೆಂಬಲಿಸಿ ಮಾತನಾಡಿ, ಈ ಹಿಂದೆ ಸಹ ಸರ್ಕಾರಕ್ಕೆ ಬೆನ್ನು ತೋರಿದ್ದ ಶಾಸಕರು ಮತ್ತೆ ವಾಪಸ್ ಬಂದಿರುವ ಉದಾಹರಣೆಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.
Jul 22, 2019, 9:31 pm IST
ಇಂದು ವಿಶ್ವಾಸಮತ ಯಾಚನೆ ಬೇಡ ಎಂದು ಎಚ್.ಕೆ.ಪಾಟೀಲ್ ಅವರು ಸ್ಪೀಕರ್ ಅವರ ಬಗ್ಗೆ ಮನವಿ ಮಾಡಿದರು. ಇಂದು ಸ್ಪೀಕರ್ ಅವರು ರೂಲಿಂಗ್ ನೀಡಿದ್ದಾರೆ, ಆ ಭಯದಿಂದ ಅವರು ಸದನಕ್ಕೆ ಬರಬಹುದು ಎಂದು ಎಚ್.ಕೆ.ಪಾಟೀಲ್ ಅವರು ಹೇಳಿದರು.
Jul 22, 2019, 9:29 pm IST
ಅತೃಪ್ತ ಶಾಸಕರಿಗೆ ಯಾವುದೇ ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಿರಲಿಲ್ಲವೆಂದುಸ ಸ್ಪೀಕರ್ಗೆ ಡಿಜಿಪಿ ಅವರು ಸ್ಪಷ್ಟಪಡಿಸಿದ್ದು, ಅಂದಿನ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ನೀಡಿದ್ದಾರೆ. ಈ ಬಗ್ಗೆ ರಮೇಶ್ ಕುಮಾರ್ ಅವರು ಸದನಕ್ಕೆ ಸಹ ಸ್ಪಷ್ಟನೆ ನೀಡಿದರು.
Jul 22, 2019, 9:16 pm IST
ಎಚ್.ಡಿ.ರೇವಣ್ಣ ಅವರು ಮಾತನಾಡಿ ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ ಹಾಗಿದ್ದ ಮೇಲೆ ಇಂದು ವಿಶ್ವಾಸಮತ ಯಾಚನೆ ಮಾಡುವುದು ಸೂಕ್ತವಲ್ಲ ಎಂದು ಎಚ್.ಡಿ.ರೇವಣ್ಣ ಹೇಳಿದರು. ಅರವಿಂದ ಲಿಂಬಾವಳಿ ಅವರು ಮಧ್ಯೆ ಪ್ರವೇಶಿಸಿದರು ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕ-ಮಕಿ ನಡೆಯಿತು.
Jul 22, 2019, 9:15 pm IST
ಎಚ್.ಡಿ.ರೇವಣ್ಣ ಅವರು ಮಾತನಾಡಿ ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ ಹಾಗಿದ್ದ ಮೇಲೆ ಇಂದು ವಿಶ್ವಾಸಮತ ಯಾಚನೆ ಮಾಡುವುದು ಸೂಕ್ತವಲ್ಲ ಎಂದು ಎಚ್.ಡಿ.ರೇವಣ್ಣ ಹೇಳಿದರು.
Jul 22, 2019, 8:53 pm IST
'ಶುಕ್ರವಾರವೇ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ವಚನ ನೀಡಿದ್ದರು, ಸೋಮವಾರ ವಿಶ್ವಾಸಮತ ಯಾಚನೆ ಮಾಡುತ್ತೇವೆ ಎಂದು ಅಂತೆಯೇ ನಡೆದುಕೊಳ್ಳಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮಾತನಾಡಲಿ, ನಾವು ಕೇಳುತ್ತೇವೆ, 12 ಗಂಟೆ ಆದರೂ ಇಲ್ಲೇ ಕೂತಿರುತ್ತೇವೆ, ಇಂದೇ ವಿಶ್ವಾಸಮತ ಯಾಚನೆ ಮುಗಿಸಲಿ' ಎಂದು ಯಡಿಯೂರಪ್ಪ ಅವರು ಹೇಳಿದರು.
Jul 22, 2019, 8:49 pm IST
ಗದ್ದಲ ಮುಗಿದಿದ್ದು, ಯಡಿಯೂರಪ್ಪ ಅವರಿಗೆ ಮತ್ತೆ ಮಾತನಾಡಲು ಅವಕಾಶ ನೀಡಲಾಗಿದೆ. ಯಡಿಯೂರಪ್ಪ ಅವರಿಗೆ ಚುಟುಕಾಗಿ ಮಾತನಾಡಲು ಕೋರಲಾಗಿದೆ.
Jul 22, 2019, 8:46 pm IST
ಪ್ರತಿಭಟನೆ ಮಾಡುತ್ತಿರುವ ಆಡಳಿತ ಪಕ್ಷದ ಸದಸ್ಯರನ್ನು ಸಿದ್ದರಾಮಯ್ಯ ಅವರು ಗದರಿ ತಮ್ಮ-ತಮ್ಮ ಸ್ಥಾನಗಳಿಗೆ ವಾಪಸ್ ತೆರಳುವಂತೆ ಸೂಚಿಸಿದರು. ಸಿದ್ದರಾಮಯ್ಯ ಅವರು ಹೇಳಿದ ಕೂಡಲೇ ಎಲ್ಲರೂ ತಮ್ಮ-ತಮ್ಮ ಸ್ಥಾನಗಳಿಗೆ ವಾಪಸ್ ತೆರಳಿದರು.
Jul 22, 2019, 8:44 pm IST
ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. 'ನ್ಯಾಯ ಬೇಕು, ಸಂವಿಧಾನ ಉಳಿಯಲಿ' ಎಂಬಿತ್ಯಾದಿ ಘೋಷಣೆಗಳನ್ನು ಆಡಳಿತ ಪಕ್ಷದ ಸದಸ್ಯರು ಕೂಗುತ್ತಿದ್ದಾರೆ.
Jul 22, 2019, 8:36 pm IST
ಇಂದೇ ವಿಶ್ವಾಸಮತ ಅಂಗೀಕಾರ ಮಾಡಬೇಕು ಎಂಬ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ, ಗಲಾಟೆ ಪ್ರಾರಂಭ ಮಾಡಿದರು. ಇದಕ್ಕೆ ರಮೇಶ್ ಕುಮಾರ್ ಅವರು ಸಿಟ್ಟಾದರು.
Jul 22, 2019, 8:35 pm IST
ರಾತ್ರಿ 12 ಗಂಟೆ ಆದರೂ ಸರಿ ನಾವು ಇಲ್ಲೇ ಇರುತ್ತೀವಿ ಇಂದೇ ವಿಶ್ವಾಸಮತ ಅಂಗೀಕಾರ ಆಗಲಿ ಎಂದು ಯಡಿಯೂರಪ್ಪ ಅವರು ಹೇಳಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ನಾನೂ ಸಹ ಇಲ್ಲೇ ಇರುತ್ತೇನೆ ಎಂದು ಹೇಳಿದರು.
Jul 22, 2019, 8:33 pm IST
ಕಲಾಪ ಪುನರರಾಂಭವಾಗಿದ್ದು, ವಿಪಕ್ಷ ನಾಯಕ ಯಡಿಯೂರಪ್ಪ ಅವರು ಮಾತನಾಡುತ್ತಿದ್ದಾರೆ.
Jul 22, 2019, 8:25 pm IST
ಸ್ಪೀಕರ್ ರಮೇಶ್ ಕುಮಾರ್ ಅವರ ಮನವೊಲಿಸಲು ದೋಸ್ತಿ ನಾಯಕರು ನಿರತರಾಗಿದ್ದಾರೆ. ನಾಳೆ ಒಂದು ದಿನ ಸಮಯಾವಕಾಶ ಕೊಡಬೇಕು ಎಂದು ದೋಸ್ತಿ ನಾಯಕರು ಸ್ಪೀಕರ್ ಅವರ ಬಳಿ ಮನವಿ ಮಾಡುತ್ತಿದ್ದಾರೆ. ಆದರೆ ಸ್ಪೀಕರ್ ಅವರು ಇದಕ್ಕೆ ಒಪ್ಪುತ್ತಿಲ್ಲ ಎನ್ನಲಾಗಿದೆ.
Jul 22, 2019, 8:14 pm IST
ಹತ್ತು ನಿಮಿಷಕ್ಕೆ ಮುಂದೂಡಿದ್ದ ಸದನ ಒಂದೂವರೆ ಗಂಟೆ ಆದರೂ ಇನ್ನೂ ಪ್ರಾರಂಭವಾಗಿಲ್ಲ.
Jul 22, 2019, 7:07 pm IST
ಇಂದೇ ವಿಶ್ವಾಸಮತ ಯಾಚನೆ ಮಾಡಿ, ಇಲ್ಲವಾದರೆ ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ, ಬೇರೆ ಯಾರಾದರೂ ಹೊಸ ಸ್ಪೀಕರ್ ಅನ್ನು ಹುಡುಕಿಕೊಳ್ಳಿ ಎಂದು ರಮೇಶ್ ಕುಮಾರ್ ಅವರು ಹೇಳಿದ್ದಾರೆ.
Jul 22, 2019, 7:06 pm IST
ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರತ್ಯೇಕವಾಗಿ ಭೇಟಿ ನೀಡಿದರು. ಆ ನಂತರ ಬಿಜೆಪಿ ಪ್ರಮುಖ ಮುಖಂಡರು ಸಹ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದರು.
Jul 22, 2019, 6:22 pm IST
ಆಡಳಿತ ಪಕ್ಷದ ಸದಸ್ಯರು ಗದ್ದಲ ಆರಂಭಿಸಿದ ಕಾರಣ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಹತ್ತು ನಿಮಿಷದ ಕಾಲ ಮುಂದಕ್ಕೆ ಹಾಕಿದರು.
Jul 22, 2019, 6:21 pm IST
ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಆಡಳಿತ ಪಕ್ಷದ ಶಾಸಕರು ಗದ್ದಲ ಆರಂಭಿಸಿದ್ದಾರೆ.
READ MORE
7:26 AM, 22 Jul
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದಂತೆ ಇಂದೇ ಮತದಾನ ನಡೆಯುವುದೇ ಮುಂದೂಡುವರೇ?
7:26 AM, 22 Jul
ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಚರ್ಚೆಯನ್ನು ಕಲಾಪದ ಅಂತ್ಯದಲ್ಲಿ ನಿರ್ಣಯವನ್ನು ಮತಕ್ಕೆ ಹಾಕಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು.
7:28 AM, 22 Jul
ಕರ್ನಾಟಕ ಸರ್ಕಾರದ ವಿಶ್ವಾಸಮತ ಯಾಚನೆ ರಾಜಕೀಯ ನಾಟಕ ಮುಂದುವರೆದಿದ್ದು, ಬಿಎಸ್ಪಿಯ ದ್ವಂದ್ವ ಹೆಚ್ಚಿದೆ.
7:28 AM, 22 Jul
ಆರಂಭದಲ್ಲಿ ಬಿಜೆಪಿ ಪರ ಮತದಾನ ಮಾಡುವುದಾಗಿ ಮಹೇಶ್ ತಿಳಿಸಿದ್ದರು.ಬಳಿಕ ಮತದಾದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದರು. ಈ ಎರಡೂ ಬೆಳವಣಿಗೆಯೂ ಬಿಎಸ್ಪಿ ನಾಯಕರ ನಿರ್ದೇಶನದಂತೆಯೇ ನಡೆದಿತ್ತು.
7:54 AM, 22 Jul
ಬುಧವಾರದ ವರೆಗೆ ಚರ್ಚೆ ಮುಂದೂಡುವ ಕುರಿತು ತಾಂತ್ರಿಕ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಉಭಯ ಪಕ್ಷಗಳ ಉನ್ನತ ಮೂಲಗಳು ತಿಳಿಸಿವೆ.
9:09 AM, 22 Jul
ಸ್ಪೀಕರ್ ಇಂದು ವಿಶ್ವಾಸಮತಕ್ಕೆ ಹಾಕುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಸಹ ಹೇಳಿದ್ದಾರೆ. ಅವರ ಮಾತು ನಂಬುತ್ತೇವೆ- ಶಾಸಕ ಎಎಸ್ ಪಾಟೀಲ್ ನಡಹಳ್ಳಿ.
9:09 AM, 22 Jul
13 ಶಾಸಕರೂ ಒಟ್ಟಾಗಿದ್ದೇವೆ. ನಾವು ವಿಶ್ವಾಸಮತ ಯಾಚನೆಗೆ ಬರುವುದಿಲ್ಲ ಎಂದು ಅತೃಪ್ತ ಶಾಸಕರು ತಿಳಿಸಿದ್ದಾರೆ.
9:12 AM, 22 Jul
ಇಂದು ವಿಶ್ವಾಸ ಮತ ಯಾಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಮಾತೇ ಮಾಣಿಕ್ಯ, ಮಾತೇ ಮನುಷ್ಯತ್ವ. ಅದರಂತೆ ಎಚ್ಡಿಕೆ ನಡೆದುಕೊಳ್ಳಬೇಕು- ವಿಧಾನಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್
9:27 AM, 22 Jul
ಯಾರಿಂದ ಸಾಂದರ್ಭಿಕ ಶಿಶು ಜನಿಸಿತ್ತೋ ಅವರಿಂದಲೇ ಸತ್ತಿದೆ. ಸಾಂದರ್ಭಿಕ ಶಿಶು ಸತ್ತು 16 ದಿನಗಳಾಗಿವೆ. ಆ ಹೆಣವನ್ನು ವಿಧಾನಸೌಧದಲ್ಲಿ ಇಟ್ಟುಕೊಂಡು ಕೂತಿದ್ದಾರೆ. ಹೆಣ ಹೊರಲು ನಾಲ್ಕು ಜನ ಬರಬಹುದು ಎಂದು ಕಾಯುತ್ತಿದ್ದಾರೆ- ಶಾಸಕ ಎಎಸ್ ಪಾಟೀಲ್ ನಡಹಳ್ಳಿ.
Bengaluru: BJP MLAs leave from Ramada Hotel for Vidhana Soudha; HD Kumaraswamy government will face floor test in the Assembly today. pic.twitter.com/hBsLndndIQ
ಶ್ರೀಮಂತ್ ಪಾಟೀಲ್ ಪುತ್ರ ಸುಳ್ಳು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮೇಲೆ ನಮಗೆ ನಂಬಿಕೆ ಇದೆ. - ಯುಟಿ ಖಾದರ್
10:09 AM, 22 Jul
ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸಲೇಬೇಕು. ಶತಾಯಗತಾಯ ಸದನವನ್ನು ಇಂದು ಮುಗಿಸಲೇಬೇಕು. ನಾನು ಮೊನ್ನೆಯೇ ಹೇಳಿದ್ದೆ. ಇಂದು ಮುಕ್ತಾಯ ಹಾಡುತ್ತೇನೆ- ಸ್ಪೀಕರ್ ರಮೇಶ್ ಕುಮಾರ್
10:13 AM, 22 Jul
ಎರಡೇ ದಿನ ಚರ್ಚೆ ಮಾಡಿದ್ದೇವೆ. ವರ್ಷಾನುಗಟ್ಟಲೆ, ತಿಂಗಳುಗಟ್ಟಲೆ ಚರ್ಚೆ ಆಗಿಲ್ಲ. ಬುದ್ಧಿ ಇಲ್ಲದವರು, ನಿಯಮಾವಳಿಗಳ ಬಗ್ಗೆ ತಿಳಿವಳಿಕೆ ಇಲ್ಲದವರು ಹಾಗೆ ಹೇಳಿದ್ದಾರೆ. ಹಾಗೆ ಮಾಡಿದರೆ ನಿಯಮಾವಳಿಗಳನ್ನು ತಿಪ್ಪೆಗೆ ಹಾಕಬೇಕಾಗುತ್ತದೆ- ರಮೇಶ್ ಕುಮಾರ್
10:32 AM, 22 Jul
ಸರ್ಕಾರದ ಉಳಿವಿಗಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶೇಷ ಪೂಜೆ. ಗಾಂಧಿಬಜಾರ್ನಲ್ಲಿರುವ ವ್ಯಾಸರಾಯರ ಮಠದಲ್ಲಿ ಪೂಜೆ.
10:34 AM, 22 Jul
ಬಸ್ಗಳಲ್ಲಿ ವಿಧಾನಸೌಧಕ್ಕೆ ಬಂದ ಬಿಜೆಪಿ ಶಾಸಕರು
Bengaluru: Former Karnataka CM & BJP leader BS Yeddyurappa along with BJP MLAs arrives at Vidhana Soudha. Congress-JD(S) coalition government to face floor test in Assembly today. pic.twitter.com/p6eIuaIsLH
ಸುಪ್ರೀಂಕೋರ್ಟ್ನಲ್ಲಿ ಇಂದು ರಾಜ್ಯದ ವಿವಿಧ ಅರ್ಜಿಗಳ ವಿಚಾರಣೆ
10:40 AM, 22 Jul
ಇಂದು ಅತೃಪ್ತ ಶಾಸಕರ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್.
10:40 AM, 22 Jul
ನಾಳೆ ಅರ್ಜಿ ವಿಚಾರಣೆ ನೋಡುತ್ತೇವೆ ಎಂದು ಸುಪ್ರೀಂಕೋರ್ಟ್.
10:41 AM, 22 Jul
ನಾಳೆ ಮೊದಲ ಪ್ರಕರಣವಾಗಿ ಅರ್ಜಿಯನ್ನು ಪರಿಗಣಿಸುವಂತೆ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಮನವಿ.
10:43 AM, 22 Jul
ಇಂದೇ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಲು ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸಾಧ್ಯವಿಲ್ಲ ಎಂದ ನ್ಯಾಯಾಲಯ
10:46 AM, 22 Jul
ವಿಧಾನಸೌಧಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್
10:49 AM, 22 Jul
ವಿಶ್ವಾಸಮತದ ಕುರಿತಾದ ಅರ್ಜಿಗಳನ್ನು ಈ ಹಿಂದೆಯೂ ತುರ್ತು ವಿಚಾರಣೆಗೆ ಎತ್ತಿಕೊಂಡಿರಲಿಲ್ಲ- ಸುಪ್ರೀಂಕೋರ್ಟ್
10:56 AM, 22 Jul
ಸ್ಪೀಕರ್ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಾಯಕರು
11:09 AM, 22 Jul
ಸದನಕ್ಕೆ ಬಾರದೆ ಇರುವ ಶಾಸಕರನ್ನು ಗೈರು ಹಾಜರಿ ಎಂದು ನಮೂದಿಸಲಾಗುವುದು- ರಮೇಶ್ ಕುಮಾರ್
11:09 AM, 22 Jul
ರಾಜ್ಯ ಸಮ್ಮಿಶ್ರ ಸರ್ಕಾರ ರಾಜ್ಯಪಾಲರ ಸೂಚನೆ ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ಪಕ್ಷೇತರ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ವಾದ
11:12 AM, 22 Jul
ವಿಶ್ವಾಸಮತ ಪ್ರಕ್ರಿಯೆಗೆ ವಿಧಾನಸಭೆ ಕಾರ್ಯದರ್ಶಿಯಿಂದ ತಯಾರಿ. ಶಾಸಕರ ಪಟ್ಟಿಯ ಸಿದ್ಧತೆ
11:12 AM, 22 Jul
ವಿಧಾನಸೌಧಕ್ಕೆ ರಾಜ್ಯಪಾಲರ ವಿಶೇಷಾಧಿಕಾರಿ: ಕಲಾಪ ವೀಕ್ಷಿಸಿ ಬಳಿಕ ರಾಜ್ಯಪಾಲರಿಗೆ ವರದಿ
11:13 AM, 22 Jul
ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
11:15 AM, 22 Jul
ಪತ್ರಿಕೆ ವರದಿ ಆಧಾರದಲ್ಲಿ, ಕುದುರೆ ವ್ಯಾಪಾರ ಮತ್ತು ರಾಜಕಾರಣಿಗಳ ಪಕ್ಷಾಂತರಕ್ಕೆ ಸಂಬಂಧಿಸಿದಂತೆ ವಕೀಲರಾದ ಲಿಲಿ ಥಾಮಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
Curiosity over Karnataka government Floor Test is continuing its not at cleared that government will seeks the vote of confidence today.Karnataka Assembly floor Test live updates in Kannada.