ಕನ್ನಡಿಗರ ಅಭಿಯಾನ: ದಕ್ಷಿಣ ಪಥೇಶ್ವರ "ಇಮ್ಮಡಿ ಪುಲಕೇಶಿ ಜಯಂತಿ" ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೆಂಡ್
ಇಂದು ಕನ್ನಡದ ಕುಲ ತಿಲಕ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯ. ಇಮ್ಮಡಿ ಪುಲಕೇಶಿ ರಾಜರನ್ನು ಹಲವರು ಸ್ಮರಿಸಿದ್ದಾರೆ. ಇದಕ್ಕೆಲ್ಲ ಕನ್ನಡಿಗರು ಇಷ್ಟು ದಿನಗಳ ಕಾಲ ಮಾಡಿದ ಪ್ರಯತ್ನವೇ ಮುಖ್ಯ ಕಾರಣ. ಪಕ್ಕದ ರಾಜ್ಯದ ರಾಜರುಗಳನ್ನು ಮೆರೆಸದೆ ಕನ್ನಡಿಗರು ಕರ್ನಾಡಕದ ರಾಜರನ್ನು ಮೆರೆಸಬೇಕು ಹಾಗೂ ಸ್ಮರಿಸಬೇಕು ಎಂದು ಕನ್ನಡಿಗರು ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಿದ್ದರು. ಅಲ್ಲದೇ ಕನ್ನಡ ರಾಜರ ಬಗ್ಗೆ ಪ್ರಚಾರ ಮಾಡಲು ಪ್ರಾರಂಭಿಸಿದರು. ಅದರ ಪರಿಣಾಮವಾಗಿ ಇಂದು ರಾಜಕಾರಣಿಗಳು ಸಹ ಕನ್ನಡ ಕುಲ ತಿಲಕ ಎಂದೇ ಖ್ಯಾತಿ ಗಳಿಸಿರುವ ಇಮ್ಮಡಿ ಪುಲಕೇಶಿಗೆ ಶುಭಕೋರಿದ್ದಾರೆ. ಯಾರು ಏನೆಂದು ಶುಭಕೋರಿದ್ದಾರೆ ಎನ್ನುವ ವಿವರ ನೋಡೋಣ.
ರವಿ ಆಲದಮರ ಎನ್ನುವವರು, ನಾವು ಕನ್ನಡಿಗರು, ಕನ್ನಡ ಮಣ್ಣಿನ ಕೆಚ್ಚೆದೆಯ ಮಕ್ಕಳು ಎಂದಿದ್ದು, ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯ ಹಂಚಿಕೊಂಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಎನ್ನುವವರು, ಯಾರೋ ನಾಲ್ಕು ಜನ ರಾಜರನ್ನ ಸೋಲಿಸಿದ್ದಲ್ಲ ಇಮ್ಮಡಿ ಪುಲಕೇಶಿ ಸೋಲಿಸಿದ ಅಷ್ಟು ಜನ ಸಾಮ್ರಾಟರೆ ಅದಕ್ಕೆ ಸಾಮ್ರಾಟರಿಗೆ ಮಹಾನ್ ಸಾಮ್ರಾಟ ಅನ್ನೋದು, ನೌಕ ದಿನದ ನಲ್ಮೆಯ ಹಾರೈಕೆಗಳು 💛❤️💪

ನೌಕಪಡೆಯ ಪಿತಾಮಹ, ಎರೆಯ, ಅಖಂಡ ಭಾರತದ ಪರಮೇಶ್ವರ, ಕನ್ನಡ ಕುಲತಿಲಕ,ಪರಮ ಭಾಗವತ, ಕನ್ನಡನಾಡು ಕಂಡ ಶ್ರೇಷ್ಠ ದೊರೆ ಜಯ ಜಯ ಚಾಲುಕ್ಯ ಚಕ್ರವರ್ತಿ ಶ್ರೀ #ಇಮ್ಮಡಿಪುಲಕೇಶಿ #ImmadiPulakeshi #FatherofIndianNavy #ನೌಕಪಡೆಯಪಿತಾಮಹ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ.
ರಾಜಕಾರಣಿಗಳಿಂದಲೂ ಶುಭಾಶಯ ಪೋಸ್ಟ್
ಕಳೆದ ಕೆಲವು ವರ್ಷಗಳಿಂದ ಕನ್ನಡ ರಾಜರು ಹಾಗೂ ಕರ್ನಾಟಕದ ಹಿರಿಮೆಯನ್ನು ಹಂಚಿಕೊಳ್ಳುವ ಕೆಲಸವಾಗಬೇಕು ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ನಡೆಸಿದ್ದರು. ಅದರ ಪರಿಣಾಮ ಎನ್ನುವಂತೆ ಹಲರು ಸೋಷಿಯಲ್ ಮೀಡಿಯಾದಲ್ಲಿ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯಕ್ಕೆ ಶುಭಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ಕನ್ನಡದ ಕುಲ ತಿಲಕ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು. ನೌಕಾಪಡೆಯ ಪಿತಾಮಹ, ಅಖಂಡ ಭಾರತದ ದೊರೆ, ಚಾಲುಕ್ಯ ಸಾಮ್ರಾಟ, ದಕ್ಷಿಣಾಪಥೇಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಈ ದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು ಎಂದು ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ ಎಚ್.ಡಿ ದೇವೇಗೌಡ ಅವರು ಶುಭಾ ಕೋರಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಕನ್ನಡನಾಡನ್ನು ಆಳಿದ ಹೆಮ್ಮೆಯ ದೊರೆ, ಅಖಂಡ ಭಾರತವನ್ನು ಆಳಿದ ಪ್ರಪ್ರಥಮ ಕನ್ನಡಿಗ, ಮೊತ್ತ ಮೊದಲಿಗೆ ನೌಕಾಪಡೆ ಕಟ್ಟಿದ ಸಮರಕಲಿ ಆಗಿರುವ ಚಾಲುಕ್ಯ ಸಾಮ್ರಾಟ, ದಕ್ಷಿಣಾಪಥೇಶ್ವರ ಬಿರುದಾಂಕಿತ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಈ ದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು. ಕನ್ನಡಿಗರೆಲ್ಲರಿಗೂ ಇಮ್ಮಡಿ ಪುಲಕೇಶಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಬೃಹತ್ ನೌಕಾಪಡೆಯನ್ನು ಕಟ್ಟಿದ ಕರ್ನಾಟಕದ ಹೆಮ್ಮೆಯ ದೊರೆ, ಉತ್ತರ ಪಥೇಶ್ವರ ಹರ್ಷವರ್ಧನನನ್ನು ಸೋಲಿಸಿ 'ದಕ್ಷಿಣ ಪಥೇಶ್ವರ' ಬಿರುದು ಪಡೆದ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯಂದು ಭಕ್ತಿಪೂರ್ವಕ ನಮನಗಳು. #immadipulakeshi #pulakeshi #karnataka pic.twitter.com/bPgwquZqdn
— Dr. Mantar Gowda (@GowdaMantar) December 4, 2025
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಅಖಂಡ ಭಾರತದ ಚಾಲುಕ್ಯ ಚಕ್ರವರ್ತಿ, ನೌಕಾಪಡೆಯ ಪಿತಾಮಹ ಹಾಗೂ ದಕ್ಷಿಣ ಪಥೇಶ್ವರ ಎಂಬ ಬಿರುದಾಂಕಿತ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. ಕನ್ನಡ ಕುಲ ಕೋಟಿ ತಿಲಕ ಹಾಗೂ ಸ್ವಾಭಿಮಾನದ ಪ್ರತೀಕವಾದ ಇಮ್ಮಡಿ ಪುಲಿಕೇಶಿ ಮಹಾರಾಜರು ಸ್ಥಾಪಿಸಿದ ಸಾರ್ವಭೌಮತ್ವ ಮತ್ತು ಅವರ ಆಡಳಿತ ವೈಖರಿ ಇಂದಿಗೂ ಸ್ಫೂರ್ತಿದಾಯಕ ಎಂದು ಶುಭಕೋರಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications