Get Updates
Get notified of breaking news, exclusive insights, and must-see stories!

ರೆಡ್ಡಿ ಉಪ್ಪು ತಿಂದಿದ್ದಾರೆ, ಈಗ ನೀರು ಕುಡಿಯುತ್ತಿದ್ದಾರೆ: ಸಿದ್ದರಾಮಯ್ಯ

ಚಿಕ್ಕಮಗಳೂರು, ನವೆಂಬರ್ 11: ಜನಾರ್ದನ ರೆಡ್ಡಿ ಇಂದು ಜೈಲುಪಾಳಾದ ಬಗ್ಗೆ ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಉಪ್ಪು ತಿಂದವರು ನೀರು ಕುಡಿಯಲೇ ಬೇಕು' ಎಂದರು.

ಚಿಕ್ಕಮಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಯಾರೇ ಕಾನೂನು ವಿರೋಧಿ ಕಾರ್ಯ ಮಾಡಿದರೆ ಇದೇ ಗತಿಯಾಗುತ್ತದೆ ಎಂದರು.

Janardhan Reddy made mistake now taking punishment: Siddaramaiah

ಕೆಲ ದಿನಗಳ ಹಿಂದಷ್ಟೆ ಜನಾರ್ದನ ರೆಡ್ಡಿ ಹಾಗೂ ಸಿದ್ದರಾಮಯ್ಯ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದ್ದವು. ಸಂದರ್ಶನವೊಂದರಲ್ಲಿ ರೆಡ್ಡಿ ಅವರು, ನನ್ನನ್ನು ಸಿದ್ದರಾಮಯ್ಯ ಅವರು ಜೈಲಿಗೆ ಹಾಕಿಸಿದರು, ಅವರು ಮಾಡಿದ ಪಾಪಕ್ಕೆ ಅವರ ಮಗ ತೀರಿಕೊಂಡ ಎಂದಿದ್ದರು.

ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಯುವಕರು
ಚಿಕ್ಕಮಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಇಂದು ಭಾರಿ ನೂಕಾಟ ತಳ್ಳಾಟ ಎದುರಿಸಬೇಕಾಯಿತು. ನೂರಾರು ಜನ ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು.

Janardhan Reddy made mistake now taking punishment: Siddaramaiah

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸಿದ್ದರಾಮಯ್ಯ ನವರ ಮೇಲೆ ಮುಗಿಬಿದ್ದ ಅಭಿಮಾನಿಗಳು ಪೊಲೀಸ್ ಭದ್ರತೆಯ ನಡುವೆಯೇ ಸೆಲ್ಫಿ ತಗೆದುಕೊಳ್ಳಲು ಮುಗಿಬಿದ್ರು. ಸುಮಾರು 30 ನಿಮಿಷಗಳ ಕಾಲ ಸಾವಿರಾರು ಜನ ಸೇಲ್ಫಿ ತಗೆದುಕೊಳ್ಳಲು ನಾ ಮುಂದು ತಾ ಮುಂದು ಅಂತಾ ಸಿದ್ದರಾಯ್ಯನವರನ್ನು ಮುಂದೆ ಸಾಗಲು ಬಿಡದೇ ಜಮಾಹಿಸಿದರು.

ಇನ್ನ ಕೆಲ ಅಭಿಮಾನಿಗಳು ಮನೆಗಳ ಮೇಲೆ ಹತ್ತಿ ಪೋಟೋ ತಗೆಯಲು ಮುಗಿಬಿದ್ರು ಈ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಮಾಜಿ ಸಿ ಎಂ ಸಿದ್ದರಾಮೈ ಹರಸಾಹಸ ಪಡುವಂತಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+