ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ವೈರಲ್ ಆಗಿದ್ದ ಗುಪ್ತಚರ ಇಲಾಖೆ ವರದಿ ಸುಳ್ಳು
ಬೆಂಗಳೂರು, ಏಪ್ರಿಲ್ 8: ಚಾಮುಂಡೇಶ್ವರಿ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಗೆ ಸೂಕ್ತವಲ್ಲ ಎಂಬುದಾಗಿ ಗುಪ್ತಚರ ಇಲಾಖೆ ವರದಿ ನೀಡಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ವರದಿಯ ಪ್ರತಿಯೂ ಎಲ್ಲೆಡೆ ಹರಿದಾಡಿತ್ತು. ಈ ಪತ್ರವೀಗ ಸುಳ್ಳು ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ತಾವು ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಹರಿದಾಡಿದ್ದ ವರದಿಯಲ್ಲಿ, ಚಾಮುಂಡೇಶ್ವರಿ ಸಿಎಂ ಸ್ಪರ್ಧೆಗೆ ಸೂಕ್ತವಲ್ಲ ಎಂದು ಹೇಳಲಾಗಿತ್ತು.
ಸಿಎಂ ಸ್ಪರ್ಧೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ: ಅಸಲಿಯೊ, ನಕಲಿಯೊ
"ಸೂಚನೆ ಮೇರೆಗೆ ವಿಧಾನಸಭಾ ಕ್ಷೇತ್ರಗಳ ಪರಿಶೀಲನೆಯನ್ನು ನಾವು ನಡೆಸಿದ್ದೇವೆ. ಇದರ ಫಲಿತಾಂಶಗಳು ಈ ಕೆಳಗಿನಂತಿವೆ. ಜಾತ್ಯಾತೀತ ಜನತಾದಳದ ನಾಯಕ ಜಿಟಿ ದೇವೇಗೌಡ ಮತ್ತು ಸ್ಥಳೀಯ ಒಕ್ಕಲಿಗ ನಾಯಕರು ಒಕ್ಕಲಿಗ ಮತಗಳ ಧ್ರುವೀಕರಣ ನಡೆಸಿದ್ದಾರೆ. ಹಾಗಾಗಿ ಚಾಮುಂಡೇಶ್ವರಿ ಉತ್ತಮ ಆಯ್ಕೆಯಲ್ಲ," ಎಂದು ಈ ವರದಿಯಲ್ಲಿ ಹೇಳಲಾಗಿತ್ತು.
ವರುಣಾ, ಬಸವಕಲ್ಯಾಣ, ಗಂಗಾವತಿ ಮತ್ತು ಶಾಂತಿನಗರ ಮುಖ್ಯಮಂತ್ರಿ ಸ್ಪರ್ಧೆಗೆ ಉತ್ತಮ ಕ್ಷೇತ್ರಗಳು ಎಂದು ಇದರಲ್ಲಿ ಸಲಹೆ ನೀಡಲಾಗಿತ್ತು.
Fake document: why are BJP guys getting excited over fake news & fake documents?
— Siddaramaiah (@siddaramaiah) April 7, 2018
Fight on issues. What do you offer the voter? https://t.co/SNtXsogZ5L
ಆದರೆ ಈ ಕುರಿತು ಟ್ಟಿಟ್ಟರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ನಕಲಿ ದಾಖಲೆ. ಬಿಜೆಪಿ ನಾಯಕರು ಯಾಕೆ ನಕಲಿ ದಾಖಲೆಗಳನ್ನು ಮತ್ತು ಸುದ್ದಿಗಳನ್ನು ನೋಡಿದಾಗ ಉತ್ತೇಜಿತರಾಗುತ್ತಾರೆ. ವಿಷಯಗಳನ್ನು ಇಟ್ಟುಕೊಂಡು ಹೋರಾಡಿ. ನೀವು ಮತದಾರರಿಗೆ ಏನನ್ನು ನೀಡಲು ಹೊರಟಿದ್ದೀರಿ," ಎಂದು ಕಿಡಿಕಾರಿದ್ದಾರೆ.