ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!
ಹುಬ್ಬಳ್ಳಿ, ಮೇ 17 : ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿರುವ ತೋಳನಕೆರೆ ಪಕ್ಕದ ಅಕ್ಷಯ ಕಾಲೋನಿ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಅಪಾರ ಪ್ರಮಾಣದ ನೀರು ಚರಂಡಿ ಸೇರುತ್ತಿದೆ. ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ, ಇದರಿಂದ ಜನರು ಅಸಮಾಧಾನಗೊಂಡಿದ್ದಾರೆ.
ಸೋಮವಾ
ಸಂಜೆ
ಈ
ಪ್ರದೇಶದ
ಸುತ್ತಮುತ್ತಲೂ
ಕುಡಿಯುವ
ನೀರನ್ನು
ಜಲಮಂಡಳಿ
ಒದಗಿಸಿತ್ತು.
ಕುಡಿಯುವ
ನೀರಿನ
ಪೈಪ್
ಲೈನ್
ಇರುವ
ಜಾಗದಲ್ಲಿ
ವಿದ್ಯುತ್
ಕಂಬ
ಹಾಕಲು
ಬಂದ
ಕಾರ್ಮಿಕರು,
ಗುಂಡಿ
ತೆಗೆಯುವಾಗಿ
ನೀರಿನ
ಪೈಪ್
ಒಡೆದಿದೆ.
ಆದರೆ,
ಈ
ಬಗ್ಗೆ
ಯಾರಿಗೂ
ತಿಳಿಸದೆ
ಅವರು
ಜಾಗ
ಖಾಲಿ
ಮಾಡಿದ್ದಾರೆ.
[ಕುಡಿಯುವ
ನೀರಿನ
ನಿರೀಕ್ಷೆಯಲ್ಲಿ
ಖಾಲಿ
ಬಿಂದಿಗೆ
ಸಾಲು]
ಮಂಗಳವಾರ ರಾತ್ರಿ ಕುಡಿಯುವ ನೀರು ಬಿಟ್ಟಿದ್ದರಿಂದ, ಒಡೆದ ಪೈಪ್ ಮೂಲಕ ರಾತ್ರಿಯೀಡಿ ಅಪಾರ ಪ್ರಮಾಣದ ನೀರು ಚರಂಡಿಗೆ ಹರಿದಿದೆ. ಈ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ. ಜೊತೆಗೆ ಇಲ್ಲಿ ಜನವಸತಿಯೂ ಇಲ್ಲವಾದ್ದರಿಂದ ಸಾರ್ವಜನಿಕರು ಸುಮ್ಮನೇ ಕೆರೆ ನೀರು ಎಂದು ಕೊಂಡಿದ್ದಾರೆ. [ಕುಡಿಯುವ ನೀರಿಗೂ ಸಂಕಷ್ಟ : ಬರಗಾಲಕ್ಕೆ ಕಾರಣ ಯಾರು?]
ಮಂಗಳವಾರ ಬೆಳಗ್ಗೆ ಅಕ್ಷಯ ಕಾಲೋನಿ ಜನರು ನಲ್ಲಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿರುವುದನ್ನು ಗಮನಿಸಿ, ಜಲಮಂಡಳಿಯವರಿಗೆ ತಿಳಿಸಿದ್ದಾರೆ. ಆದರೆ ಯಾವ ಅಧಿಕಾರಿಗಳೂ ಇದುವರೆಗೂ ಸ್ಥಳಕ್ಕೆ ಬಂದಿಲ್ಲ. [ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]
ನಗರದಲ್ಲಿ ಮೊದಲೇ ಐದಾರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಈ ಪ್ರಮಾಣದಲ್ಲಿ ನೀರು ಪೋಲಾದರೆ ಯಾರು ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.