ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಆರಂಭಕ್ಕೆ ಸಚಿವರ ಮನವಿ
ಬೆಂಗಳೂರು, ಆಗಸ್ಟ್ 09 : ಕರ್ನಾಟಕದಲ್ಲಿ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ಮಂಗಳವಾರ ಬಸವರಾಜ ರಾಯರೆಡ್ಡಿ ಅವರು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದರು. 'ಕರ್ನಾಟಕ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಬೇಕು' ಎಂದು ಮನವಿ ಸಲ್ಲಿಸಿದರು.[ಮೈಸೂರು, ಹುಬ್ಬಳ್ಳಿಗೆ ವಿಮಾನ ಸೇವೆ ಆರಂಭಿಸಲು ಮನವಿ]
ಕೋರ್ಸ್ ಅಗತ್ಯವಿದೆ : ಕಳೆದ ವಾರ ಕೊಪ್ಪಳದಲ್ಲಿ ಮಾತನಾಡಿದ್ದ ಬಸವರಾಜ ರಾಯರೆಡ್ಡಿ ಅವರು, 'ರಾಜ್ಯದಲ್ಲಿ ಬಹಳಷ್ಟು ರೈಲ್ವೆ ಯೋಜನೆಗಳು ಜಾರಿಯಲ್ಲಿವೆ. ಆದರೆ, ಇದಕ್ಕಾಗಿ ಅಗತ್ಯವಿರುವ ರೈಲ್ವೆ ಇಂಜಿನಿಯರ್ಗಳು ನಮಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಆದ್ದರಿಂದ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಅನ್ನು ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಗಂಭೀರ ಚಿಂತನೆ ನಡೆದಿದೆ' ಎಂದು ಹೇಳಿದ್ದರು.[ಆಗಸ್ಟ್ 28ಕ್ಕೆ ಧಾರವಾಡ ಐಐಟಿ ಶಂಕುಸ್ಥಾಪನೆ]
ವೈಮಾನಿಕ
ಇಂಜಿನಿಯರಿಂಗ್
ಕೋರ್ಸ್
:
'ರಾಜ್ಯದಲ್ಲಿ
ವೈಮಾನಿಕ
ಕ್ಷೇತ್ರ
ವ್ಯಾಪಕವಾಗಿ
ಅಭಿವೃದ್ಧಿಯಾಗುತ್ತಿದೆ.
ಹೆಚ್ಚಿನ
ಸಂಖ್ಯೆಯಲ್ಲಿ
ವಿಮಾನ
ನಿಲ್ದಾಣಗಳು
ನಿರ್ಮಾಣಗೊಂಡು,
ವಿಮಾನಗಳ
ಸಂಚಾರವೂ
ಹೆಚ್ಚಾಗುವುದರಿಂದ
ಪೈಲಟ್ಗಳ
ಬೇಡಿಕೆಯೂ
ಹೆಚ್ಚಾಗಲಿದೆ.
ಇದನ್ನು
ಗಮನದಲ್ಲಿಟ್ಟುಕೊಂಡು,
ರಾಜ್ಯದ
ಆಯ್ದ
ಕಾಲೇಜುಗಳಲ್ಲಿ
ವೈಮಾನಿಕ
ಇಂಜಿನಿಯರಿಂಗ್
ಕೋರ್ಸ್
ಆರಂಭಿಸಲು
ಚಿಂತನೆ
ನಡೆಸಲಾಗಿದೆ'
ಎಂದು
ಸಚಿವರು
ಹೇಳಿದ್ದರು.
[ಕಲಬುರಗಿ-ಹೈದರಾಬಾದ್
ಇಂಟರ್
ಸಿಟಿ
ರೈಲು
ಮತ್ತೆ
ಆರಂಭ]
ವಿವಿಗಳ ಶೃಂಗ ಸಭೆ : ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ 23 ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕನಿಷ್ಟ 2 ದಿನಗಳ ಶೃಂಗಸಭೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಗುಣಮಟ್ಟದ ಶಿಕ್ಷಣ, ವಿವಿಗಳ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ಸೌಲಭ್ಯ ಮುಂತಾದ ವಿಷಯಗಳ ಕುರಿತು ಶೃಂಗಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಯಲಿದೆ.