Get Updates
Get notified of breaking news, exclusive insights, and must-see stories!

ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಕಂಕಣ ಭಾಗ್ಯ: 'ವರ' ಇವರೇನಾ.?

ಬೆಂಗಳೂರು, ಜೂನ್ 4: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ವಿವಾಹ ಇತ್ತೀಚೆಗೆಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬವೂ ಶುಭಕಾರ್ಯಕ್ಕೆ ಸಾಕ್ಷಿಯಾಗಲಿದೆ.

Recommended Video

      ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರನ ಜೊತೆ ನಡೆಯುತ್ತಾ ಡಿಕೆಶಿ ಮಗಳ ಮದುವೆ | DKS Daughter | Aishwarya | CCD

      ಕೆ.ಪಿ.ಸಿ.ಸಿ ಅಧ್ಯಕ್ಷ.. ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ರವರ ಹಿರಿಯ ಪುತ್ರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇಂಜಿನಿಯರಿಂಗ್ ಓದಿರುವ ಪುತ್ರಿ ಐಶ್ವರ್ಯಗೆ ಮದುವೆ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.

      ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಗ.. ಪ್ರಖ್ಯಾತ ಉದ್ಯಮಿಯ ಮಗನೊಂದಿಗೆ ತಮ್ಮ ಪುತ್ರಿ ಐಶ್ವರ್ಯ ವಿವಾಹ ಮಹೋತ್ಸವ ನಡೆಸಲು ಡಿ.ಕೆ.ಶಿವಕುಮಾರ್ ತಯಾರಿ ನಡೆಸಿದ್ದಾರೆ. ಹಾಗಾದ್ರೆ, ಯಾರು 'ಆ' ವರ.? ನೀವೇ ನೋಡಿ...

      ಎಸ್.ಎಂ.ಕೃಷ್ಣ ಮೊಮ್ಮಗ

      ಎಸ್.ಎಂ.ಕೃಷ್ಣ ಮೊಮ್ಮಗ

      ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೊಮ್ಮಗ.. ಹೆಸರಾಂತ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ರವರ ಪುತ್ರ ಅಮಾರ್ಥ್ಯ ಹೆಗ್ಡೆಯೊಂದಿಗೆ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ವಿವಾಹ ನಡೆಸಲು ಮಾತುಕತೆ ನಡೆದಿದೆ.

      ಅಕ್ಟೋಬರ್ ನಲ್ಲಿ ಮದುವೆ.?

      ಅಕ್ಟೋಬರ್ ನಲ್ಲಿ ಮದುವೆ.?

      ಬರುವ ಅಕ್ಟೋಬರ್ ನಲ್ಲಿ ಅಮಾರ್ಥ್ಯ ಹೆಗ್ಡೆ ಮತ್ತು ಡಿ.ಕೆ.ಶಿವಕುಮಾರ್ ಪುತ್ರಿ ವಿವಾಹ ಮಹೋತ್ಸವ ನಡೆಯಲಿದೆ ಎಂದು ಎರಡೂ ಕುಟುಂಬಗಳ ಆಪ್ತ ಮೂಲಗಳು ತಿಳಿಸಿವೆ. ಆಗಸ್ಟ್ ತಿಂಗಳಲ್ಲಿ ಅಮಾರ್ಥ್ಯ ಹೆಗ್ಡೆ-ಐಶ್ವರ್ಯ ನಿಶ್ಚಿತಾರ್ಥ ಸಮಾರಂಭ ನಡೆಯುವ ಸಾಧ್ಯತೆ ಇದೆ.

      ಇಂಜಿನಿಯರಿಂಗ್ ಪದವೀಧರೆ ಐಶ್ವರ್ಯ

      ಇಂಜಿನಿಯರಿಂಗ್ ಪದವೀಧರೆ ಐಶ್ವರ್ಯ

      ಡಿ.ಕೆ.ಶಿವಕುಮಾರ್ ಪುತ್ರಿ 22 ವರ್ಷ ವಯಸ್ಸಿನ ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆ. ಡಿ.ಕೆ.ಶಿವಕುಮಾರ್ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯ ಜವಾಬ್ದಾರಿಯನ್ನು ಐಶ್ವರ್ಯ ವಹಿಸಿಕೊಂಡಿದ್ದಾರೆ.

      ಅಮಾರ್ಥ್ಯ ಹೆಗ್ಡೆ ಹಿನ್ನಲೆ

      ಅಮಾರ್ಥ್ಯ ಹೆಗ್ಡೆ ಹಿನ್ನಲೆ

      ಅಮೇರಿಕಾದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮಾರ್ಥ್ಯ ಹೆಗ್ಡೆ, ತಾಯಿ ಮಾಳವಿಕಾ ಜೊತೆಗೆ ಕುಟುಂಬದ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾರೆ.

      ಉತ್ತಮ ಸ್ನೇಹಿತರು

      ಉತ್ತಮ ಸ್ನೇಹಿತರು

      ಎಸ್.ಎಂ.ಕೃಷ್ಣ, ಉದ್ಯಮಿ ಸಿದ್ದಾರ್ಥ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಉತ್ತಮ ಬಾಂಧವ್ಯವಿದೆ. ಇಷ್ಟು ದಿನ ಉತ್ತಮ ಸ್ನೇಹಿತರಾಗಿದ್ದವರು ಇದೀಗ ಬಂಧುಗಳಾಗಲು ಹೊರಟಿದ್ದಾರೆ.

      ಖಚಿತ ಪಡಿಸಿದ ಡಿ.ಕೆ.ಶಿವಕುಮಾರ್

      ಖಚಿತ ಪಡಿಸಿದ ಡಿ.ಕೆ.ಶಿವಕುಮಾರ್

      ''ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ. ಇದೆಲ್ಲ ದೇವರ ಇಚ್ಛೆ. ಸಿದ್ದಾರ್ಥ ನಿಧನರಾಗಿ ಒಂದು ವರ್ಷ ತುಂಬುವವರೆಗೂ, ಮದುವೆ ಬಗ್ಗೆ ಮುಂದುವರೆಯಲು ಆಗಲ್ಲ'' ಎಂದು ಖಾಸಗಿ ದಿನಪತ್ರಿಕೆಗೆ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

      ಸಿದ್ದಾರ್ಥ ಸಾವನ್ನಪ್ಪುವ ಮುನ್ನವೇ ನಡೆದಿತ್ತು ಮದುವೆ ಮಾತುಕತೆ

      ಸಿದ್ದಾರ್ಥ ಸಾವನ್ನಪ್ಪುವ ಮುನ್ನವೇ ನಡೆದಿತ್ತು ಮದುವೆ ಮಾತುಕತೆ

      ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ದುರಂತ ಸಾವಿಗೀಡಾಗಿದ್ದರು. ಸಿದ್ದಾರ್ಥ ಸಾವನ್ನಪ್ಪುವ ಮುನ್ನವೇ ಅಮಾರ್ಥ್ಯ ಹೆಗ್ಡೆ-ಐಶ್ವರ್ಯ ಮದುವೆ ಬಗ್ಗೆ ಮಾತುಕತೆ ನಡೆದಿತ್ತಂತೆ. ಮದುವೆ ಮಾತುಕತೆಯನ್ನು ಮುಂದುವರೆಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಎರಡೂ ಕುಟುಂಬಗಳೂ ಕಳೆದ ಭಾನುವಾರ ಭೇಟಿಯಾಗಿತ್ತು.

      ಕಳೆದ ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ.. ಎಸ್.ಎಂ.ಕೃಷ್ಣ ಉಪಸ್ಥಿತಿಯಲ್ಲಿ ಅಮಾರ್ಥ್ಯ ಹೆಗ್ಡೆ-ಐಶ್ವರ್ಯ ಮದುವೆ ಮಾತುಕತೆಯನ್ನ ಪೂರ್ಣಗೊಳಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+