ಹೊಸ ವರ್ಷಾಚರಣೆ ದಿನವೇ ಡೆಲಿವರಿ ಸಿಬ್ಬಂದಿ ಮುಷ್ಕರಕ್ಕೆ ಕರೆ, ಆನ್ಲೈನ್ ಸೇವೆಯಲ್ಲಿ ವ್ಯತ್ಯಯ, ಬೇಡಿಕೆಗಳೇನು?
ಹೊಸ ವರ್ಷಾಚರಣೆಗೆ ಇನ್ನೊಂದು ದಿನವಷ್ಟೇ ಬಾಕಿ ಇದೆ. ಆ ದಿನ ಹೊರಗೆ ಹೋಗಿ ಪಾರ್ಟಿ ಮೋಜು ಮಸ್ತಿ ಮಾಡಿದರೆ, ಕೆಲವರು ತಮ್ಮ ಮನೆಗಳಲ್ಲೇ ಪಾರ್ಟಿ ಆಯೋಜಿಸಿ ಎಂಜಾಯ್ ಮಾಡುತ್ತಾರೆ. ಹೀಗಾಗಿ ಆನ್ಲೈನ್ ಶಾಪಿಂಗ್ ಕೂಡ ವರ್ಷದ ಕೊನೆಯ ದಿನ ಭರ್ಜರಿಯಾಗಿ ನಡೆಯುತ್ತಿದೆ. ಅಂದು ಡೆಲಿವರಿ ಸಿಬ್ಬಂದಿಗೂ ಆರ್ಡರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ. ಆದರೆ ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಬ್ಲಿಂಕಿಟ್, ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ಗಿಗ್ ಕಾರ್ಮಿಕರು ಡಿಸೆಂಬರ್ 31ರಂದು ರಾಷ್ಟ್ರವ್ಯಾಪಿ ಮುಷ್ಕರ ಘೋಷಿಸಿದ್ದಾರೆ. ಇದರಿಂದ ಬುಧವಾರದಂದು ಮನೆಬಾಗಿಲಿಗೆ ಡೆಲಿವರಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಆನ್ಲೈನ್ ಡೆಲಿವರಿ ಸೇವೆಯು ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ನೀವು ಬಯಸಿದ ವಸ್ತು ನಿಮ್ಮ ಕೈಸೇರುತ್ತಿದೆ. ಈಗಂತೂ 10 ನಿಮಿಷದಲ್ಲೇ ಡೆಲಿವರಿ ಮಾಡುವ ವ್ಯವಸ್ಥೆಯೂ ಇದೆ. ಇದು ಗ್ರಾಹಕರಿಗೆ ಒಳ್ಳೆಯದೇ ಆದರೂ ಡೆಲಿವರಿ ಸಿಬ್ಬಂದಿ ಕಾಲಿಗೆ ಅಕ್ಷರಶಃ ಚಕ್ರ ಕಟ್ಟಿದಂತಾಗಿದೆ. ಈ ಹಿನ್ನೆಲೆ ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಸಿಬ್ಬಂದಿ ಏಕಾಏಕಿ ಮುಷ್ಕರ ಮಾಡುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಿದ್ದಾರೆ.

ಡೆಲಿವರಿ ಸೇವೆ ಶೇ 60ರಷ್ಟು ಕುಸಿತ
ಕ್ರಿಸ್ಮಸ್ ದಿನವೂ ದೇಶದಾದ್ಯಂತ ಸುಮಾರು 40,000ಕ್ಕೂ ಹೆಚ್ಚು ಡೆಲಿವರಿ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದರು. ಇದರಿಂದಾಗಿ ಅನೇಕ ನಗರಗಳಲ್ಲಿ ಶೇ 50-60% ವಿತರಣಾ ಅಡಚಣೆಗಳು ಉಂಟಾದವು. ಕಾರ್ಮಿಕರ ಬೇಡಿಕೆಗಳನ್ನು ಪರಿಹರಿಸುವ ಬದಲು, ಕಂಪನಿಗಳು ಮೂರನೇ ವ್ಯಕ್ತಿಯ ವಿತರಣಾ ಏಜೆನ್ಸಿಗಳು, ಹೆಚ್ಚುವರಿ ಪ್ರೋತ್ಸಾಹಕ ಟಿಪ್ಸ್ ಹಾಗೂ ನಿಷ್ಕ್ರಿಯ ಐಡಿಗಳನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಮುಷ್ಕರವನ್ನು ತಡೆಯಲು ಪ್ರಯತ್ನಿಸಿದವು. ಈಗ ಮತ್ತೆ ವರ್ಷದ ಅತ್ಯಂತ ಜನನಿಬಿಡ ವಿತರಣಾ ದಿನಗಳಲ್ಲಿ ಒಂದಾದ ಹೊಸ ವರ್ಷದ ಮುನ್ನಾದಿನವಾದ ಡಿಸೆಂಬರ್ 31ರಂದು ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಬ್ಲಿಂಕಿಟ್, ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಡೆಲಿವರಿ ಸಿಬ್ಬಂದಿ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದ್ದಾರೆ.
ಪ್ರಮುಖ ಬೇಡಿಕೆಗಳು
• ನ್ಯಾಯಯುತ, ಪಾರದರ್ಶಕ ವೇತನ ರಚನೆಗಳು
• ಅನಿಯಂತ್ರಿತ ಐಡಿ ಬ್ಲಾಕ್ ಮಾಡುವಿಕೆ ಮತ್ತು ದಂಡಗಳಿಗೆ ಅಂತ್ಯ ಕೊಡುವುದು
• ಕಡ್ಡಾಯ ವಿಶ್ರಾಂತಿ ವಿರಾಮಗಳು ಮತ್ತು ಸುರಕ್ಷತಾ ಸಾಧನಗಳು
• ಆರೋಗ್ಯ, ಅಪಘಾತ ವಿಮೆ, ಪಿಂಚಣಿಯಂತಹ ಸಾಮಾಜಿಕ ಭದ್ರತೆ
• ಸ್ಪಷ್ಟ ಕುಂದುಕೊರತೆ ಪರಿಹಾರ ಮತ್ತು ಪಾರದರ್ಶಕತೆ
• ಅಸುರಕ್ಷಿತ ಅತಿ-ವೇಗದ 10-ನಿಮಿಷಗಳ ವಿತರಣೆ ವ್ಯವಸ್ಥೆ ರದ್ದು ಮಾಡುವುದು

ಡಿಸೆಂಬರ್ 31ರಂದು ಡೆಲಿವರಿ ಸೇವೆಗೆ ಗರಿಷ್ಠ ಬೇಡಿಕೆ ಇರುವುದರಿಂದ ಸಿಬ್ಬಂದಿ ಅದೇ ದಿನ ಮುಷ್ಕರಕ್ಕೆ ಕರೆ ನೀಡುವ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಹೀಗಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ಆಹಾರ, ದಿನಸಿ ಸೇರಿದಂತೆ ಡೆಲಿವರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಕಳಪೆ ವೇತನ, ಅಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಕೆಲಸದ ಭದ್ರತೆಯ ಕೊರತೆಯಿಂದಾಗಿ ಅವರು ಡಿಸೆಂಬರ್ 31 ರಂದು ಮುಷ್ಕರ ನಡೆಸಲು ಯೋಜಿಸಿದ್ದಾರೆ.
ಮಾಡುವ ಎಲ್ಲ ಕೆಲಸಗಳಿಗೂ ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಮೂಲಭೂತ ಸಾಮಾಜಿಕ ಭದ್ರತೆಯನ್ನು ಕೋರಿದ್ದಾರೆ. ವಾಣಿಜ್ಯ ಮತ್ತು ಆಹಾರ ವಿತರಣಾ ಕಾರ್ಯಪಡೆಯು ಡಿಸೆಂಬರ್ 31ರಂದು ಅಖಿಲ ಭಾರತ ಮಟ್ಟದಲ್ಲಿ ಮುಷ್ಕರ ನಡೆಸಲಿದೆ. ಸುಮಾರು 1.5 ಲಕ್ಷ ಮಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದು, ಡೆಲಿವರಿ ಸೇವೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಕಾರ್ಯಾಚರಣೆಯ ಅಡಚಣೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications