ಅಪ್ಪು ಪುಣ್ಯತಿಥಿ: ಕನ್ನಡದಲ್ಲಿ ಟ್ವೀಟ್ ಮಾಡಿ ಸ್ಮರಿಸಿದ ಅರವಿಂದ್ ಕೇಜ್ರಿವಾಲ್
ಬೆಂಗಳೂರು, ಅಕ್ಟೋಬರ್29: ಇಂದು (ಅಕ್ಟೋಬರ್29) ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ಕುಮಾರ್ರವರ ಮೊದಲ ವರ್ಷದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ.
— Arvind Kejriwal (@ArvindKejriwal) October 29, 2022
I profoundly remember the Icon - Dr Puneeth Rajkumar on his death anniversary.
His movies, songs, kindness & social works make us feel he never left us. He will always be a power star of #Karunadu #AppuLivesOn #DrPunithRajkumar
"ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ" ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ ಅರವಿಂದ್ ಕೇಜ್ರಿವಾಲ್, "ನಾನು ಡಾ. ಪುನೀತ್ ರಾಜ್ಕುಮಾರ್ರವರನ್ನು ಪುಣ್ಯತಿಥಿಯಂದು ವಿಶೇಷವಾಗಿ ಸ್ಮರಿಸುತ್ತಿದ್ದೇನೆ. ಅವರ ಚಲನಚಿತ್ರಗಳು, ಹಾಡುಗಳು, ಸಹೃದಯಿ ವ್ಯಕ್ತಿತ್ವ, ಸಾಮಾಜಿಕ ಕಾರ್ಯಗಳು ಅವರು ನಮ್ಮನ್ನು ಎಂದೂ ತೊರೆಯುವುದಿಲ್ಲ ಎಂದೆನಿಸುವಂತೆ ಮಾಡಿವೆ. ಅವರು ಯಾವಾಗಲೂ ಕರುನಾಡಿನ ಪವರ್ ಸ್ಟಾರ್ ಆಗಿಯೇ ಇರುತ್ತಾರೆ" ಎಂದು ಹೇಳಿದ್ದಾರೆ.
ನಮ್ಮ ಪ್ರೀತಿಯ ಅಪ್ಪು ನಮ್ಮನ್ನು ಬಿಟ್ಟು ಹೋಗಿ ಒಂದು ವರ್ಷ ಆಗಿದೆ.
— Prithvi Reddy (@aapkaprithvi) October 29, 2022
ಅಪ್ಪು ನಮ್ಮಎಲ್ಲರ ಹೃದಯದಲ್ಲಿ ಸದಾ ಕಾಲ ಇರ್ತಾರೆ 🙏
It has been a year since our beloved Appu left us. Appu will always be in our hearts 🙏#MissYouAppu pic.twitter.com/PdDjqQha46
ಕರ್ನಾಟಕದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಕೂಡ ಪುನೀತ್ ರಾಜ್ಕುಮಾರ್ರವರ ಮೊದಲ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಅಪ್ಪು ಅವರನ್ನು ಸ್ಮರಿಸಿಕೊಂಡು, ''ನಮ್ಮ ಪ್ರೀತಿಯ ಅಪ್ಪು ನಮ್ಮನ್ನು ಬಿಟ್ಟು ಹೋಗಿ ಒಂದು ವರ್ಷ ಆಗಿದೆ. ಅಪ್ಪು ನಮ್ಮ ಎಲ್ಲರ ಹೃದಯದಲ್ಲಿ ಸದಾ ಕಾಲ ಇರುತ್ತಾರೆ'' ಎಂದು ಟ್ವೀಟ್ ಮಾಡಿದ್ದಾರೆ.
ಗುಜರಾತ್: 'ನಿಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ' ಅಭಿಯಾನ ಆರಂಭಿಸಿದ ಕೇಜ್ರಿವಾಲ್" /> ಗುಜರಾತ್: 'ನಿಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ' ಅಭಿಯಾನ ಆರಂಭಿಸಿದ ಕೇಜ್ರಿವಾಲ್
ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಮಾತನಾಡಿರುವ ಕರ್ನಾಟಕದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, "ಸರಳವಾಗಿ ಬದುಕುತ್ತಾ, ಚಿಕ್ಕವಯಸ್ಸಿನಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿ, ಪುನೀತ್ ರಾಜ್ಕುಮಾರ್ ಕೇವಲ ಯುವಕರಿಗೆ ಮಾತ್ರವಲ್ಲದೇ, ಕರ್ನಾಟದ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅಪ್ಪು ಅವರ ಅಭಿಮಾನಿಗಳು ದೇಶದ ಎಲ್ಲಾ ಕಡೆಗಳಲ್ಲಿ ಇದ್ದಾರೆ. ಹೀಗಾಗಿ ಅವರು ಕೇವಲ ಸಿನಿಮಾ ನಟ ಮಾತ್ರ ಅಲ್ಲದೇ, ಅದ್ಭುತ ಹಾಗೂ ಮಾದರಿ ವ್ಯಕ್ತಿ. ಅಪ್ಪು ಇಂದು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದೇ ಇದ್ದರೂ, ಅಪ್ಪು ಸದಾ ಕಾಲ ನಮ್ಮ ಹೃದಯದಲ್ಲಿ ಇರುತ್ತಾರೆ" ಎಂದಿದ್ದಾರೆ.