ಹೈದರಾಬಾದ್ನಲ್ಲಿ ಅಶ್ವಿನ್ ರಾವ್ ಸ್ನೇಹಿತನ ಬಂಧನ
ಬೆಂಗಳೂರು, ಆಗಸ್ಟ್ 21 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್ ಸ್ನೇಹಿತರೊಬ್ಬರನ್ನು ಎಸ್ಐಟಿ ಬಂಧಿಸಿದೆ. ಇದರಿಂದಾಗಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಿದಂತಾಗಿದೆ.
ವಿಶೇಷ
ತನಿಖಾ
ತಂಡದ
ಅಧಿಕಾರಿಗಳು
ಗುರುವಾರ
ರಾತ್ರಿ
ಹೈದರಾಬಾದ್ನಲ್ಲಿ
ಲೋಕಾಯುಕ್ತ
ನ್ಯಾಯಮೂರ್ತಿ
ಭಾಸ್ಕರರಾವ್
ಪುತ್ರ
ಅಶ್ವಿನ್
ರಾವ್
ಸ್ನೇಹಿತ
ನರಸಿಂಹರಾವ್
ಅವರನ್ನು
ಬಂಧಿಸಿದ್ದು,
ಬೆಂಗಳೂರಿಗೆ
ಕರೆ
ತರುತ್ತಿದ್ದಾರೆ.
[ನಿವೃತ್ತ
ನ್ಯಾ.ಸಂತೋಷ್
ಹೆಗಡೆ
ಸಂದರ್ಶನ]
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಮೂರ್ತಿ ಅವರು ನೀಡಿರುವ ದೂರಿನ ಅನ್ವಯ ನರಸಿಂಹರಾವ್ ಅವರನ್ನು ಬಂಧಿಸಲಾಗಿದೆ. ಕೃಷ್ಣಮೂರ್ತಿ ಅವರ ಬಳಿ 1 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ನರಸಿಂಹರಾವ್ ಆರೋಪಿಯಾಗಿದ್ದಾರೆ. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, 4 ಪ್ರಮುಖ ಬೆಳವಣಿಗೆಗಳು]
ಅಶ್ವಿನ್ ರಾವ್ ಮತ್ತು ನರಸಿಂಹರಾವ್ ಸ್ನೇಹಿತರಾಗಿದ್ದು, ಹಲವಾರು ಬಾರಿ ಇವರು ಬೆಂಗಳೂರಿಗೂ ಬಂದು ಹೋಗಿದ್ದರು. ನರಸಿಂಹರಾವ್ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಇದುವರೆಗೂ ಬಂಧಿತರು : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಜನರನ್ನು ಬಂಧಿಸಲಾಗಿದೆ. ಅಶ್ವಿನ್ ರಾವ್, ಎಚ್.ಎಸ್.ರಾಜಶೇಖರ್, ಸೈಯದ್ ರಿಯಾಜ್, ಅಶೋಕ್ ಕುಮಾರ್, ಶ್ರೀನಿವಾಸ ಗೌಡ, ಶಂಕರೇಗೌಡ, ವಿ. ಭಾಸ್ಕರ್, ಮೊಹಮ್ಮದ್ ಸಾದಿಕ್, ಎನ್. ನರಸಿಂಹಮೂರ್ತಿ ಮತ್ತು ನರಸಿಂಹರಾವ್ ಅವರನ್ನು ಬಂಧಿಸಲಾಗಿದೆ.