ಕಾಂಗ್ರೆಸ್ ಗೆಲುವನ್ನು ದೇಶ ಎದುರು ನೋಡುತ್ತಿದೆ : ಪರಮೇಶ್ವರ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹೊಸ ಮುಖ್ಯಮಂತ್ರಿಯ ಆಯ್ಕೆ ಹೇಗೆ? ಚುನಾವಣೆ ಬಗ್ಗೆ ಕಾಂಗ್ರೆಸ್ಸಿಗೆ ಆತ್ಮವಿಶ್ವಾಸ ಇರುವುದೇಕೆ? ಕಳೆದ ಬಾರಿ ಸೋತ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಏನೆಲ್ಲ ತಂತ್ರಗಾರಿಕೆ ಮಾಡಲಾಗಲಿದೆ ಎಂಬುದರ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ ಪರಮೇಶ್ವರ ಅವರು ಒನ್ಇಂಡಿಯಾ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
2018ರ
ಕರ್ನಾಟಕ
ವಿಧಾನಸಭೆ
ಚುನಾವಣೆಯಲ್ಲಿ
ಕರ್ನಾಟಕದಲ್ಲಿನ
ಕಾಂಗ್ರೆಸ್
ಗೆಲುವು
ದೇಶದಲ್ಲಿ
ಕಾಂಗ್ರೆಸ್ಸಿಗೆ
ದಿಕ್ಸೂಚಿಯಾಗಲಿದೆ
ಎಂದಿದ್ದಾರೆ.
*
ಚುನಾವಣೆ
ಹೊಸ್ತಿಲಲ್ಲಿ
ಕಾಂಗ್ರೆಸ್ಸಿನಿಂದ
ಈ
ಬಾರಿ
ಮುಖ್ಯಮಂತ್ರಿ
ಅಭ್ಯರ್ಥಿ
ಯಾರು
ಎಂಬುದನ್ನು
ನಿರೀಕ್ಷಿಸಬಹುದೇ?
ಪಕ್ಷ
ಈ
ಬಗ್ಗೆ
ಏನಾದರೂ
ಘೋಷಿಸುವ
ಸಾಧ್ಯತೆಯಿದೆಯೆ?
ಪರಮೇಶ್ವರ
ಉತ್ತರ:
ಕಾಂಗ್ರೆಸ್ಸಿನಲ್ಲಿ
ಯಾವಾಗಲೂ
ಎಲೆಕ್ಷನ್
ಮೂಲಕವೇ
ಮುಂದಿನ
ಸಿಎಂ
ಆಯ್ಕೆ
ಮಾಡಲಾಗುತ್ತದೆ.
ಸೆಲೆಕ್ಷನ್
ಮೂಲಕ
ಅಲ್ಲ.
ಸಿಎಂ
ಸಿದ್ದರಾಮಯ್ಯ
ಅವರನ್ನು
ಕೂಡಾ
ಇದೇ
ರೀತಿ
ಆಯ್ಕೆ
ಮಾಡಲಾಯಿತು.
ಇದೇ
ಪ್ರಕ್ರಿಯೆ
ಈಗಲೂ
ಮುಂದುವರೆಯಲಿದೆ.
ಎಲ್ಲರ
ಒಮ್ಮತದ
ಆಯ್ಕೆಯಂತೆ
ಸಿದ್ದರಾಮಯ್ಯ
ಅವರೇ
ಮುಂದಿನ
ಸಿಎಂ
ಆಗಬೇಕು
ಎಂದಾದರೆ
ಅದರಂತೆ
ಆಗುತ್ತದೆ.
ಇನ್ನಷ್ಟು
ಮುಂದೆ...
ಕಾಂಗ್ರೆಸ್ ಗೆಲುವಿನ ಬಗ್ಗೆ ವಿಶ್ವಾಸ ಹೇಗೆ?
ನಾವು ಅತ್ಯಂತ ಆತ್ಮವಿಶ್ವಾಸದಿಂದ ಇದ್ದೇವೆ. ನಾವು ನೀಡಿದ್ದ ಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ. ಘೋಷಣೆಗಳು, ಆಶ್ವಾಸನೆಗಳನ್ನಷ್ಟೇ ಅಲ್ಲ ಮಾಡಿಲ್ಲ, ಎಲ್ಲವನ್ನು ಅನುಷ್ಠಾನಗೊಳಿಸಿದ್ದೇವೆ. ಸರ್ಕಾರ ಸಕ್ರಿಯವಾಗಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಅನ್ನ, ಹಾಲು, ಸಾಲ ಮನ್ನಾ, ಕೃಷಿ ಯೋಜನೆಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಈ ಬಾರಿ ಚುನಾವಣೆಗೆ ಹೇಗೆ ತಯಾರಿ ನಡೆಸಿದ್ದೀರಿ?
ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಯಾಗಿದ್ದು, ಬೂತ್ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಪ್ರತಿ ಸದಸ್ಯನಿಗೂ 15-20 ಮನೆಗಳ ಹೊಣೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಸಂಘಟನೆ ಮಾಡುವುದು ಇವರ ಕೆಲಸ. ನನ್ನ ಕ್ಷೇತ್ರ ನನ್ನ ಜವಾಬ್ದಾರಿ ಎಂಬ ಯೋಜನೆ ಯಶಸ್ವಿಯಾಗಿದೆ. ಕಾಂಗ್ರೆಸ್ ತನ್ನ ಸಿದ್ದಸೂತ್ರಗಳನ್ನು ಬದಿಗೊತ್ತಿ ಜನರ ಬಳಿಗೆ ತೆರಳಿ ಕಾರ್ಯಾಚರಣೆಗೆ ಇಳಿದಿದೆ.
ಕರ್ನಾಟಕದಲ್ಲಿನ ಬದಲಾವಣೆ ರಾಷ್ಟ್ರಮಟ್ಟದಲ್ಲಿ ಸದ್ದಾಗಬಹುದೇ?
ಸರ್ವರನ್ನು ಸಮಾನದೃಷ್ಟಿಯಿಂದ ಕಾಣುವ ಸರ್ಕಾರದ ಅಗತ್ಯವಿದೆ. ಕಾಂಗ್ರೆಸ್ ಪಕ್ಷದಿಂದ ಜನತೆಯ ಆಶೋತ್ತರ ಈಡೇರಿಸುವ ಸಾಧ್ಯತೆಯಿದೆ. ಕರ್ನಾಟಕದ ಸರ್ಕಾರ ದೇಶಕ್ಕೆ ಮಾದರಿಯಾಗಿದ್ದು, ಮುಂದಿನ ಚುನಾವಣಾ ಫಲಿತಾಂಶ, ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಕರ್ನಾಟಕದ ಗೆಲುವನ್ನು ಇಡೀ ದೇಶವೇ ಎದುರು ನೋಡುತ್ತಿದೆ.
ಸೋತ ಕ್ಷೇತ್ರಗಳಲ್ಲಿ ಏನು ತಂತ್ರಗಾರಿಕೆ
ನಾವು 16 ಸೀಟುಗಳನ್ನು 5,000 ಮತಗಳ ಅಂತರದಲ್ಲಿ ಕಳೆದುಕೊಂಡೆವು. 10, 000 ಮತಗಳ ಅಂತರದಲ್ಲಿ 26 ಸೀಟುಗಳನ್ನು ಕಳೆದುಕೊಂಡೆವು. ಕಳೆದ ಬಾರಿ ಗೆಲ್ಲಬಹುದಾದ ಆದರೆ, ಸೋಲು ಅನುಭವಿಸಿದ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಥಳೀಯ ಮುಖಂಡರೊಡನೆ ಕಾರ್ಯಕರ್ತರು ನಿರಂತರವಾಗಿ ಸಂಪರ್ಕದಲ್ಲಿದ್ದು, ಕ್ಷೇತ್ರದ ಜನತೆಗೆ ಕಾಂಗ್ರೆಸ್ ಹೇಗೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ.