ರಾಜ್ಯಕ್ಕೆ ಆಗಸ್ಟ್ನಲ್ಲಿ ಕೊರೊನಾ 3ನೇ ಅಲೆ ಆತಂಕ:ತುರ್ತು ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ!
ಬೆಂಗಳೂರು, ಜು. 31: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೆ ಹಲವು ಸವಾಲುಗಳು ಎದುರಾಗಿವೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿತ್ತು. ಅದಕ್ಕೆ ಪರಿಹಾರ ಕಾರ್ಯಗಳನ್ನು ಮಾಡಬೇಕಾಗಿದೆ. ಜೊತೆಗೆ ಸಂಪುಟ ರಚನೆಯ ಕಸರತ್ತು ನಡೆದಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ದೊಡ್ಡ ಸವಾಲು ದಿಢೀರ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗಿದೆ.
ದಿನ ಕಳೆದಂತೆ ಕಡಿಮೆಯಾಗುತ್ತಿದ್ದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೆಲವು ದಿನಗಳಿಂದ ಹೆಚ್ಚಾಗುತ್ತಿದೆ. ಇದೆ ಸಂದರ್ಭದಲ್ಲಿ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಲಹೆಯೊಂದನ್ನು ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗದಂತೆ ಮೊದಲು ನೋಡಿಕೊಳ್ಳಿ ಎಂದು ಕಟ್ಟಿ ನಿಟ್ಟಿನ ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೊಟ್ಟಿದ್ದಾರೆ.
ಜೊತೆಗೆ ಗಡಿ ರಾಜ್ಯಗಳಲ್ಲಿ ಅದರಲ್ಲೂ, ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರ ನೇರ ಪರಿಣಾಮ ರಾಜ್ಯದ ಮೇಲಾಗುವ ಎಲ್ಲ ಸಾಧ್ಯತೆಗಳನ್ನು ತಜ್ಞರು ಸರ್ಕಾರಕ್ಕೆ ಕೊಟ್ಟಿದ್ದಾರೆ. ಹೀಗಾಗಿ ದೆಹಲಿ ಪ್ರವಾಸದಿಂದ ಇಂದು ಸಂಜೆ ಹಿಂದಿರುಗುತ್ತಿದ್ದಂತೆಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ಕರೆದಿದ್ದಾರೆ.
ಅಷ್ಟಕ್ಕೂ ಯಾವ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗುತ್ತಿದ್ದಾರೆ? ಕೇಂದ್ರ ಸರ್ಕಾರ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಟ್ಟಿರುವ ಸೂಚನೆ ಏನು? ಆಗಸ್ಟ್ ಮೊದಲ ವಾರದಲ್ಲಿ ಕೊರೊನಾ ವೈರಸ್ 3ನೇ ಅಲೆ ಕರ್ನಾಟಕಕ್ಕೆ ಅಪ್ಪಳಿಸಿದೆಯಾ?
ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಹತ್ವದ ಸೂಚನೆ ಸಿಕ್ಕಿತ್ತು. ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸುವಂತೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಹಿಡಿತಕ್ಕೆ ಸಿಗದಿರುವ ಕೇರಳಕ್ಕೆ ಕೇಂದ್ರ ತಂಡವನ್ನು ಕಳುಹಿಸಲಾಗಿತ್ತು. ಕೇರಳಕ್ಕೆ ತೆರಳಿದ್ದ ತಜ್ಞರ ತಂಡ ಕೇಂದ್ರಕ್ಕೆ ವರದಿ ಕೊಟ್ಟಿದೆ. ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪ್ರಧಾನಿ ಮೋದಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಹತ್ವದ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ.
ರಾಜ್ಯದಲ್ಲಿ
ಕೊರೊನಾ
ಮೂರನೆ
ಅಲೆ
ಅಪ್ಪಳಿಸುವ
ಸಾಧ್ಯತೆ
ಈಗಲೇ
ಕಂಡು
ಬಂದಿದೆ.
ಹೀಗಾಗಿ
ಪ್ರಧಾನಿ
ಮೋದಿ
ಅವರ
ಸೂಚನೆಯಂತೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಮಹತ್ವದ
ವಿಡಿಯೋ
ಕಾನ್ಫರೆನ್ಸ್
ಸಂವಾದ
ನಡೆಸಲಿದ್ದಾರೆ.
ಇಂದು
ಸಂಜೆ
5.30ಕ್ಕೆ
ಗೃಹ
ಕಚೇರಿ
ಕೃಷ್ಣಾದಿಂದ
ಕೊರೊನಾ
ಹೆಚ್ಚುತ್ತಿರುವ
8
ಜಿಲ್ಲೆಗಳ
ಪ್ರಮುಖ
ಅಧಿಕಾರಿಗಳೊಂದಿಗೆ
ಸಂವಾದ
ನಡೆಸಲಿದ್ದಾರೆ.
ದೆಹಲಿಯಿಂದ
ಸಂಜೆ
5
ಗಂಟೆಗೆ
ಸಿಎಂ
ಬಸವರಾಜ
ಬೊಮ್ಮಾಯ
ಬೆಂಗಳೂರಿಗೆ
ಆಗಲಿಸಲಿದ್ದಾರೆ.
ಆ
ಬಳಿಕ
ಕೊರೊನಾ
ವೈರಸ್
ನಿರ್ವಹಣಾ
ಸಭೆಯಲ್ಲಿ
ಭಾಗವಹಿಸಲಿದ್ದಾರೆ.
ಯಾವ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿದೆ ಕೊರೊನಾ?
ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ. ಅದರಲ್ಲಿಯೂ ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಹಿಡಿತಕ್ಕೆ ಸಿಗುತ್ತಿಲ್ಲ. ಈ ಹಿಂದೆ ಮೊದಲ ಹಾಗೂ ಎರಡನೇ ಅಲೆ ರಾಜ್ಯಕ್ಕೆ ಅಪ್ಪಳಿಸುವ ಮೊದಲು ಕೇರಳಕ್ಕೆ ಅಪ್ಪಳಿಸಿತ್ತು ಎಂಬ ಬಗ್ಗೆ ಮಾಹಿತಿಯಿದೆ. ಹೀಗಾಗಿ ಸಂಜೆ ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೆ ಸೋಂಕು ಹೆಚ್ಚಾಗುತ್ತಿರುವ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಾಂಚಾಯಿತಿ ಸಿಇಒಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ ಎಂಬ ಮಾಹಿತಿಯಿದೆ. ಹೀಗಾಗಿ ಈ ಜಿಲ್ಲೆಗಳ ಅಧಿಕಾರಗಳೊಂದಿಗೆ ಗೃಹ ಕಚೇರಿ ಕೃಷ್ಣಾದಿಂದ ಸಿಎಂ ಬಸವರಾಜ ಬೊಮ್ಮಾಯಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಅಷ್ಟಕ್ಕೂ ಈ 8 ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಅವರು ತುರ್ತು ಸಭೆ ನಡೆಸುತ್ತಿರುವುದಕ್ಕೆ ಬಲವಾದ ಕಾರಣವೂ ಇದೆ. ಈ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗುತ್ತಿದೆ. ಜೊತೆಗೆ ರಾಜ್ಯಕ್ಕೆ ಕೊರೊನಾ ಮೂರನೆ ಅಲೆ ಅಪ್ಪಳಿಸುವ ಎಚ್ಚರಿಕೆ ಗಂಟೆ ಈ ಜಿಲ್ಲೆಗಳಲ್ಲಿ ಕಂಡು ಬಂದಿದೆ.
ದಿಢೀರ್ ಹೆಚ್ಚಾಗುತ್ತಿದೆ ಕೊರೊನಾ ವೈರಸ್ ಸೋಂಕು!
ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ. ರಾಜ್ಯ ಸರ್ಕಾರ ನಿನ್ನೆ (ಜು.30) ಮತ್ತು ಮೊನ್ನೆ ಕೊಟ್ಟಿದ್ದ ಕೊರೊನಾ ವೈರಸ್ ಅಂಕಿ ಅಂಶದಲ್ಲಿ ಈ ವಿಚಾರ ಬಹಿರಂಗವಾಗಿದೆ. ಕೇವಲ ಎರಡು ದಿನಗಳಲ್ಲಿ ಕೊರೊನಾ ವೈರಸ್ ಶೇಕಡಾ 34ರಷ್ಟು ಹೆಚ್ಚಾಗಿದ್ದು, ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.30 ಪತ್ತೆಯಾಗಿದೆ. ಜೊತೆಗೆ ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.79ರಷ್ಟಿದೆ.
ರಾಜ್ಯದಲ್ಲಿ ಒಂದು ದಿನದಲ್ಲಿ 1,890 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,631 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 34 ಜನರು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಇದುವರೆಗೆ ಒಟ್ಟು 36,525 ಜನರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶ ಹೇಳುತ್ತಿದೆ.
ಬೆಂಗಳೂರಿನಲ್ಲಿ ನಿನ್ನೆ 426 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,26,889ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದು ದಿನದಲ್ಲಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ನಿಂದಾಗಿ 9 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ಸಾವಿನ ಸಂಖ್ಯೆ 15,861ಕ್ಕೆ ಏರಿಕೆಯಾಗಿದೆ. ಜೊತೆಗೆ ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ತಗ್ಗಿಸಲಾಗಿದೆ ಎಂದು ವರದಿಯಾಗಿತ್ತು. ಕಳೆದ ಒಂದು ದಿನದಲ್ಲಿ ಗಂಟೆಗಳಲ್ಲಿ 29,143 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 1,16,054 ಮಂದಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತು. ಒಟ್ಟಾರೆ 1,45,197 ಮಂದಿಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದೆ.
ಆಗಸ್ಟ್ ತಿಂಗಳಲ್ಲಿ ಅಪ್ಪಳಿಸದೆ 3ನೇ ಅಲೆ?
ನೆರೆಯ ಕೇರಳ ರಾಜ್ಯದಲ್ಲಿ ನಿನ್ನೆ ಒಟ್ಟು 20,772 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಜೊತೆಗೆ ಕಳೆದ ಒಂದು ವಾರದಲ್ಲಿ ಪ್ರತಿದಿನ ದಿನಗಳಿಂದ 20 ಸಾವಿರ ಸೋಂಕಿತರು ಕೇರಳದಲ್ಲಿ ಪತ್ತೆಯಾಗುತ್ತಿದ್ದಾರೆ. ಆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.13.61ರಷ್ಟಿದೆ.
ಜೊತೆಗೆ
ದೇಶಶದಲ್ಲಿಯೂ
ಕೊರೊನಾ
ವೈರಸ್
ಸೋಂಕಿತರ
ಸಂಖ್ಯೆ
ಹೆಚ್ಚಾಗುತ್ತಿದೆ.
ನಿನ್ನೆ
ಒಂದೇ
ದಿನ
ದೇಶದದಲ್ಲಿ
ಒಟ್ಟು
44
ಸಾವಿರ
ಕೊರೊನಾ
ವೈರಸ್
ಸೋಂಕಿತರು
ಪತ್ತೆಯಾಗಿದ್ದಾರೆ.
ಅದರಲ್ಲಿ
ಕೇರಳದಲ್ಲಿಯೇ
ಕೊರೊನಾ
ವೈರಸ್
ಸೋಂಕಿತರ
ಸಂಖ್ಯೆ
21
ಸಾವಿರವಿದೆ.
ದೇಶದಲ್ಲಿ
ಕೊರೊನಾ
ವೈರಸ್
2ನೇ
ಅಲೆಯಿದ್ದಾಗ
ಕೋವಿಡ್
ರಿಪ್ರೊಡಕ್ಷನ್
ದರ
ಶೇಕಡಾ
1.37ರಷ್ಟಿತ್ತು.
ಆಮೇಲೆ
2ನೇ
ಅಲೆ
ಕಡಿಮೆಯಾದಂತೆ
ಅದು
0.78ಕ್ಕೆ
ಇಳಿಕೆಯಾಗಿತ್ತು.
ಇದೀಗ
ಮತ್ತೆ
ರಿಪ್ರೊಡಕ್ಷನ್
ಶೇಕಡಾ
0.95ಕ್ಕೆ
ಏರಿಕೆಯಾಗಿದೆ.
ಇದರ
ಅರ್ಥ
ಏನೆಂದರೆ
95
ಸೋಂಕಿತರಿಂದ
ಮತ್ತೆ
100ಜನಕ್ಕೆ
ಕೊರೊನಾ
ವೈರಸ್
ಸೋಂಕು
ತಗುಲುತ್ತಿದೆ.
ದೇಶದಲ್ಲಿ
ಮರುಸೋಂಕಿನ
ದರ
ಶೇಕಡಾ
1ಕ್ಕೆ
ಏರಿಕೆಯಾದಲ್ಲಿ
3ನೇ
ಅಲೆ
ಅಪ್ಪಳಿಸಿದಂತೆ
ಆಗುತ್ತದೆ
ಎಂದು
ತಜ್ಞರು
ಎಚ್ಚರಿಕೆ
ನೀಡಿದ್ದಾರೆ.
ಹೀಗಾಗಿ
ಆಗಸ್ಟ್
ಮೊದಲ
ವಾರದಲ್ಲಿಯೇ
ಕೊರೊನಾ
ವೈರಸ್
ಮೂರನೆ
ಅಲೆ
ಅಪ್ಪಳಿಸುವ
ಸಾಧ್ಯತೆಯನ್ನು
ಯಳ್ಳಿ
ಹಾಕುವಂತಿಲ್ಲ
ಎಂಬ
ವರದಿಗಳಿವೆ.
ಕೇರಳ
ರಾಜ್ಯದಲ್ಲಿ
ಈಗ
ಮರು
ಸೋಂಕಿನ
ಪ್ರಮಾಣ
ಶೇಕಡಾ
1.11ರಷ್ಟಿದೆ
ಎಂಬ
ವರದಿಗಳಿವೆ.
ಹೀಗಾಗಿ
ಕೇರಳಕ್ಕೆ
ಹೊಂದಿಕೊಂಡಿರುವ
ಜಿಲ್ಲೆಗಳು
ಹಾಗೂ
ಮಹಾನಗರ
ಬೆಂಗಳೂರಿನಲ್ಲಿಯೂ
ಕೊರೊನಾ
ವೈರಸ್
ಸೋಂಕು
ಹೆಚ್ಚಾಗುತ್ತಿದೆ.
ಇದೇ
ಹಿನ್ನೆಲೆಯಲ್ಲಿ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಅವರು
ಕೇಂದ್ರದ
ಸೂಚನೆಯಂತೆ
ಇಂದು
ತುರ್ತು
ಸಭೆ
ಕರೆದಿದ್ದಾರೆ.
ಆಗಸ್ಟ್
ಮೊದಲ
ವಾರದಲ್ಲಿಯೇ
ರಾಜ್ಯಕ್ಕೆ
ಮೂರನೆ
ಅಲೆ
ಅಪ್ಪಳಿಸಲಿದೆಯಾ
ಎಂಬ
ಆತಂಕ
ಶುರುವಾಗಿವೆ!