ಜೈಪುರದಲ್ಲಿ ಪ್ರವಾಹದಂತಹ ಮಳೆ: ಹೊರಬಂತು 2400 ವರ್ಷಗಳ ಹಳೆಯ ಮಮ್ಮಿ
ಜೈಪುರ, ಆಗಸ್ಟ್ 19: ಜೈಪುರದಲ್ಲಿ ಸುರಿದ ಭಾರಿ ಮಳೆಗೆ 2400 ವರ್ಷಗಳ ಹಿಂದಿನ ಈಜಿಪ್ಟ್ ಮಮ್ಮಿಯೊಂದು ಹೊರಬಂದಿದೆ.
2400 ವರ್ಷಗಳಷ್ಟು ಹಳೆಯದಾಗಿರುವ ಈಜಿಪ್ಟ್ನ ಮಮ್ಮಿಯೊಂದು ಮಳೆಯಿಂದ ರಕ್ಷಣೆ ಕೊಡುವ ಸಲುವಾಗಿ ಹೊರಕ್ಕೆ ತೆಗೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಈಜಿಪ್ಟ್ ಪಾನೊಪೊಲೀಸ್ ನಗರದ ಅಖ್ಮಿನ್ ಪ್ರಾಂತ್ಯದ ಟುಟು ಎಂಬ ಮಹಿಳೆಯ ಮಮ್ಮಿ ಇದಾಗಿದ್ದು, 130 ವರ್ಷಗಳ ಹಿಂದೆ ಅಲ್ಲಿಂದ ರಾಜಸ್ಥಾನಕ್ಕೆ ತರಲಾಗಿತ್ತು.
ಆಗಸ್ಟ್ 14 ರಂದು ಸುರಿದ ಭಾರಿ ಮಳೆಗೆ ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂ ಒಳಗೆ ನೀರು ನುಗ್ಗಿದೆ. ಪ್ರವಾಹದಿಂದ ರಕ್ಷಿಸಲು ಈ ಮಮ್ಮಿಯನ್ನು 130 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಕ್ಸ್ನಿಂದ ಹೊರ ತೆಗೆಯಲಾಗಿದೆ.

130 ವರ್ಷಗಳ ಹಿಂದೆ ಈ ಮಮ್ಮಿಯನ್ನು ಬಾಕ್ಸ್ನಿಂದ ಹೊರಕ್ಕೆ ತೆರೆಯಲಾಗಿತ್ತು. ಇದೀಗ ಮತ್ತೆ ತೆಗೆದು ರಕ್ಷಣೆ ಮಾಡಲಾಗಿದೆ. ಇದನ್ನು ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ.
ಮ್ಯೂಸಿಯಂ ಒಳಗೆ ಐದು ಅಡಿಗಳ ಮೇಲುಭಾಗದವರೆಗೆ ನೀರು ಬಂದಿದೆ. ಇದರಿಂದ ಗ್ಲಾಸ್ ಬಾಕ್ಸ್ ಒಡೆದು ಅದರಿಂದ ಮಮ್ಮಿಯನ್ನು ಹೊರ ತೆಗೆದು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಸೆಂಟ್ರಲ್ ಮ್ಯೂಸಿಯಂನ ಮೇಲ್ವಿಚಾರಕ ಡಾ.ರಾಕೇಶ್ ಚೋಲಾಕ್ ಹೇಳಿದ್ದಾರೆ.
2016ರಿಂದ ಇದನ್ನು ಪ್ರದರ್ಶನಕ್ಕೆ ಇಡಲಾಗಿತ್ತು, ಅದನ್ನು ನಾಜೂಕಿನಲ್ಲಿ ಇಡಬೇಕು, ಇಲ್ಲವಾದಲ್ಲಿ ಅದು ಹಾಳಾಗುವ ಸಾಧ್ಯತೆ ಇದೆ. ಈ ಮಮ್ಮಿಯನ್ನು ನೋಡಲು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ಬರುತ್ತಾರೆ.
ಮಮ್ಮಿ ಅಷ್ಟೇ ಅಲ್ಲದೆ 17 ಸಾವಿರ ವಸ್ತುಗಳನ್ನು ರಕ್ಷಿಸಲಾಗಿದೆ. ಪ್ಯಾರಾನಿಕ್ ಮೂರ್ತಿಗಳು, ಲಾಕೆಟ್ಗಳು ಸೇರಿ 200 ವಸ್ತುಗಳನ್ನು ರಕ್ಷಿಸಲಾಗಿದೆ. ಮಮ್ಮಿಯನ್ನು ನೀರಿನಿಂದ ಆರುವಂತೆ ಮಾಡಲು ಸಾಕಷ್ಟು ಫ್ಯಾನ್ಗಳ ವ್ಯವಸ್ಥೆ ಮಾಡಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications