ಮದುವೆ ಮುಗಿಯುತ್ತಿದ್ದಂತೆ ಹೆಲಿಕಾಪ್ಟರ್ ಏರಿದ ದಂಪತಿ: ಕಾರಣ ಗೊತ್ತಾ?
ಜೈಪುರ್, ನವೆಂಬರ್.22: ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಅನ್ನೋದು ಪ್ರತಿ ಹೆತ್ತವರ ಆಸೆ, ಕನಸು. ಇಲ್ಲದವರು ಚಪ್ಪರದಲ್ಲಿ ಮದುವೆ ಮಾಡಿದರೆ, ಉಳ್ಳವರು ಅಂಬರದಲ್ಲೇ ಮದುವೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ಆದರೆ, ರಾಜಸ್ಥಾನದಲ್ಲಿ ನಡೆದ ಮದುವೆ ಎಲ್ಲಕ್ಕಿಂತ ಭಿನ್ನ-ವಿಭಿನ್ನವಾಗಿದೆ. ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ ತಂದೆ, ಮುದ್ದು ಮಗಳಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ತಂದೆ ನೀಡಿದ ಕೊಡುಗೆ ಮಗಳಷ್ಟೇ ಅಲ್ಲ ಅಳಿಯನ ಮನಸನ್ನೂ ಗೆದ್ದಿದೆ.
ಹೌದು, ರಾಜಸ್ಥಾನದ ಜುಂಜುನ್ ಜಿಲ್ಲೆ ಚಿವಾಡ್ ಬಳಿ ಅಜಿತ್ ಪುರ್ ನಲ್ಲಿ ರೀನಾ ಹಾಗೂ ಸಂದೀಪ್ ಲಂಬಾ ಎಂಬ ದಂಪತಿಯ ಅದ್ಧೂರಿ ವಿವಾಹ ನಡೆಯಿತು. ಮದುವೆ ನಂತರ ತಂದೆ ಇಂಥದೊಂದು ಗಿಫ್ಟ್ ಕೊಡುತ್ತಾರೆ ಎಂದು ಸ್ವತಃ ಮಗಳಿಗೂ ಗೊತ್ತಿರಲಿಲ್ಲ.

ಮಗಳಿಗೆ ಸರ್ ಪ್ರೈಸ್ ಗಿಫ್ಟ್ ಕೊಟ್ಟ ಅಪ್ಪ!
ರೀನಾ ಹಾಗೂ ಸಂದೀಪ್ ಲಂಬಾ ದಂಪತಿಯ ಅದ್ಧೂರಿ ಮದುವೆಯೇನೋ ಆಯಿತು. ಇನ್ನೇನು, ಮಗಳು ತನ್ನ ಪತಿಯ ಮನೆಗೆ ಹೋಗಬೇಕು. ಅಷ್ಟರಲ್ಲೇ ತಂದೆ ಮಹೇಂದ್ರ ಸಿಂಗ್ ಸೋಲಂಕಿ ಮಗಳಿಗೆ ಅಚ್ಚರಿಯ ಕೊಡುಗೆ ನೀಡಿದರು. ನವದಾಂಪತ್ಯಕ್ಕೆ ಕಾಲಿಟ್ಟ ಮಗಳು-ಅಳಿಯನಿಗೆ ಹೊರಡಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು.

ನವ ದಂಪತಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ
ನವದಾಂಪತ್ಯಕ್ಕೆ ಕಾಲಿಟ್ಟ ಯುವಜೋಡಿ ಹೆಲಿಕಾಪ್ಟರ್ ನಲ್ಲಿ ಮೊದಲ ಪ್ರಯಾಣ ಆರಂಭಿಸಿದರು. ರೀನಾ ಹಾಗೂ ಸಂದೀಪ್ ಲಂಬಾ ದಂಪತಿ ಹೆಲಿಕಾಪ್ಟರ್ ಏರಿ ಜುಂಜುನ್ ಜಿಲ್ಲೆ ಚಿವಾಡ್ ಬಳಿ ಅಜಿತ್ ಪುರ್ ದಿಂದ ಸಂದೀಪ್ ಲಂಬಾ ಸ್ವಗ್ರಾಮ ಸುಲ್ತಾನಾ ಪ್ರದೇಶಕ್ಕೆ ತೆರಳಿದರು.

ಎರಡು ತಿಂಗಳ ಮೊದಲೇ ಪ್ಲಾನ್
ಒಂದು ವರ್ಷದ ಹಿಂದೆ ಮಗಳಿಗೆ ಮಹೇಂದ್ರ ಸಿಂಗ್ ಸೋಲಂಕಿ ಮದುವೆ ನಿಶ್ಚಯ ಮಾಡಿದ್ದರು. ಅಂದೇ ಮಗಳನ್ನು ವಿಶಿಷ್ಯ ರೀತಿಯಲ್ಲಿ ಬಿಳ್ಕೊಡುಗೆ ನೀಡಲು ತೀರ್ಮಾನ ಮಾಡಿದ್ದರು. ಕಳೆದ ಎರಡು ತಿಂಗಳ ಹಿಂದೆ ಮಗಳನ್ನು ಹೆಲಿಕಾಪ್ಟರ್ ಮೂಲಕ ಕಳುಹಿಸಿಕೊಡಲು ತಂದೆ ನಿರ್ಧರಿಸಿದ್ದು, ಈ ಬಗ್ಗೆ ಮನೆಯವರ ಜೊತೆಗೂ ಚರ್ಚಿಸಿದ್ದರು ಎನ್ನಲಾಗಿದೆ.

ಕಂಡುವರು ಹುಬ್ಬು ಹಾರಿಸುವಂತಿತ್ತು ಮದುವೆ!
ರೀನಾ ಹಾಗೂ ಸಂದೀಪ್ ಲಂಬಾ ಮದುವೆ ಅದ್ಧೂರಿತನದಿಂದ ಕೂಡಿತ್ತು. ಸಂಬಂಧಿಕರು, ಬಾಂಧವರು, ಅಷ್ಟೇ ಯಾಕೆ ಮದುವೆ ನೋಡಿದ ಪ್ರತಿಯೊಬ್ಬರು ಅಚ್ಚರಿ ಪಡುವ ರೀತಿಯಲ್ಲಿ ಮದುವೆ ಕಾರ್ಯಕ್ರಮ ನಡೆಯಿತು. ಇದರ ಜೊತೆಗೆ ಮದುವೆ ಮುಗಿಯುತ್ತಿದ್ದಂತೆ ನವದಂಪತಿಯನ್ನು ತಂದೆ ಹೆಲಿಕಾಪ್ಟರ್ ನಲ್ಲಿ ಬೀಳ್ಕೊಟ್ಟಿದ್ದು, ಎಲ್ಲರಲ್ಲೂ ಆಶ್ಚರ್ಯಚಕಿತರಾಗಿ ನೋಡುವಂತೆ ಮಾಡಿತು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications