ಇವಾಂಕಾರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದೆ ಅಮೆರಿಕ ಮಾಧ್ಯಮ!
Recommended Video

ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಶೃಂಗಸಭೆ (ಜಿಇಎಸ್) ಯಲ್ಲಿ ಭಾಗವಹಿಸುವುದಕ್ಕಾಗಿ ಹೈದರಾಬಾದಿಗೆ ಬಂದಿರುವ ಇವಾಂಕಾ ಟ್ರಂಪ್, ಈಗಾಗಲೇ ಭಾರತದಾದ್ಯಂತ ತಮ್ಮ ಹವಾ ಸೃಷ್ಟಿಸಿದ್ದಾರೆ. ಭಾರತೀಯ ಮಾಧ್ಯಮಗಳಂತೂ ಗ್ಲಾಮರ್ ಬೊಂಬೆ ಇವಾಂಕಾರಿಗೆ ನಿನ್ನೆ(ನ.28)ಯಿಡೀ ಸಾಕಷ್ಟು ಪ್ರಚಾರ ನೀಡಿವೆ.
ಗ್ಯಾಲರಿ : ಮುತ್ತಿನನಗರಿಯಲ್ಲಿ ಟ್ರಂಪ್ ಪುತ್ರಿ ಇವಾಂಕಾ
ಆದರೆ ಅಮೆರಿಕ ಮಾದ್ಯಮಗಳು ಮಾತ್ರ ಇವಾಂಕಾ ಭಾರತ ಭೇಟಿಯನ್ನು ಋಣಾತ್ಮಕವಾಗಿ ಚಿತ್ರಿಸುತ್ತಿವೆಯೇ? ದೊಡ್ಡಣ್ಣನ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬಕ್ಕೆ ಈ ಚೆಂದುಳ್ಳಿ ಚೆಲುವೆ ಮೇಲೆ ಮುನಿಸಾದರೂ ಯಾಕೆ?
ಅಮೆರಿಕ ಮಾಧ್ಯಮಗಳು ಇವಾಂಕಾ ಭಾರತ ಭೇಟಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದಕ್ಕೆ ಕಾರಣವಿದೆ. ಹಾಗೆ ನೋಡುವುದಕ್ಕೆ ಹೋದರೆ ಅಲ್ಲಿನ ಮಾಧ್ಯಮಗಳ ಅಭಿಪ್ರಾಯವನ್ನು ಅಲ್ಲಗಳೆಯುವಂತೆಯೂ ಇಲ್ಲ. ಏಕೆಂದರೆ ಜಾಗತಿಕ ವೇದಿಕೆಯೊಂದರಲ್ಲಿ ನೂರಾರು ದೇಶಗಳ ಜೊತೆ, ಅಮೆರಿಕದಂಥ ದೈತ್ಯ ರಾಷ್ಟ್ರದ ಪ್ರತಿನಿಧಿಯನ್ನಾಗಿ ಕೇವಲ ಅಧ್ಯಕ್ಷರ ಸಲಹೆಗಾರರನ್ನು ಕಳಿಸುವುದು ಸರಿಯೇ? ಇದರಿಂದ ಅಮೆರಿಕದ ಮರ್ಯಾದೆ ಏನಾದೀತು ಎಂಬ ಪ್ರಶ್ನೆಯನ್ನು ತಪ್ಪು ಎನ್ನುವುದು ಹೇಗೆ?

ಇವಾಂಕಾ ಪ್ರತಿನಿಧಿತ್ವ ಸಮಂಜಸವೇ..?
ಅಮೆರಿಕ ಮಾಧ್ಯಮಗಳು ಇವಾಂಕಾ ಭೇಟಿಯನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಿವೆ. ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ಕಾಲದಲ್ಲಿ ಈ ಸಮ್ಮೇಳನದಲ್ಲಿ ಸ್ವತಃ ಭಾಗವಹಿಸಿ, ಈ ವೇದಿಕೆಯ ಗಾಂಭೀರ್ಯವನ್ನು ಅರ್ಥ ಮಾಡಿಸಿದ್ದರು. ಆದರೆ ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಎಂಬ ಕಾರಣಕ್ಕೆ ಯಾವ ಪ್ರಭಾವೀ ಔಪಚಾರಿಕ ಹುದ್ದೆಯನ್ನೂ ಹೊಂದಿಲ್ಲದ ಇವಾಂಕಾರನ್ನು ಈ ಸಮ್ಮೇಳನಕ್ಕೆ ಕಳಿಸಿದ್ದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದು ಪ್ರಶ್ನೆ.

ಮಹಿಳಾ ಸಬಲೀಕರಣ ಎಂಬುದು ನಾಟಕವೇ..?!
ಮಹಿಳಾ ಸಬಲೀಕರಣ, ಕಾರ್ಮಿಕರ ಹಿತಾಸಕ್ತಿ ಎಂದೆಲ್ಲ ಬೊಬ್ಬೆಯಿಡುವ ಇವಾಂಕಾ ತಮ್ಮದೇ ಬಟ್ಟೆ ಕಾರ್ಖಾನೆಯಲ್ಲಿ ಎಷ್ಟು ಕಡಿಮೆ ಕೂಲಿಗೆ, ಮಹಿಳೆಯರನ್ನೂ, ಭಾರತೀಯ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತೆ? ಹೋದಲ್ಲೆಲ್ಲ ಅವರು ತಮ್ಮ ಆಭರಣ ಮತ್ತು ಬಟ್ಟೆ ಕಂಪೆನಿಗಳ ಪ್ರಚಾರ ಮಾಡುವುದಲ್ಲದೆ ಇನ್ನೇನು ಮಾಡುತ್ತಾರೆ? ಎಂದು ಮಾಧ್ಯಮಗಳು ಖಾರವಾಗಿ ಪ್ರಶ್ನಿಸಿವೆ!

ಭಾರತವನ್ನೂ ವ್ಯಂಗ್ಯವಾಗಿ ಚಿತ್ರಿಸಿವೆಯಾ?
ಕೇವಲ ಇವಾಂಕಾ ಟ್ರಂಪ್ ರನ್ನು ಮಾತ್ರವಲ್ಲ, ಭಾರತವನ್ನೂ ಅಮೆರಿಕ ಮಾಧ್ಯಮಗಳು ಪರೋಕ್ಷವಾಗಿ ವ್ಯಂಗ್ಯವಾಡಿವೆ. ಇವಾಂಕಾ ಟ್ರಂಪ್ ಬರುತ್ತಾರೆಂದು ಭಾರತದ ರಸ್ತೆಗಳನ್ನು ಗುಡಿಸಿ, ಭಿಕ್ಷುಕರು ಮತ್ತು ಬೀದಿನಾಯಿಗಳಿಂದ ಮುಕ್ತಗೊಳಿಸಲಾಗಿದೆ. ಒಟ್ಟಿನಲ್ಲಿ ಇವಾಂಕಾ ಆಗಮನವನ್ನು ಭಾರತ 'ರಾಯಲ್ ವಿಸಿಟ್' ಎಂಬಂತೇ ನೋಡಿದೆ ಎಂದು ಇಲ್ಲಿ ವೆಬ್ ಸೈಟ್ ವೊಂದು ಬರೆದಿದೆ!

ಪ್ರಚಾರ ಪ್ರಿಯರೇ ಇವಾಂಕಾ?
ಮಹಿಳಾ ರಕ್ಷಣೆ, ಕಾರ್ಮಿಕರ ಸಮಸ್ಯೆ, ಮಕ್ಕಳ ಹಕ್ಕು ಇತ್ಯಾದಿ ಹೋರಾಟಗಳು ಬಂದಾಗ ಎಲ್ಲಿಯೂ ಇವಾಂಕಾ ಸಮರ್ಥ ನಾಯಕತ್ವವಹಿಸಿಲ್ಲ. ಆದರೆ ಅವರಿಗೆ ಈ ಎಲ್ಲ ವಿಷಯಗಳೂ ಜನಪ್ರಿಯತೆಗೋಸ್ಕರ ಮಾತ್ರವೇ ಬೇಕಾಗಿದೆ ಎಂದೂ ಮಾಧ್ಯಮಗಳು ಹೀಗಳೆದಿವೆ! ಅವರೊಬ್ಬ ಉದ್ಯಮಿಯಾಗಲ್ಲರೇ ಹೊರತು, ಜನನಾಯಕಿಯಾಗಲಾರರು ಎಂಬರ್ಥದಲ್ಲಿ ಮಾಧ್ಯಮಗಳು ಅವರ ನಡೆಯನ್ನು ಚಿತ್ರಿಸಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications