ರಷ್ಯಾ ಟ್ಯಾಂಕರ್ ನುಗ್ಗುವುದನ್ನು ತಡೆಯಲು ತನ್ನನ್ನು ತಾನೇ ಸ್ಪೋಟಿಸಿಕೊಂಡ ಉಕ್ರೇನ್ ಯೋಧ
ಕೀವ್, ಫೆ 27: ಮೊದಲೆರಡು ದಿನದ ರಷ್ಯಾ ದಾಳಿಯಿಂದ ಕಂಗೆಟ್ಟು ಹೋಗಿದ್ದ ಉಕ್ರೇನ್ ಸಂಧಾನದ ಮಾತನ್ನು ಆಡಿತ್ತು. ಆದರೆ, ಶನಿವಾರ (ಫೆ 26) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶಸ್ತ್ರತ್ಯಾಗ ಮಾಡುವುದಿಲ್ಲ, ಕೊನೆಯ ಕ್ಷಣದವರೆಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ದೇಶದ ನಾಗರೀಕರಿಗೆ ರೈಫಲ್ ಅನ್ನು ನೀಡಿರುವ ಉಕ್ರೇನ್ ಸರಕಾರ, ರಷ್ಯಾ ವಿರುದ್ದದ ದಾಳಿಯನ್ನು ತೀವ್ರಗೊಳಿಸಿದೆ. ಕೀವ್ ನಗರವನ್ನು ವಶಪಡಿಸಿಕೊಳ್ಳುವ ರಷ್ಯಾದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಈ ನಡುವೆ, ಉಕ್ರೇನ್ ದೇಶದ ಇತರ ದಿಕ್ಕುಗಳಿಗೂ ಆಕ್ರಮಣ ಮಾಡುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ.
ಉಕ್ರೇನ್ ಪರವಾಗಿ ವಿಶ್ವದ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದ್ದರೂ, ಮಿಲಿಟರಿ ಸಹಾಯದ ಬಗ್ಗೆ ಯಾವುದೇ ಖಾತ್ರಿ ಆ ದೇಶಕ್ಕೆ ಸಿಗುತ್ತಿಲ್ಲ. ಯುದ್ದದಿಂದ ನಲುಗಿರುವ ಉಕ್ರೇನಿಗೆ ಅಮೆರಿಕಾ ವಿಶೇಷ ಸುರಕ್ಷಾ ನೆರವನ್ನು ಘೋಷಿಸಿದೆ.
ಮೂರನೇ ದಿನದ ಸಮರದ ಸಂದರ್ಭದಲ್ಲಿ ರಷ್ಯಾದ ಟ್ಯಾಂಕರ್ ತನ್ನ ಪ್ರದೇಶದತ್ತ ಬರುವುದನ್ನು ತಪ್ಪಿಸಲು ಉಕ್ರೇನ್ ಯೋಧನೊಬ್ಬ ಆತ್ಮಾಹುತಿ ಮಾಡಿಕೊಂಡ ಘಟನೆ ವರದಿಯಾಗಿದೆ. ಇದು ಉಕ್ರೇನಿನ ದಕ್ಷಿಣ ಭಾಗದಲ್ಲಿ ನಡೆದ ವಿದ್ಯಮಾನವಾಗಿದೆ.

ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಪ್ರವೇಶ
ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಪ್ರವೇಶಿಸಿದ್ದರೂ, ಪೂರ್ಣ ಪ್ರಮಾಣದಲ್ಲಿ ವಶ ಪಡಿಸಿಕೊಳ್ಲಲು ಸಾಧ್ಯವಾಗಿಲ್ಲ. ಹೀಗಾಗಿ, ದೇಶದ ಎಲ್ಲಾ ಭಾಗಗಳಿಂದಲೂ ಉಕ್ರೇನ್ ಆಕ್ರಮಿಸುವಂತೆ ಆದೇಶ ನೀಡಲಾಗಿದೆ. ನಮ್ಮ ಟಾರ್ಗೆಟ್ ಸೇನಾನೆಲೆ ಮಾತ್ರ ಸಾರ್ವಜನಿಕರಲ್ಲ ಎಂದು ರಷ್ಯಾ ಪುನರುಚ್ಚಿಸಿದೆ. ಆದರೂ, ವಸತಿ ಸಮುಚ್ಚಯಗಳ ಮೇಲೆ ಕ್ಷಿಪಣಿ ದಾಳಿಯಾಗಿರುವುದು ಕಂಡು ಬಂದಿದೆ.

ದಕ್ಷಿಣ ಭಾಗದ ಖೇರ್ಸನ್ ಪ್ರಾಂತ್ಯದ ಕಡೆಗೆ ಮುನ್ನುಗ್ಗುತ್ತಿದ್ದವು
ರಷ್ಯಾ ಸೇನೆಯ ಟ್ಯಾಂಕರುಗಳು ಮತ್ತು ಪಡೆಗಳು ದಕ್ಷಿಣ ಭಾಗದ ಖೇರ್ಸನ್ ಪ್ರಾಂತ್ಯದ ಕಡೆಗೆ ಮುನ್ನುಗ್ಗುತ್ತಿದ್ದವು. ವೈರಿ ಪಡೆಗಳು ಬರುವುದನ್ನು ವಿಳಂಬಗೊಳಿಸಲು ಉಕ್ರೇನ್ ಯೋಧನೊಬ್ಬ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಮರೈನ್ ಬೆಟಾಲಿಯನ್ನಲ್ಲಿ ಇಂಜಿನಿಯರ್ ಆಗಿರುವ ವಿಟಲಿ ಹೆನಿಚೆಕ್ಸ್ ಅವರನ್ನು ಸೇತುವೆಯ ಸಮೀಪ ಪಹರೆಗೆ ನಿಯೋಜಿಸಲಾಗಿತ್ತು.

ಜೆನಿಚೆಸ್ಕಿ ಸೇತುವೆಯಲ್ಲಿ ಮೈನ್ಸ್ ನೊಂದಿಗೆ ಸ್ಪೋಟಿಸಿ ಆತ್ಮಾಹುತಿ
ರಷ್ಯಾದ ಟ್ಯಾಂಕರುಗಳು ಈ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ವಿಟಲಿ ಹರಸಾಹಸ ಪಟ್ಟಿದ್ದ. ಕೊನೆಗೆ, ಟ್ಯಾಂಕರುಗಳು ಪ್ರವೇಶ ಸಾಧ್ಯವಾಗದಂತೆ ತಡೆಯಲು ಆಯಕಟ್ಟಿನ ಜಾಗಕ್ಕೆ ಆಗಮಿಸಿ, ಜೆನಿಚೆಸ್ಕಿ ಸೇತುವೆಯಲ್ಲಿ ಮೈನ್ಸ್ ನೊಂದಿಗೆ ಸ್ಪೋಟಿಸಿ ಆತ್ಮಾಹುತಿ ಮಾಡಿಕೊಂಡಿದ್ದಾನೆ. ಬೇರೆ ಬೆಟಾಲಿಯನ್ ಜವಾಬ್ದಾರಿ ಈತನ ಮೇಲಿದ್ದರೂ, ಸ್ವಯಂ ಇಲ್ಲಿಗೆ ಬಂದು ಶತ್ರು ಸೇನೆಯನ್ನು ತಡೆಯಲು ವಿಟಲಿ ಹುತಾತ್ಮನಾಗಿದ್ದಾನೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್ ಸೇನೆಯ ಜನರಲ್ ಸ್ಟಾಫ್ ಆಫ್ ಆರ್ಮಡ್ ಫೋರ್ಸ್
"ಈ ಯೋಧನ ಚಾರಿತ್ರಾರ್ಹ ಆತ್ಮಾಹುತಿಯಿಂದಾಗಿ ಶತ್ರು ಸೇನೆಗಳು ನಮ್ಮ ಜಾಗದತ್ತ ಬರುವುದು ವಿಳಂಬವಾಯಿತು. ಇದರಿಂದ, ನಾವು ಮತ್ತೆ ಆ ಜಾಗಕ್ಕೆ ನಮ್ಮ ಸೇನೆಯನ್ನು ಕಳುಹಿಸಲು ಸಾಧ್ಯವಾಯಿತು. ರಷ್ಯಾ ಪಡೆಗಳು ನಮ್ಮತ್ತ ಬರುವುದನ್ನು ವಿಳಂಬ ಮಾಡಲು ಸೇತುವೆಯನ್ನು ಸ್ಫೋಟಿಸಿ, ತಾನೂ ಆತ್ಮಾಹುತಿ ಮಾಡಿಕೊಂಡ"ಎಂದು ಉಕ್ರೇನ್ ಸೇನೆಯ ಜನರಲ್ ಸ್ಟಾಫ್ ಆಫ್ ಆರ್ಮಡ್ ಫೋರ್ಸ್, ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
-
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election












Click it and Unblock the Notifications