ಕೀನ್ಯಾದಲ್ಲಿ ಉಗ್ರರ ಬರ್ಬರ ಕೃತ್ಯಕ್ಕೆ ಮೋದಿ ಕಂಬನಿ
ಗರಿಸ್ಸಾ, ಏ.3: : ಕೀನ್ಯಾದ ವಿಶ್ವವಿದ್ಯಾನಿಲಯದಲ್ಲಿ ಸೊಮಾಲಿಯಾದ ಉಗ್ರರು ನಡೆಸಿದ ದಾಳಿಯನ್ನು ಅತ್ಯಂತ ಹೀನ ಕೃತ್ಯ, ಇದೊಂದು ಅತ್ಯಂತ ಘೋರ ಸಂಗತಿ ಎಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಶೆಬಾಬ್ ಇಸ್ಲಾಮಿಸ್ಟ್ ಉಗ್ರಗಾಮಿ ಸಂಘಟನೆ ನಡೆಸಿದ ದಾಳಿಯಲ್ಲಿ ಕನಿಷ್ಟ 147 ಜನರು ಮೃತಪಟ್ಟಿದ್ದಾರೆ.
1998ರಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯ ನಂತರದ ಅತ್ಯಂತ ಭೀಕರ ಭಯೋತ್ಪಾದನಾ ದಾಳಿ ಇದಾಗಿದೆ. ಪೇಶಾವಾರದಲ್ಲಿ ಉಗ್ರರು ಮಕ್ಕಳನ್ನು ಕೊಂದ ಕೃತ್ಯಕ್ಕಿಂತ ಇದು ಭೀಕರವಾಗಿದ್ದರೂ ಭಾರತದ ಮಾಧ್ಯಮಗಳು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದಿರುವುದು ದುರಂತದ ಸಂಗತಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುತ್ತಿದೆ. [ಇಂಡೋನೇಷ್ಯಾ ಸೈಡ್ ಹೊಡೆಯಲಿದ್ದಾರೆ ಭಾರತದ ಮುಸ್ಲಿಮರು]
ಪಾಕಿಸ್ತಾನದ ಪೇಶಾವರದ ಶಾಲೆಯಲ್ಲಿ ತಾಲಿಬಾನ್ ಉಗ್ರರು 150 ಮಕ್ಕಳನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಕೀನ್ಯಾದ ವಿಶ್ವವಿದ್ಯಾನಿಲಯವೊಂದರ ಮೇಲೆ ದಾಳಿ ನಡೆಸಿದ ಅಲ್ ಶಬಾಬ್ ಉಗ್ರರು 147 ವಿದ್ಯಾರ್ಥಿಗಳನ್ನು ಕೊಂದು ಹಾಕಿರುವ ಹೃದಯ ವಿದ್ರಾವಕ ಘಟನೆ ಗುರುವಾರ ರಾತ್ರಿ ನಡೆದಿದೆ.

ಇದೊಂದು ಅತ್ಯಂತ ಘೋರ ಸಂಗತಿ
ಕೀನ್ಯಾದ ವಿಶ್ವವಿದ್ಯಾನಿಲಯದಲ್ಲಿ ಸೊಮಾಲಿಯಾದ ಉಗ್ರರು ನಡೆಸಿದ ದಾಳಿಯನ್ನು ಅತ್ಯಂತ ಹೀನ ಕೃತ್ಯ, ಇದೊಂದು ಅತ್ಯಂತ ಘೋರ ಸಂಗತಿ ಎಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಶೆಬಾಬ್ ಇಸ್ಲಾಮಿಸ್ಟ್ ಉಗ್ರಗಾಮಿ ಸಂಘಟನೆ ನಡೆಸಿದ ದಾಳಿಯಲ್ಲಿ ಕನಿಷ್ಟ 147 ಜನರು ಮೃತಪಟ್ಟಿದ್ದಾರೆ

ಗಾಯ ಗೊಂಡವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ
ಗಾಯ ಗೊಂಡವರ ಸಂಖ್ಯೆ 200 ದಾಟಿದೆ. ನಾಲ್ವರು ಉಗ್ರರು ದಾಳಿ ನಡೆಸಿದ ವೇಳೆ ವಿಶ್ವವಿದ್ಯಾಲಯದಲ್ಲಿರುವ 850 ವಿದ್ಯಾರ್ಥಿಗಳ ಪೈಕಿ 518 ಜನ ಹಾಜರಿದ್ದರು. ಗರಿಸ್ಸಾ ಪಟ್ಟಣದಲ್ಲಿರುವ ವಿವಿಯ ಹಾಸ್ಟೆಲ್ಗೆ ನುಗ್ಗಿದ ನಾಲ್ವರು ಉಗ್ರರು ಗ್ರೆನೇಡ್ ಬಳಸಿ ದಾಳಿ ನಡೆಸಿದ್ದಾರೆ.ಕ್ರಿಶ್ಚಿಯನ್ ಮತ್ತು ಇತರ ಧರ್ಮದ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡರು.
|
ನರೇಂದ್ರ ಮೋದಿ ಅವರಿಂದ ಟ್ವೀಟ್ ಮಾಡಿ ಸಂತಾಪ
ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಕೀನ್ಯಾ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಗುಂಡಿನ ಸದ್ದು, ರೋದನ, ನರಳಾಟ
ಪೂರ್ವ ಕೀನ್ಯಾದಲ್ಲಿರುವ ಈ ಕ್ರೈಸ್ತ ವಿಶ್ವವಿದ್ಯಾಲಯದ ಮೇಲೆ ಕ್ರೈಸ್ತ ವಿರೋಧಿ ಅಲ್-ಶಬಾಬ್ ಉಗ್ರರು ನಡೆಸಿದ ದಾಳಿಗೆ ತಕ್ಕ ಉತ್ತರ ನೀಡಿದ ಗರಿಸ್ಸಾದ ಪೊಲೀಸರು ಮತ್ತು ಮಿಲಿಟರಿ ಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ಇತರ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಎಲ್ಲೆಲ್ಲೂ ಗುಂಡಿನ ಸದ್ದು, ರೋದನ, ನರಳಾಟಗಳೇ ಕಂಡು ಬರುತ್ತಿವೆ.
|
ಶಬಾಬ್ ಉಗ್ರರ ಅಟ್ಟಹಾಸ
ಶಬಾಬ್ ಉಗ್ರರು ಕಳೆದ 2013ರಲ್ಲಿ ಕೀನ್ಯಾದ ನೈರೋಬಿಯದ ಮಾಲ್ವೊಂದರ ಮೇಲೆ ದಾಳಿನಡೆಸಿ 67 ಜನರನ್ನು ಕೊಂದು ಹಾಕಿದ್ದರು.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications