ನೇತಾಜಿ, ನೆಹರೂ ನಂಬಿಕಸ್ತ ನಂಬಿಯಾರ್ 'ಸ್ಪೈ'
ಲಂಡನ್, ಅ.26: ನೇತಾಜಿ ಸುಭಾಷ್ ಚಂದ್ರ್ ಬೋಸ್ ಅವರ ನಂಬಿಕಸ್ತ, ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಆಪ್ತ ಗೆಳೆಯ ಭಾರತದ ರಾಯಭಾರಿಯಾಗಿದ್ದ ಎ. ಸಿ. ಎಸ್. ನಂಬಿಯಾರ್ ಅವರು ಸೋವಿಯತ್ ರಷ್ಯಾದ ಗೂಢಚಾರನಾಗಿದ್ದರು ಎಂದು ಬ್ರಿಟಿಷರು ಸಂಗ್ರಹಿಸಿದ ದಾಖಲೆಗಳಿಂದ ತಿಳಿದು ಬಂದಿದೆ.
ಲಂಡನ್ನಿನಲ್ಲಿರುವ ರಾಷ್ಟ್ರೀಯ ರಹಸ್ಯ ದಾಖಲೆಯಲ್ಲಿ ನಂಬಿಯಾರ್ ಬಗ್ಗೆ ಉಲ್ಲೇಖಿಸಲಾಗಿದೆ. ನಂಬಿಯಾರ್ ಅವರು 1924 ರಲ್ಲಿ ಪತ್ರಕರ್ತರಾಗಿ ಬರ್ಲಿನ್ ಗೆ ತೆರಳಿದ್ದರು ಹಾಗೂ ಭಾರತದ ಕಮ್ಯುನಿಸ್ಟ್ ಗುಂಪಿನ ಪರವಾಗಿ ಕೆಲಸ ಮಾಡಿದ್ದ ಇವರು ಸೋವಿಯತ್ ರಷ್ಯಾಗೆ 1929ರಲ್ಲಿ ತೆರಳಿ ಅತಿಥಿಯಾಗಿ ನೆಲೆಸಿದ್ದರು.
ಎರಡನೇ ಮಹಾಯುದ್ಧದ ಘೋಷಣೆಯಾದ ಬೆನ್ನಲ್ಲೇ ಜರ್ಮನಿಯನ್ನು ತೊರೆದಿದ್ದರು. ನಂತರ ಸುಭಾಷ್ ಚಂದ್ರ ಬೋಸ್ ಅವರ ಅನುಯಾಯಿಯಾಗಿ ಬರ್ಲಿನ್ ನಲ್ಲಿ ಗುರುತಿಸಿಕೊಂಡರು. ನೇತಾಜಿ ಕನಸು ಕಂಡಿದ್ದ ಫ್ರೀ ಇಂಡಿಯಾ ಚಳವಳಿಗೆ ಜರ್ಮನ್ ಮೂಲದ ಆರ್ಥಿಕ ಬೆಂಬಲಿಗನಾಗಿ ನಂಬಿಯಾರ್ ಪಾತ್ರವಹಿಸಿದ್ದರು. ಜರ್ಮನಿಯಿಂದ ಜಪಾನ್ ಗೆ ನೇತಾಜಿ ತೆರಳಲು ನಂಬಿಯಾರ್ ನೆರವಾಗಿದ್ದರು ಎಂದು ದಾಖಲೆಗಳು ಹೇಳಿವೆ. [ಪಾಕಿಸ್ತಾನದಲ್ಲಿ ಗೂಢಚಾರಿ ರವೀಂದರ್ ಕೌಶಿಕ್]

ಅದರೆ, ನಾಜಿಗಳ ಸಂಪರ್ಕ ಹೊಂದಿರುವ ಆರೋಪ ಹೊರೆಸಿ ಅರಾಥಿಲ್ ಕಾಂಡೆತ್ ನಾರಾಯಣ್ ನಂಬಿಯಾರ್ ಅವರನ್ನು ಆಸ್ಟ್ರೀಯಾದಲ್ಲಿ 1945ರಲ್ಲಿ ಬಂಧಿಸಲಾಯಿತು. ಯುದ್ಧದ ನಂತರ ಕೌನ್ಸಿಲರ್, ಸ್ಕಾಂಡಿನೇವಿಯಾ, ಪಶ್ಚಿಮ ಜರ್ಮನಿಗೆ ಭಾರತದ ರಾಯಭಾರಿಯಾಗಿ ಕೊನೆಗೆ ಹಿಂದೂಸ್ತಾನ್ ಟೈಮ್ಸ್ ನ ಯುರೋಪಿಯನ್ ಕರೆಸ್ಪಾಂಡೆಂಟ್ ಆಗಿ ಕೂಡಾ ಕಾರ್ಯನಿರ್ವಹಿಸಿದರು. [ಮಹಾಯುದ್ಧದ ಜನ್ಮ ಶತಮಾನೋತ್ಸವ]
ನೇತಾಜಿ ಅವರ ಆಪ್ತರು, ಆಜಾದ್ ಹಿಂದ್ ಕಾರ್ಯಕರ್ತರ ಗುಪ್ತ ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದ ಬ್ರಿಟಿಷರಿಗೆ 1959ರಲ್ಲೇ ನಂಬಿಯಾರ್ ಅವರು ಸೋವಿಯತ್ ರಷ್ಯಾಗೆ ಬೇಹುಗಾರಿಕೆ ಮಾಡುತ್ತಿರುವ ಮಾಹಿತಿ ಸಿಕ್ಕಿತ್ತು. ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಬಳಕೆಯಾದ ಜರ್ಮನ್ ಸಬ್ ಮೇರಿನ್ ಯು ಬೋಟ್ 234ರಲ್ಲಿ ನಂಬಿಯರ್ ಅವರು ಬೋಸ್ ಅವರಿಗೆ ಬರೆದಿರುವ ಪತ್ರಗಳ ಪ್ರತಿಗಳು ಸಿಕ್ಕಿದ್ದವು ಎಂದು ಬ್ರಿಟಿಷರು ಹೇಳಿದ್ದಾರೆ.[ದೇಶಭಕ್ತ, ವೀರ ಸೇನಾನಿ ನೇತಾಜಿ]
ಪಂಡಿತ್ ನೆಹರೂ ಅವರ ಬಗ್ಗೆ ಅತ್ಯಂತ ಪ್ರಮುಖ ವ್ಯಕ್ತಿ ಅವರಿಗೆ ಎಲ್ಲದರ ಬಗ್ಗೆ ಮಾಹಿತಿ ಎಂದು ನಂಬಿಯಾರ್ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಸ್ನೇಹದ ಕುರುಹಾಗಿ ನಂಬಿಯಾರ್ ಅವರನ್ನು ಪಂಡಿತ್ ಜೀ ಅವರು ರಾಯಭಾರಿಯಾಗಿ ನೇಮಿಸಿದ್ದರು ಎಂದು ಬ್ರಿಟಿಷರ ವಶದಲ್ಲಿರುವ ದಾಖಲೆಗಳಲ್ಲಿವೆ.(ಪಿಟಿಐ)
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications