ಶುಕ್ರಗ್ರಹ ನಮಗೆ ಸೇರಿದ್ದು ಅಂತಾ ರಷ್ಯಾ ಕ್ಯಾತೆ..!
ಶುಕ್ರಗ್ರಹ ನಮಗೆ ಸೇರಿದ್ದು ಅಂತಾ ರಷ್ಯಾ ಕಿರಿಕ್ ತೆಗೆದಿದೆ. ಅಷ್ಟಕ್ಕೂ ರಷ್ಯಾ ಹೀಗೆ ಕಿರಿಕ್ ಮಾಡುವುದರ ಹಿಂದೆ ಸುಮಾರು 50 ವರ್ಷಗಳ ಇತಿಹಾಸವೇ ಇದೆ. ಏಕೆಂದರೆ ಶುಕ್ರಗ್ರಹದ ಮೇಲೆ ಮೊದಲಿಗೆ ನೌಕೆಯನ್ನ ಇಳಿಸಿದ್ದು ಇದೇ ರಷ್ಯಾ.
1961ರಿಂದಲೂ ಸತತವಾಗಿ ತನ್ನ ಪ್ರಯತ್ನ ಮುಂದುವರಿಸಿದ್ದ ರಷ್ಯಾ, 1981ರಲ್ಲಿ ಮೊದಲ ಬಾರಿಗೆ ಯಶಸ್ಸು ಕಂಡಿತ್ತು. 'ವೆನೆರಾ' ಹೆಸರಲ್ಲಿ ಶುಕ್ರಯಾನ ಕೈಗೊಂಡಿದ್ದ ರಷ್ಯಾ 1961ರಲ್ಲಿ ತನ್ನ ಮೊದಲ 'ವೆನೆರಾ' ನೌಕೆ ಹಾರಿಬಿಟ್ಟಿತ್ತು. ಆದರೆ ಅದು ಭೂಮಿಯ ಕಕ್ಷೆಯನ್ನೂ ದಾಟಲು ಸಾಧ್ಯವಾಗಿರಲಿಲ್ಲ.
ಹೀಗೆ ಸತತ ಪ್ರಯತ್ನಗಳ ನಂತರ 'ವೆನೆರಾ-13' ಶುಕ್ರಗ್ರಹದ ಮೇಲೆ ಲ್ಯಾಂಡ್ ಆಗಿತ್ತು. ಇದು ಶುಕ್ರಗ್ರಹದ ಮೇಲೆ ಇಳಿದ ಮೊದಲ ಹಾಗೂ ಏಕೈಕ ಉಪಗ್ರಹ. ಈ ಹಿನ್ನೆಲೆಯಲ್ಲಿ ರಷ್ಯಾ ಈಗ ಶುಕ್ರಗ್ರಹದ ಮೇಲೆ ತನ್ನ ಹಕ್ಕುಸ್ವಾಮ್ಯ ಮಂಡಿಸುತ್ತಿದೆ.
ರಷ್ಯಾದ ಮಾಸ್ಕೋ ನಗರದಲ್ಲಿ ಆಯೋಜಿಸಲಾಗಿದ್ದ ಔದ್ಯಮಿಕ ಪ್ರದರ್ಶನದಲ್ಲಿ ಮಾತನಾಡಿರುವ ರಷ್ಯಾ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ ಶುಕ್ರನನ್ನು 'ರಷ್ಯನ್ ಗ್ರಹ' ಎಂದಿದ್ದಾರೆ. ಅಲ್ಲದೆ ಅದು ನಮ್ಮ ಆಸ್ತಿ ಎನ್ನುವ ಮೂಲಕ, ಬಾಹ್ಯಾಕಾಶ ಸಮರಕ್ಕೆ ನಾಂದಿ ಹಾಡಿದ್ದಾರೆ.

ಶುಕ್ರಗ್ರಹಕ್ಕಾಗಿ ದಿಢೀರ್ ಪೈಪೋಟಿ..!
ಶುಕ್ರಗ್ರಹದಲ್ಲಿ ಏಲಿಯನ್ಗಳು ಬದುಕಿರುವ ಸಾಧ್ಯತೆಯಿದೆ ಅಂತಾ ವಿಜ್ಞಾನಿಗಳು ಹೇಳಿದ್ದೇ ತಡ ಭೂಮಿಯ ಅವಳಿ ಎಂದೇ ಕರೆಯಲಾಗುವ ಶುಕ್ರ ಗ್ರಹ (Venus) ಬಾಹ್ಯಾಕಾಶ ವಿಜ್ಞಾನಿಗಳ ಕೇಂದ್ರಬಿಂದುವಾಗಿದೆ. ಈ ಕಾರಣಕ್ಕೆ ಶುಕ್ರಗ್ರಹದ ಅಧ್ಯಯನಕ್ಕೆ ದಿಢೀರ್ ಪೈಪೋಟಿ ಶುರುವಾಗಿದೆ. ಕೆಲ ದಿನಗಳ ಹಿಂದೆ 'ನೇಚರ್ ಅಸ್ಟ್ರಾನಮಿ'ಯಲ್ಲಿ ಪ್ರಕಟವಾಗಿದ್ದ ಸಂಶೋಧನಾ ವರದಿಯಲ್ಲಿ ಶುಕ್ರನಲ್ಲಿ ಜೀವಿಗಳು ಬದುಕಿರಬಹುದು ಎನ್ನಲಾಗಿತ್ತು. ಶುಕ್ರ ಗ್ರಹದ ವಾತಾವರಣದ ಕಠಿಣ ಆಮ್ಲೀಯ ಮೋಡಗಳಲ್ಲಿ ಫಾಸ್ಫೈನ್ (Phosphine) ಎಂಬ ಜೈವಿಕ ಅನಿಲದ ಕಣ ಕಂಡುಬಂದಿತ್ತು. ಈ ಮೂಲಕ ಭೂಮಿಯಲ್ಲಿರುವ ಫಾಸ್ಫೈನ್ ಗ್ಯಾಸ್ನ ಗುಣ ಗಮನಿಸಿದರೆ ಶುಕ್ರನಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಕ್ಕಿತ್ತು.

ಶುಕ್ರಗ್ರಹದಲ್ಲಿ ಬ್ಯಾಕ್ಟೀರಿಯಾ ಬದುಕಿವೆಯಾ..?
3 ಹ್ರೈಡ್ರೋಜನ್ ಅಣುಗಳ ಜೊತೆ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಈ ಫಾಸ್ಫೈನ್ ಅನಿಲ ಉತ್ಪತ್ತಿಯಾಗುತ್ತದೆ. ಇದು ಮಾನವರಿಗೆ ತುಂಬಾ ವಿಷಕಾರಿ. ಆದರೂ ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್ಫೈನ್ ಸೃಷ್ಟಿಯಾಗುತ್ತದೆ. ಹೀಗೆ ಶುಕ್ರ ಗ್ರಹದಲ್ಲಿಯೂ ಜೀವಿಗಳು ಬದುಕಿರಬಹುದು, ಶುಕ್ರನ ಆಸಿಡ್ ಮೋಡಗಳ ಒಳಗೆ ಜೀವಿಗಳು ತೇಲುತ್ತಾ ಬದುಕಿರಬಹುದು ಎಂದು ಅಂದಾಜಿಸಲಾಗಿತ್ತು. ಇದಾದ ಬಳಿಕ ಶುಕ್ರಗ್ರಹ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.

ಶುಕ್ರ ಗ್ರಹ ಬಿಸಿ ಬಿಸಿ..!
ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.

ನೌಕೆ ಹಾರಿಸುತ್ತಿದೆ ರಷ್ಯಾ..!
ಫಾಸ್ಫೈನ್ ಗ್ಯಾಸ್ ಕಂಡುಬಂದ ಮಾತ್ರಕ್ಕೆ ಶುಕ್ರನಲ್ಲಿ ಜೀವಿಗಳು ಬದುಕಿವೆ ಅಂತಾ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಆ ಗ್ರಹದ ನೆಲ ಮತ್ತು ವಾತಾವರಣದೊಳಗೆ ಖುದ್ದು ಸಂಪರ್ಕ ಸಾಧಿಸಿ ಅಧ್ಯಯನ ನಡೆಸಬೇಕಿದೆ. ಆಗ ಮಾತ್ರ ಸಂಪೂರ್ಣ ಮಾಹಿತಿ ಕಲೆಹಾಕಲು ಸಾಧ್ಯ. ಇದನ್ನೇ ರಷ್ಯಾದ ವಿಜ್ಞಾನಿಗಳು ಹೇಳುತ್ತಿರುವುದು. ಈಗಾಗಲೇ ರಷ್ಯಾ ಹೊರತು ಅಮೆರಿಕ, ಯೂರೋಪ್ ಮತ್ತು ಜಪಾನ್ ದೇಶಗಳು ಶುಕ್ರನ ಬಳಿ ಹೋಗಿವೆ. ಆದರೆ, ಅದರ ನೆಲದ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆ ರಷ್ಯಾದ್ದು. ಇದರ ಬೆನ್ನಲ್ಲೇ ರಷ್ಯಾ ಮತ್ತೊಂದು ನೌಕೆ ಹಾರಿಸಲು ಸಜ್ಜಾಗಿದೆ.

2023ಕ್ಕೆ ಭಾರತದಿಂದ ‘ಶುಕ್ರಯಾನ’..!
'ನೇಚರ್ ಅಸ್ಟ್ರಾನಮಿ'ಯ ಸಂಶೋಧನಾ ವರದಿ ಪ್ರಕಟವಾದ ಬೆನ್ನಲ್ಲೇ ಭಾರತದ ಹೆಮ್ಮೆಯ 'ಇಸ್ರೋ' ಸಂಸ್ಥೆ ಮಹತ್ವದ ಘೋಷಣೆ ಹೊರಡಿಸಿತ್ತು. 'ಶುಕ್ರಯಾನ-1' ಮೂಲಕ ಭಾರತದಿಂದ ಉಪಗ್ರಹವೊಂದು ಶುಕ್ರ ಗ್ರಹದ ಕಕ್ಷೆ ತಲುಪುವುದು ಪಕ್ಕಾ ಆಗಿದೆ. 2023ಕ್ಕೆ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಅದೇ ವರ್ಷ ನೌಕೆ ಶುಕ್ರನತ್ತ ಹಾರುವ ನಿರೀಕ್ಷೆ ಇದೆ. ಹಿಂದೆ ಚಂದ್ರನ ಮೇಲೆ ನೀರಿನ ಸುಳಿವು ನೀಡಿದ್ದು ಇಸ್ರೋ ಸಂಸ್ಥೆ. ಅಲ್ಲದೆ ಮಂಗಳಯಾನ ಮೂಲಕ ಮಂಗಳ ಗ್ರಹದಲ್ಲಿ ನೀರಿನ ಸುಳಿವು ನೀಡಿದ್ದು ಕೂಡ ಭಾರತವೇ. ಈಗ ಭಾರತ ಶುಕ್ರಯಾನ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications