ಏನಾಶ್ವರ್ಯ! ಎಲಿಜಬೆತ್ ರಾಣಿ ವಿರುದ್ಧ ನಿಂತ ಸೇವಕರು
ಲಂಡನ್, ಮಾ.31: ಎಂದೂ ಮುಳುಗದ ಸಾಮ್ರಾಜ್ಯ ನಮ್ಮದು ಎಂದು ಬೀಗುವ ಬ್ರಿಟಿಷರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ನಿನ ಎಲಿಜಬೆತ್ ರಾಣಿ ವಿಂಡ್ಸರ್ ಕೋಟೆಯ ಮುಂದೆ 'ಕೆಂಪು ಬಾವುಟ' ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ.
ವಿಂಡ್ಸರ್ ಕೋಟೆಯ ಸಿಬ್ಬಂದಿಗಳಿಗೆ ತಾವು ಪಡೆಯುತ್ತಿರುವ ಸಂಬಳ ದಿನಕೂಲಿ ನೌಕರರಿಗಿಂತಲೂ ಕಡಿಮೆ ಎಂಬ ಸತ್ಯ ತಡವಾಗಿ ಅರಿವಾಗಿದೆ. ಸುಮಾರು 14,400 ಪೌಂಡ್( 21,000 USD ಅಥವಾ 13.35 ಲಕ್ಷ ರು) ಪ್ರತಿ ವರ್ಷ ಎಣಿಸುವ ಸಿಬ್ಬಂದಿಗೆ ಸಂಬಳ ಏರಿಕೆ ಹಾಗಿರಲಿ ಸಿಗುವ ಸಂಬಳಕ್ಕೆ ಹೆಚ್ಚಿನ ಡ್ಯೂಟಿ ಮಾಡುವ ಪ್ರಸಂಗ ಎದುರಾಗಿದೆ. [ಒಂದೇ ವೀಸಾದಡಿ ಇಂಗ್ಲೆಂಡ್-ಐರ್ಲೆಂಡ್ ಪ್ರವಾಸ ಭಾಗ್ಯ]
ವಿಂಡ್ಸರ್ ಕೋಟೆ, ಬ್ರಿಟಿಷರ ಆಳ್ವಿಕೆಯ ವೈಭೋಗ ನೋಡಲು ಬರುವ ಪ್ರವಾಸಿಗರು, ಅತಿಥಿಗಳ ಯೋಗಕ್ಷೇಮ ಅಲ್ಲದೆ ಹಲವಾರು ಮಂದಿ ದ್ವಿಭಾಷಾ ತಜ್ಞರು, ಪ್ರಾಥಮಿಕ ಚಿಕಿತ್ಸೆ ನೀಡುವ ಸಿಬ್ಬಂದಿಗಳು ಇಲ್ಲಿದ್ದಾರೆ.

ಓವರ್ ಟೈಂ ಮಾಡಿದರೆ ಕೈತುಂಬ ಸಂಬಳ ಎಂಬ ಗಿಲಾಟು ಮತಿಗೆ ಸೋತು ಕಾರ್ಯ ನಿರ್ವಹಿಸಿದ ಸಿಬ್ಬಂದಿ ಈಗ ಬೆಸ್ತು ಬಿದ್ದಿದ್ದಾರೆ. ಪಬ್ಲಿಕ್ ಹಾಗೂ ಕಮರ್ಷಿಯಲ್ ಸರ್ವೀಸಸ್(ಪಿಸಿಎಸ್)ಯೂನಿಯನ್ ಗೆ ಇಲ್ಲಿನ 200 ಸಿಬ್ಬಂದಿಗಳ ಪೈಕಿ 120ಸಿಬ್ಬಂದಿ ಸೇರಿದ್ದು, ರಾಯಲ್ ಫ್ಯಾಮಿಲಿಯಿಂದ ನಷ್ಟವಾಗಿದೆ ಎಂದಿದ್ದಾರೆ. [ಇಂಗ್ಲೆಂಡಿನಲ್ಲಿ ಬೆಳಗಿದ ಬೆಂಗಳೂರಿನ ಬಾಲಕ]
ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿ ಸುದ್ದಿಯಾಗಿರುವುದು ರಾಯಲ್ ಫ್ಯಾಮಿಲಿಗೆ ಅಪಮಾನಕರ ಸಂಗತಿ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆ. [ಏನು ಸಾಧನೆ ಮಾಡಿದ್ದಾರಂತ ಇವರಿಗೆ ಸ್ಯಾಲರಿ ಹೈಕು?]
ಮಾ.31ರಿಂದ ಏ.14ರ ತನಕ ಈ ಬಗ್ಗೆ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯಲಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಿಬ್ಬಂದಿಗಳು ಮುಷ್ಕರ ಹೂಡಬೇಕಾಗುತ್ತದೆ ಎಂದು ನೌಕರರ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಾರ್ಕ್ ಸೆವೋಟ್ಕಾ ಹೇಳಿದ್ದಾರೆ. [ಸ್ಕಾಟ್ಲೆಂಡ್ ಒಂದು ಸ್ವತಂತ್ರ ದೇಶವಾಗಬೇಕೆ? NO]
ವಿಶ್ವದ ಅತ್ಯಂತ ಪುರಾತನ ಹಾಗೂ ವಿಶಾಲವಾದ ಕೋಟೆಯಾಗಿರುವ ವಿಂಡ್ಸರ್ ಕ್ಯಾಸಲ್ ವಾರ್ಷಿಕವಾಗಿ 1.1 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸುಮಾರು 17 ಮಿಲಿಯನ್ ಪೌಂಡ್ ನಿರ್ವಹಣಾ ವೆಚ್ಚ ತಗುಲುತ್ತದೆ. ಇದನ್ನು ರಾಯಲ್ ಕಲೆಕ್ಷನ್ ಟ್ರಸ್ಟ್ ಚಾರಿಟಿ ನೀಡುತ್ತಿದ್ದು, ಬ್ರಿಟನ್ನಿನ ಐತಿಹಾಸಿಕ ಸ್ಮಾರಕ, ಕೋಟೆಗಳ ನಿರ್ವಹಣೆ ಹೊಣೆ ಹೊತ್ತಿದೆ. (ಐಎಎನ್ಎಸ್)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications